ಕಳವು ಮಾಡಿದ್ದ ಬೈಕ್ನಲ್ಲಿ ನೈಟ್ ರೌಂಡ್ಸ್ : ಮೊಬೈಲ್ ದೋಚುತ್ತಿದ್ದ ಮೂವರ ಬಂಧನ

ಬೆಂಗಳೂರು, ಡಿ. 8- ಕಳವು ಮಾಡಿದ ದ್ವಿಚಕ್ರ ವಾಹನದಲ್ಲಿ ರಾತ್ರಿ ವೇಳೆ ಸುತ್ತಾಡಿ ಒಂಟಿಯಾಗಿ ಓಡಾಡುವ ವ್ಯಕ್ತಿಗಳ ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪವನ್ಕುಮಾರ್, ಗೌತಮ್ ಮತ್ತು ರಂಗನಾಥ್ ಬಂತ ಆರೋಪಿಗಳು. ಇವರುಗಳಿಂದ 6.5 ಲಕ್ಷ ರೂ. ಮೌಲ್ಯದ 21 ವಿವಿಧ ಕಂಪೆನಿಯ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಮುಂಡಿಪುರದ ನಿವಾಸಿಯೊಬ್ಬರು ತಮ್ಮ ಮನೆಯಿಂದ ಹೊರಬಂದು ಸ್ವಲ್ಪ ದೂರ ನಡೆದುಕೊಂಡು ಹೋಗುತ್ತಿದ್ದಾಗ ಒಂದೇ ಬೈಕ್ನಲ್ಲಿ ಬಂದ ಮೂವರು ಇವರನ್ನು ಹಿಂಬಾಲಿಸಿಕೊಂಡು ಹೋಗಿ 20 […]
ಲಾಡ್ಜ್ ಗ್ರಾಹಕರನ್ನು ದೋಚುತ್ತಿದ್ದ ಆರೋಪಿಗಳ ಸೆರೆ
ಮೈಸೂರು, ಜು.3- ಲಾಡ್ಜ್ನಲ್ಲಿ ಬರುವಂತಹ ಗ್ರಾಹಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಜು.19ರಂದು ನಗರದ ಲಕ್ಷ್ಮೀವಿಲಾಸ ರಸ್ತೆಯಲ್ಲಿರುವ ರಾಜ್ ಮಹಲ್ ಡಿಲೆಕ್ಸ್ ಲಾಡ್ಜ್ ನಲ್ಲಿ ಚಿನ್ನ, ಬೆಳ್ಳಿ, ಆಭರಣಗಳು ಹಾಗೂ ನಗದು ಹಣ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅದರಂತೆ ಕಳೆದ ಜು. 26ರಂದು ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದು, ಅವರಿಂದ 30 ಲಕ್ಷ ರೂ. ಮೌಲ್ಯದ 621 ಗ್ರಾಂ ಚಿನ್ನಾಭರಣ, 350 ಗ್ರಾಂ […]
ಮನೆ ಕೆಲಸಕ್ಕೆ ಸೇರಿ ಚಿನ್ನಾಭರಣ ದೋಚಿದ್ದ ಮುಂಬೈನ ಮೂವರು ಕಳ್ಳಿಯರು ಸೆರೆ
ಬೆಂಗಳೂರು,ಜು.11-ಫೇಸ್ಬುಕ್ನ ಪಬ್ಲಿಕ್ ಗ್ರೂಪ್ನಲ್ಲಿ ನಕಲಿ ಖಾತೆ ತೆರೆದು ನಕಲಿ ವಿವರಗಳನ್ನು ನೀಡುವ ಮೂಲಕ ಮನೆಕೆಲಸಗಾರರು ಲಭ್ಯವಿದ್ದಾರೆಂಬ ಜಾಹಿರಾತು ನೀಡಿ ನಂತರ ಮನೆಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಮುಂಬೈನ ಮೂವರು ಮಹಿಳೆಯರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಪ್ರಿಯಾಂಕ ರಾಜೇಶ್ ಮೊಗ್ರೆ(29), ಮಹಾದೇವಿ(26) ಮತ್ತು ನವೀಮುಂಬೈನ ವನಿತ(37) ಬಂಧಿತ ಮಹಿಳೆಯರು. ಇವರಿಂದ ಬಂಗಾರದ ಒಡವೆಗಳು ಹಾಗೂ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ನಿವಾಸಿ ಸುಬ್ಬಲಕ್ಷ್ಮಿ ಎಂದು ಸುಳ್ಳು ವಿವರಗಳನ್ನು ನೀಡಿ ಅರವಿಂದ ಎಂಬುವರ […]