ಬೆಂಗಳೂರು,ಜ.2- ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಕುರಿತ ಸಮೀಕ್ಷೆಯೊಂದು, ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ಗಳ ಮೇಲೆ ಜನಸಾಮಾನ್ಯರ ವಿಶ್ವಾಸವನ್ನು ಬಲವಾಗಿ ತೋರಿಸಿದೆ ಎಂದು ಹೇಳಿದ್ದು, ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡುತ್ತಿದ್ದ ಆರೋಪಗಳಿಗೆ ತಿರುಗೇಟು ನೀಡಿದೆ.
ಜ್ಞಾನ, ಮನೋಭಾವ ಮತ್ತು ಅಭ್ಯಾಸ ಕುರಿತ ನಾಗರಿಕರ ಸಮೀಕ್ಷೆಯು, ಶೇ,83.61ರಷ್ಟು ಜನರು ಇವಿಎಂಗಳನ್ನು ನಂಬುತ್ತಾರೆ ಎಂದು ಬಹಿರಂಗಪಡಿಸಿದೆ. ಒಟ್ಟಾರೆಯಾಗಿ, ಶೇ.69.39ರಷ್ಟು ಪ್ರತಿಕ್ರಿಯಿಸಿದವರು ಇವಿಎಂಗಳು ನಿಖರವಾದ ಫಲಿತಾಂಶಗಳನ್ನು ನೀಡುತ್ತವೆ ಎಂದು ಒಪ್ಪಿಕೊಂಡರೆ, ಶೇ.14.22ರಷ್ಟು ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ.
ಸಮೀಕ್ಷಾ ವರದಿ: ಈ ಸಮೀಕ್ಷೆಯು ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಜನರನ್ನು ಒಳಗೊಂಡಿತ್ತು. ವಿಭಾಗವಾರು ಮಾಹಿತಿ ಪ್ರಕಾರ, ಕಲಬುರಗಿಯಲ್ಲಿ ಇವಿಎಂಗಳು ವಿಶ್ವಾಸಾರ್ಹವಾಗಿವೆ ಎಂದು ಶೇ.83.24ರಷ್ಟು ಜನರು ಒಪ್ಪಿಕೊಂಡಿದ್ದು, 11.24% ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ. ಮೈಸೂರಿನಲ್ಲಿ ಶೇ.70.67ರಷ್ಟು ಜನರು ಒಪ್ಪಿಕೊಂಡಿದ್ದರೆ, ಶೇ. 17.92ರಷ್ಟು ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಶೇ.63.90ರಷ್ಟು ಜನರು ಒಪ್ಪಿಕೊಂಡಿದ್ದರೆ, ಶೇ.21.43ರಷ್ಟು ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ.
ಬೆಂಗಳೂರು ವಿಭಾಗದಲ್ಲಿ ಬಲವಾಗಿ ಒಪ್ಪಿಕೊಂಡವರ ಪ್ರಮಾಣ ಅತಿ ಕಡಿಮೆಯಾಗಿದ್ದರೂ (9.28%), ಶೇ.63.67ರಷ್ಟು ಜನರು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ತಟಸ್ಥ ಅಭಿಪ್ರಾಯಗಳು ಶೇ.15.67ರಷ್ಟಿದ್ದು, ಇದು ಇತರ ವಿಭಾಗಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ.
ಬಿಜೆಪಿ ತಿರುಗೇಟು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಭಾರತ ಚುನಾವಣಾ ಆಯೋಗದ ಮೇಲೆ ಇವಿಎಂಗಳನ್ನು ತಿರುಚಿದ ಮತ್ತು ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ಆರೋಪಿಸುತ್ತಾ ಬಂದಿದ್ದಾರೆ.
ಈ ಸಮೀಕ್ಷೆಯ ಫಲಿತಾಂಶಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಮ ಎಕ್್ಸ ಖಾತೆಯಲ್ಲಿ, ರಾಹುಲ್ ಗಾಂಧಿ ದೇಶಾದ್ಯಂತ ಒಂದೇ ಕಥೆಯನ್ನು ಹೇಳುತ್ತಾ ಬಂದಿದ್ದಾರೆ. ಭಾರತದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಇವಿಎಂಗಳು ನಂಬಲರ್ಹವಲ್ಲ. ನಮ ಸಂಸ್ಥೆಗಳನ್ನು ನಂಬಲಾಗುವುದಿಲ್ಲ. ಆದರೆ ಕರ್ನಾಟಕವು ಈಗ ಸಂಪೂರ್ಣ ವಿಭಿನ್ನ ಕಥೆಯನ್ನು ಹೇಳಿದೆ ಎಂದಿದ್ದಾರೆ.
ಜನರು ಚುನಾವಣೆಗಳನ್ನು ನಂಬುತ್ತಾರೆ. ಇವಿಎಂಗಳನ್ನು ನಂಬುತ್ತಾರೆ ಮತ್ತು ಜನರು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಂಬುತ್ತಾರೆ ಎಂದು ಈ ಸಮೀಕ್ಷೆಯು ಹೇಳಿದೆ. ಇದು ಕಾಂಗ್ರೆಸ್ ಮುಖಕ್ಕೆ ಹೊಡೆದಂತಿದೆ ಎಂದು ಬಿಜೆಪಿ ಹೇಳಿದೆ.
