“ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗಗಳು”

ವಿಶ್ವಸಂಸ್ಥೆ,ಮಾ.8-ಮಹಿಳೆಯರು, ಶಾಂತಿ ಮತ್ತು ಭದ್ರತೆಯ ಕುರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪಿಸಿರುವ ಪಾಕ್ ವಿದೇಶಾಂಗ ಸಚಿವರ ವಿರುದ್ಧ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.ಜಮ್ಮು ಮತ್ತು ಕಾಶ್ಮೀರದ ಕುರಿತಂತೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಹೇಳಿಕೆ ಆಧಾರರಹಿತ ಹಾಗೂ ರಾಜಕೀಯ ಪ್ರೇರಿತ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ತಿಳಿಸಿದ್ದಾರೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್ ‘ಮಹಿಳೆಯರು, ಶಾಂತಿ ಮತ್ತು ಭದ್ರತೆ’ ಕುರಿತು ಮುಕ್ತ ಚರ್ಚೆಯಲ್ಲಿ ಮಾತನಾಡಿದ […]
ಜಾಗತೀಕ ಉಗ್ರ ಪಟ್ಟಿಗೆ ಮಕ್ಕಿ

ನ್ಯೂಯಾರ್ಕ್,ಜ.17- ಪಾಕ್ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತೀಕ ಭಯೋತ್ಪಾದಕ ಎಂದು ಪರಿಗಣಿಸಿದೆ. ಲಷ್ಕರ್-ಎ-ತೊಯ್ಬಾ ಉಗ್ರನಾಗಿರುವ ಮಕ್ಕಿಯನ್ನು ಜಾಗತೀಕ ಭಯೋತ್ಪಾದಕ ಎಂದು ಪರಿಗಣಿಸುವಂತೆ ಕಳೆದ ವರ್ಷ ಭಾರತ ಮಾಡಿಕೊಂಡಿದ್ದ ಮನವಿಗೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಚೀನಾದ ಈ ಇಬ್ಬಗೆ ನೀತಿ ವಿರುದ್ಧ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ, ಇದೀಗ ಭಾರತದ ಬೇಡಿಕೆಗೆ ಮನ್ನಣೆ ದೊರೆತಿದ್ದು, ಮಕ್ಕಿಯನ್ನು ಜಾಗತೀಕ ಉಗ್ರ ಎಂದು ಪರಿಗಣಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಮ್ಮತಿಸಿದೆ. ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಯುವಕರನ್ನು […]
ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಭಾರತ ವಿರೋಧ

ವಿಶ್ವಸಂಸ್ಥೆ,ಡಿ.10- ನಿರ್ಬಂಧಗಳ ಹೊರತಾಗ ಮಾನವೀಯ ನೆರವು ನೀಡುವ ಪ್ರಯತ್ನಗಳನ್ನು ಪುಷ್ಟೀಕರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯವನ್ನು ವಿರೋಧಿಸಿ ಭಾರತ ಮತದಾನದಲ್ಲಿ ತಟಸ್ಥವಾಗಿ ಉಳಿದಿದೆ.ಅಮೆರಿಕ ಮತ್ತು ಇಸ್ರೇಲ್ ದೇಶಗಳಿಂದ ಮಂಡನೆಯಾದ ನಿರ್ಣಯ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚಿಸಲಾಗಿದೆ. 15 ಸದಸ್ಯ ರಾಷ್ಟ್ರಗಳ 14 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ. ಭಾರತ ತಟಸ್ಥವಾಗಿ ಉಳಿದಿದೆ.ಆದರೆ ಚರ್ಚೆಯಲ್ಲಿ ಭಾಗವಹಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ರುಚಿರಕಾಂಬೋಜ್ ಅವರು ಮಾನವೀಯ ನೆರವನ್ನು ದುರುಪಯೋಗಪಡಿಸಿ ಕೊಂಡು ಉಗ್ರ ಸಂಘಟನೆಗಳು ಬಲಿಷ್ಠ ಗೊಳ್ಳುತ್ತವೆ […]