Tuesday, September 17, 2024
Homeರಾಜಕೀಯ | Politicsಸದನಕ್ಕೆ ಸಚಿವರು ಚಕ್ಕರ್ : 'ವರ್ಕ್‌ ಫ್ರಂ ಅಸೆಂಬ್ಲಿ' ಮಾಡಿ ಎಂದು ಸುರೇಶ್‌ಕುಮಾರ್‌ ಅಸಮಾಧಾನ

ಸದನಕ್ಕೆ ಸಚಿವರು ಚಕ್ಕರ್ : ‘ವರ್ಕ್‌ ಫ್ರಂ ಅಸೆಂಬ್ಲಿ’ ಮಾಡಿ ಎಂದು ಸುರೇಶ್‌ಕುಮಾರ್‌ ಅಸಮಾಧಾನ

ಬೆಂಗಳೂರು,ಜು.18- ಕೋವಿಡ್‌ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಂ ಜಾರಿಯಲ್ಲಿತ್ತು. ಈಗ ಸಚಿವರು ಸದನಕ್ಕೆ ಬಾರದಿದ್ದರೆ ವರ್ಕ್‌ ಫ್ರಂ ಅಸೆಂಬ್ಲಿ ಮಾಡಿ ಎಂದು ಬಿಜೆಪಿ ಹಿರಿಯ ಶಾಸಕ ಎಸ್‌‍.ಸುರೇಶ್‌ಕುಮಾರ್‌ ವಿಧಾನಸಭೆಯಲ್ಲಿ ಒತ್ತಾಯಿಸಿದರು.ಇಂದು ಬೆಳಿಗ್ಗೆ ಸದನದ ಸಮಾವೇಶಗೊಂಡಾಗ ಸಚಿವರ ಗೈರುಹಾಜರಿ ಎದ್ದುಕಾಣುವುದನ್ನು ಗಮನಿಸಿದ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿ ಮತ್ತೆ ಸದನಕ್ಕೆ ಆಗಮಿಸಿದಾಗಲೂ ಸಚಿವರ ಹಾಜರಾತಿ ಸುಧಾರಿಸಿರಲಿಲ್ಲ.

ಇದನ್ನು ಗಮನಿಸಿದ ಸುರೇಶ್‌ಕುಮಾರ್‌, ಒಂದು ಗಂಟೆ ಕಳೆದರೂ ಸಚಿವರು ಸದನಕ್ಕೆ ಬಂದಿಲ್ಲ. ಹೀಗಾಗಿ ವರ್ಕ್‌ ಫ್ರಂ ಅಸೆಂಬ್ಲಿ ಮಾಡಿದರೆ ನಾವು ಅಲ್ಲಿಂದಲೇ ಕೇಳುತ್ತೇವೆ. ಅವರು ಉತ್ತರವನ್ನು ನೀಡಲಿ ಎಂದರು.

ಮತ್ತೊಬ್ಬ ಶಾಸಕ ಅರವಿಂದ್‌ ಬೆಲ್ಲದ್‌ ಮಾತನಾಡಿ, ನೀವು ಸಚಿವರಿಗೆ ಗೈರುಹಾಜರಾಗಲು ಅನುಮತಿ ಕೊಟ್ಟಿದ್ದರೆ ಸದನವನ್ನು ಮುಂದೂಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ನಾವು ಪ್ರಚಾರಕ್ಕೆ ಸಭಾತ್ಯಾಗ ಮಾಡಿಲ್ಲ. ನೀವು ವಿಪಕ್ಷದಲ್ಲಿದ್ದಾಗ ಮಾಡಿರಲಿಲ್ಲವೇ? ಎಂದು ಆಡಳಿತ ಪಕ್ಷವನ್ನುತರಾಟೆಗೆ ತೆಗೆದುಕೊಂಡರು.

ಮೊದಲ ಸಾಲಿನಲ್ಲಿ 10 ಸಚಿವರು ಇರಬೇಕು, ಮೂರನೇ ಒಂದು ಭಾಗ ಇಲ್ಲವೇ ನಾಲ್ಕು ಸಚಿವರಿರಬೇಕು. ಎರಡನೇ ಸಾಲಿನಲ್ಲಿ 15 ಸಚಿವರಲ್ಲಿ ಯಾರೂ ಇಲ್ಲ. ಈಗಷ್ಟೇ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಬಂದರು. ಮುಖ್ಯಮಂತ್ರಿ ಬಂದರೆ ಒಳ್ಳೆಯದು. 3 ಜನ ಸಚಿವರಿದ್ದರೂ ನಾವು ಚರ್ಚೆ ಪ್ರಾರಂಭಿಸುತ್ತೆವೆ ಎಂದು ಹೇಳಿದರು.ಅಲ್ಲಿಗೆ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಈ ಚರ್ಚೆಗೆ ತೆರೆ ಎಳೆದು ಸದನವನ್ನು ಮುಂದುವರೆಸಿದರು.

RELATED ARTICLES

Latest News