ಅಹಮದಾಬಾದ್, ಜೂ.4– ಪಂಜಾಬ್ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ನಿಯಮ ಮೀರಿದ ವಿರಾಟ್ ಕೊಹ್ಲಿ ಅವರಿಗೆ ಎಚ್ಚರಿಕೆ ನೀಡದ ಅಂಪೈರ್ಗಳ ವಿರುದ್ಧ ಮಾಜಿ ಕ್ರಿಕೆಟಿಗ,
ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಹರಿಹಾಯ್ದಿದ್ದಾರೆ.
ವಿರಾಟ್ ಕೊಹ್ಲಿ ಹೆಚ್ಚು ಬೌಂಡರಿ, ಸಿಕ್ಸ್ ಹೊಡೆಯಲು ಹೋಗದೇ ವಿಕೆಟ್ ಉಳಿಸುವ ಮೂಲಕ ಸಿಂಗಲ್, ಡಬಲ್ ರನ್ ಓಡುತ್ತಿದ್ದರು. 12ನೇ ಓವರ್ನಲ್ಲಿ ಚಹಲ್ ಎಸೆದ ಎಸೆತವನ್ನು ಕೊಹ್ಲಿ ಲಾಂಗ್ ಆನ್ ಕಡೆಗೆ ತಳ್ಳಿದರು. ಕೊಹ್ಲಿ ಮತ್ತು ಲಿವಿಂಗ್ಸ್ಟೋನ್ ಎರಡು ರನ್ ಓಡಿದರು. ರನ್ ಓಡುವಾಗ ಕೊಹ್ಲಿ ಪಿಚ್ ಮೇಲೆ ನೇರವಾಗಿ ಓಡಿದ್ದರು.
ಈ ವಿಚಾರವನ್ನು ಪ್ರಸ್ತಾಪ ಮಾಡಿದ ಗವಸ್ಕಾರ್, ಕೊಹ್ಲಿ ವಿಕೆಟ್ಗಳ ಮಧ್ಯೆ ವೇಗವಾಗಿ ಓಡುತ್ತಾರೆ. ಚೆಂಡನ್ನು ಹೊಡೆದ ತಕ್ಷಣವೇ ಇದರಲ್ಲಿ 2 ರನ್ ಬರುತ್ತದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಹೇಳಿದರು. ಮತ್ತೆ ತಮ್ಮ ವಿವರಣೆಯನ್ನು ಮುಂದುವರಿಸಿ, ಯಾವೊಬ್ಬ ಅಂಪೈರ್ ಕೊಹ್ಲಿಗೆ ಏನು ಹೇಳುವುದಿಲ್ಲ. ಅವರು ಮತ್ತೆ ಪಿಚ್ ಮೇಲೆ ನೇರವಾಗಿ ಓಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತೆ ಬ್ಯಾಟಿಂಗ್ ಮಾಡಬೇಕಿದೆ ಎಂದು ಎಂದು ಹೇಳುವ ಮೂಲಕ ಎಚ್ಚರಿಕೆ ನೀಡದ ಅಂಪೈರ್ಗಳನ್ನು ಟೀಕಿಸಿದರು.
ಕ್ರಿಕೆಟ್ನಲ್ಲಿ ರನ್ ಓಡುವಾಗ ಬ್ಯಾಟರ್ಗಳು ಪಿಚ್ ಮೇಲೆ ಓಡುವಂತಿಲ್ಲ, ಪಿಚ್ ಮೇಲೆ ಓಡಿದ್ದರೆ ಅದು ಹಾಳಾಗಿ ಬೌಲಿಂಗ್ಗೆ ಸಮಸ್ಯೆ ಆಗುತ್ತದೆ. ಒಂದು ವೇಳೆ ಬ್ಯಾಟರ್ಗಳು ಪಿಚ್ ಮೇಲೆ ಓಡಿದರೆ ಅಂಪೈರ್ಗಳು ಎಚರಿಕೆ ನೀಡುತ್ತಾರೆ.