ಬೆಂಗಳೂರು,ಆ.4- ಬಹುನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ನವೆಂಬರ್ 1ರೊಳಗೆ ಪೂರ್ಣಗೊಳಿಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಮುಂದುವರೆದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನವೆಂಬರ್ 1ರೊಳಗೆ ಬಿಬಿಎಂಪಿಯ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅದಾದ ನಂತರ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕೆಂದು ಆಯೋಗಕ್ಕೆ ಸೂಚಿಸಿ ಮುಂದಿನ ಅರ್ಜಿ ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.
ಕ್ಷೇತ್ರ ಪುನರ್ ವಿಂಗಡಣೆಗೆ ಕನಿಷ್ಠ 60 ದಿನದಿಂದ 90 ದಿನ ಬೇಕಾಗುತ್ತದೆ. ಹೀಗಾಗಿ ನ್ಯಾಯಾಲಯ ಸ್ವಲ್ಪ ದಿನ ಹೆಚ್ಚಿನ ಸಮಯ ಅವಕಾಶವನ್ನು ನೀಡಬೇಕೆಂದು ಚುನಾವಣಾ ಆಯೋಗದ ಪರ ವಕೀಲ ಕೆ.ಎನ್.ಪಣೀಂದ್ರ ಮನವಿ ಮಾಡಿದರು.
ಆದರೆ ಇದನ್ನು ಒಪ್ಪದ ನ್ಯಾಯಾಲಯ ಪ್ರತಿ ಸಂದರ್ಭದಲ್ಲೂ ಈ ರೀತಿ ಸಬೂಬು ಹೇಳಿಕೊಂಡೇ ಚುನಾವಣೆ ಮುಂದೂಡುತ್ತಾ ಬಂದಿದ್ದೀರಿ. ಇನ್ನು ಸಮಯ ಅವಕಾಶ ಕೊಡಲು ಆಗುವುದಿಲ್ಲ. ನ.1ರೊಳಗೆ ಬಿಬಿಎಂಪಿಯ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮುಂದಿನ ಅರ್ಜಿ ವಿಚಾರಣೆ ವೇಳೆ ಇಲ್ಲಸಲ್ಲದ ಕಾರಣಗಳನ್ನು ಹೇಳಬಾರದೆಂದು ಪೀಠ ಸೂಚನೆ ಕೊಟ್ಟಿತು.
- ಜಿಎಸ್ಟಿ ಪರಿಷ್ಕರಣೆ ಬೆನ್ನಲ್ಲೇ ನಂದಿನಿ ಉತ್ಪನ್ನಗಳ ದರ ಇಳಿಕೆ ಸಾಧ್ಯತೆ..?
- ಅಳಂದ ಮತಗಳ್ಳತನದ ಕುರಿತು ಚುನಾವಣಾ ಆಯೋಗದಿಂದ ಸಮರ್ಪಕ ಸ್ಪಷ್ಟನೆ ಸಿಕ್ಕಿಲ್ಲ : ಪ್ರಿಯಾಂಕ್ ಖರ್ಗೆ
- ಗದಗ : ಭೀಕರ ಅಪಘಾತದಲ್ಲಿ ಇಬ್ಬರು ಕಾನ್ಸ್ಟೇಬಲ್ಗಳು ಸೇರಿ ಮೂವರ ದುರ್ಮರಣ
- ಕಾಂಗ್ರೆಸ್ ಸರ್ಕಾರದ ಜಾತಿ ರಾಜಕೀಯಕ್ಕೆ ‘ಕೈ’ಕಮಾಂಡ್ ಮಧ್ಯ ಪ್ರವೇಶ, ಹೆಚ್ಚಿದ ಕುತೂಹಲ
- ನೀರು, ಹಾಲು, ಮೆಟ್ರೋ, ಆಸ್ತಿ-ಕಸದ ತೆರಿಗೆ ಹೆಚ್ಚಿಸಿ ಬೆಂಗಳೂರಿಗೆ ಯಾವ ಸೌಕರ್ಯಗಳನ್ನು ಕಲ್ಪಿಸಿದ್ದೀರಿ..? : ನಿಖಿಲ್ ಪ್ರಶ್ನೆ