Sunday, September 8, 2024
Homeರಾಷ್ಟ್ರೀಯ | Nationalತೆಲಂಗಾಣ : ಹನುಮ ಮೆರವಣಿಗೆಯಲ್ಲಿ ಚಾಕು ಹಿಡಿದು ನೃತ್ಯ, ಪೊಲೀಸರು-ಭಕ್ತರ ನಡುವೆ ಚಕಮಕಿ, ಕರೀಂನಗರ ಉದ್ವಿಗ್ನ

ತೆಲಂಗಾಣ : ಹನುಮ ಮೆರವಣಿಗೆಯಲ್ಲಿ ಚಾಕು ಹಿಡಿದು ನೃತ್ಯ, ಪೊಲೀಸರು-ಭಕ್ತರ ನಡುವೆ ಚಕಮಕಿ, ಕರೀಂನಗರ ಉದ್ವಿಗ್ನ

ಕರೀಂನಗರ,ಮೇ.26- ಕರೀಂನಗರದಲ್ಲಿ ತಡರಾತ್ರಿ ಹನುಮ ಭಕ್ತರ ಮೆರವಣಿಗೆ ಸಂದರ್ಭದಲ್ಲಿ ಯುವಕನೋಬ್ಬ ಕೈಯಲ್ಲಿ ಚಾಕು ಹಿಡಿದು ಡ್ಯಾನ್ಸ್ ಮಾಡಲು ಮುಂದಾದ ಘಟನೆ ಹಿನ್ನೆಲೆಯಲ್ಲಿ ಇಡಿ ಪ್ರದೇಶ ಉದ್ವಿಗ್ನಗೊಂಡಿದೆ.

ರಾತ್ರಿ ಹನುಮ ಭಕ್ತರು ನಡೆಸುತ್ತಿದ್ದ ಮೆರವಣಿಗೆ ಜಿಲ್ಲಾಸ್ಪತ್ರೆ ಬಳಿಯ ಮಂಚೇರಿಯಲ್‌ ಚೌಕ್‌ ತಲುಪಿದಾಗ ಯುವಕನೊಬ್ಬ ಕೈಯಲ್ಲಿ ಡ್ಯಾನ್‌್ಸ ಮಾಡಲು ಮುಂದಾದ ಘಟನೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಹನುಮ ರ್ಯಾಲಿ ಸಂದರ್ಭದಲ್ಲಿ ಕೈಯಲ್ಲಿ ಚಾಕು ಹಿಡಿದು ನೃತ್ಯ ಮಾಡಿದ ವ್ಯಕ್ತಿಯನ್ನು ಜಯದೇವ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಯುವಕನನ್ನು ಠಾಣೆಗೆ ಕರೆದೊಯ್ಯಲು ಪೊಲೀಸರು ಮುಂದಾದಾಗ ಅವರನ್ನು ಭಕ್ತರು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಭಕ್ತರ ನಡುವೆ ವಾಗ್ವಾದ ನಡೆಯಿತು. ಆದರೂ ಪೊಲೀಸರು ಯುವಕರನ್ನು ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಭಕ್ತರು ಪೊಲೀಸ್‌‍ ವಾಹನದ ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದಾರೆ.

ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಭಕ್ತರು ಮಂಚೇರಿಯಲ್‌ ಚೌಕ್‌ನಲ್ಲಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಧರಣಿ ನಿರತ ಜನರನ್ನು ಸಮಾಧಾನಪಡಿಸಲು ಮುಂದಾದರೂ ಆ ಸಂದರ್ಭದಲ್ಲಿ ಕೆಲವರು ಭಕ್ತರ ಪ್ರತಿಭಟನೆಗೆ ಬೆಂಬಲ ನೀಡಿದಾಗ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿದರು.

ಈ ವಿಷಯ ತಿಳಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೂರು ಪಟ್ಟಣ ಪೊಲೀಸ್‌‍ ಠಾಣೆಗೆ ದೊಡ್ಡ ಪ್ರಮಾಣದಲ್ಲಿ ಜಮಾಯಿಸಿ, ಪೊಲೀಸರು ಬಂಧಿಸಿರುವ ಹನುಮಂತ ಭಕ್ತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಪೊಲೀಸ್‌‍ ಅಧಿಕಾರಿಗಳು ಭಾರೀ ಬಂದೋಬಸ್ತ್‌ ಮಾಡಿ ಲಘು ಲಾಠಿ ಪ್ರಹಾರ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕೆಲವು ಬಿಜೆಪಿ ಕಾರ್ಯಕರ್ತರು ಮತ್ತು ಭಕ್ತರನ್ನು ಪಿಟಿಸಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಪೊಲೀಸ್‌‍ ವಾಹನಕ್ಕೆ ಹಾನಿ ಮಾಡಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೆಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಂಡಿ ಸಂಜಯ್‌ಕುಮಾರ್‌ ಅವರು, ಭಕ್ತಾದಿಗಳ ಮೇಲೆ ಪ್ರಚೋದನೆ ನೀಡುವ ಮೂಲಕ ಲಾಠಿಚಾರ್ಜ್‌ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಮಸ್ಯೆ ಬಗೆಹರಿಸಬೇಕಾದ ಪೊಲೀಸ್‌‍ ಅಧಿಕಾರಿಗಳೇ ಸಮಸ್ಯೆ ಸಷ್ಟಿಸಿದ್ದಾರೆ ಎಂದು ಅವರು ಆರೋಪಿಸಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.ಈ ಕುರಿತಂತೆ ಡಿಜಿಪಿ ಜತೆ ಮಾತನಾಡಿದ ಸಂಜಯ್‌ಕುಮಾರ್‌ ಅವರು ಹನುಮ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

Latest News