ಕೇದಾರನಾಥ್ ಬಳಿ ಹೆಲಿಕಾಫ್ಟರ್ ಪತನ, ಇಬ್ಬರು ಪೈಲೆಟ್‍ಗಳು ಸೇರಿ 7 ಮಂದಿ ಸಾವು

ಕೇದಾರ್‍ನಾಥ್,ಅ.18- ಯಾತ್ರಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಕಣಿವೆ ಪ್ರದೇಶಗದ ಲ್ಲಿ ಹೆಲಿಕಾಫ್ಟರ್ ಪತನಗೊಂಡು ಇಬ್ಬರು ಪೈಲೆಟ್‍ಗಳು ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಕೇದಾರ್‍ನಾಥ್ ಸಮೀಪದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಬೆಟ್ಟದ ತಪ್ಪಲಿನ ಪ್ರಪಾತದಲ್ಲಿ ಹೆಲಿಕಾಫ್ಟರ್ ಅವಶೇಷಗಳು ಪತ್ತೆಯಾಗಿದು,್ದ ಅದರಲ್ಲಿದ್ದವರು ಪತನ ಸಂದರ್ಭದಲ್ಲಿ ಸಂಭವಿಸಿದ ಬೆಂಕಿ ಜ್ವಾಲೆಯಲ್ಲಿ ದಹನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹವಾಮಾನ ವೈಫಲ್ಯತೆದಿಂದ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಕೇದಾರ್‍ನಾಥ್‍ನಿಂದ ಸುಮಾರು 2ಕಿ.ಮೀ. ದೂರದಲ್ಲಿ ಈ ಅನಾಹುತ ಸಂಭವಿಸಿದೆ. ಘಟನೆ ನಡೆದಾಗ […]