ಕ್ಯಾಲಿಫೋರ್ನಿಯಾ,ಸೆ.19– ತೆಲಂಗಾಣದ ಮೆಹಬೂಬ್ನಗರ ಜಿಲ್ಲೆಯ 29 ವರ್ಷದ ವ್ಯಕ್ತಿಯೊಬ್ಬ ತನ್ನ ರೂಮ್ಮೇಟ್ ಜೊತೆ ನಡೆದ ಜಗಳದಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದಿರುವ ಘಟನೆ ನಡೆದಿದೆ. ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ ವೇರ್ ವೃತ್ತಿಪರರಾಗಿದ್ದ ಮೊಹಮದ್ ನಿಜಾಮುದ್ದೀನ್ ಅವರನ್ನು ಸೆ.3 ರಂದು ಸಾಂತಾ ಕ್ಲಾರಾ ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅವರ ತಂದೆ ಮೊಹಮದ್ ಹಸ್ನುದ್ದೀನ್, ತಮ ಮಗನ ಸ್ನೇಹಿತನ ಮೂಲಕ ಸಾವಿನ ಬಗ್ಗೆ ತಿಳಿದುಕೊಂಡಿದ್ದಾರೆ. ಕೊಲೆಗೆ ನಿಖರವಾದ ಕಾರಣಗಳು ಸ್ಪಷ್ಟವಾಗಿಲ್ಲ.ಹಸ್ನುದ್ದೀನ್ ಪ್ರಕಾರ, ರೂಮ್ಮೇಟ್ನೊಂದಿಗಿನ ಘರ್ಷಣೆಯು ಒಂದು ಸಣ್ಣ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು. ಗುರುವಾರ ಬೆಳಿಗ್ಗೆಯಷ್ಟೇ ಗುಂಡಿನ ದಾಳಿಯ ಬಗ್ಗೆ ತನಗೆ ತಿಳಿಸಲಾಯಿತು. ಅಲ್ಲದೇ, ನಾನು ನನ್ನ ಮಗನಿಗೆ ಹಲವಾರು ಬಾರಿ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಅವನು ಕೊಲ್ಲಲ್ಪಟ್ಟಿದ್ದಾನೆ ಎಂದು ಬಹಳ ದಿನದ ನಂತರ ನಮಗೆ ತಿಳಿಯಿತು ಎಂದು ಹುಸ್ನುದ್ದೀನ್ ತಿಳಿಸಿದ್ದಾರೆ.
ಅಮೆರಿಕದ ಪೊಲೀಸರು ಹೇಳಿದ್ದೇನು? :
ಸೆ.3ರಂದು ಬೆಳಿಗ್ಗೆ 6:18 ರ ಸುಮಾರಿಗೆ ಘಟನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಚಾಕುವಿನಿಂದ ಶಸ್ತ್ರಸಜ್ಜಿತನಾದ ಶಂಕಿತನನ್ನು ಎದುರಿಸಿದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸ್ನೇಹಿತ ಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ಮುಖ್ಯಸ್ಥ ಕೋರಿ ಮಾರ್ಗನ್ ಅವರ ಪ್ರಕಾರ, ಅಧಿಕಾರಿಗಳು ಬರುವ ಮೊದಲೇ ಇಬ್ಬರು ರೂಮ್ಮೇಟ್ಗಳ ನಡುವಿನ ಜಗಳ ಹಿಂಸಾಚಾರಕ್ಕೆ ಕಾರಣವಾಯಿತು. ನಿಜಾಮುದ್ದೀನ್ ಚಾಕು ಹಿಡಿದು ಮತ್ತೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಗ ಅವರು ಮನೆಗೆ ಬಲವಂತವಾಗಿ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಮ ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಅಧಿಕಾರಿಯ ಕ್ರಮಗಳು ಹೆಚ್ಚಿನ ಹಾನಿಯನ್ನು ತಡೆಗಟ್ಟಿವೆ ಮತ್ತು ಕನಿಷ್ಠ ಒಂದು ಜೀವವನ್ನು ಉಳಿಸಿವೆ ಎಂದು ನಾವು ನಂಬುತ್ತೇವೆ ಎಂದು ಮಾರ್ಗನ್ ಹೇಳಿದರು. ಘಟನಾ ಸ್ಥಳದಿಂದ ಎರಡು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಹಾಯಕ್ಕಾಗಿ ಕುಟುಂಬದವರ ಮನವಿ :
ಮೊಹಮದ್ ಹಸ್ನುದ್ದೀನ್ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು, ತಮ ಮಗನ ಮೃತದೇಹವನ್ನು ಮನೆಗೆ ತರಲು ತುರ್ತು ಸಹಾಯವನ್ನು ಕೋರಿದ್ದಾರೆ. ನನ್ನ ಮಗ (ನಿಜಾಮುದ್ದೀನ್) ಸಾಂತಾ ಕ್ಲಾರಾ ಪೊಲೀಸರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು ಮತ್ತು ಅವರ ಮೃತದೇಹಗಳು ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದ ಯಾವುದೋ ಆಸ್ಪತ್ರೆಯಲ್ಲಿವೆ ಎಂದು ನನಗೆ ತಿಳಿಯಿತು. ಪೊಲೀಸರು ಅವರನ್ನು ಏಕೆ ಗುಂಡಿಕ್ಕಿ ಕೊಂದರು ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ತಂದೆಯ ಪ್ರಕಾರ, ನಿಜಾಮುದ್ದೀನ್ ಮತ್ತು ಅವರ ರೂಮ್ಮೇಟ್ ನಡುವಿನ ಜಗಳವು ಒಂದು ಸಣ್ಣ ವಿಷಯಕ್ಕೆ ಸಂಬಂಧಿಸಿತ್ತು. ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವು ತ್ವರಿತವಾಗಿ ಮಧ್ಯಪ್ರವೇಶಿಸಿ ಮೃತದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ಮೆಹಬೂಬ್ ನಗರಕ್ಕೆ ಹಿಂತಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಕುಟುಂಬವು ನೆರವು ಕೋರಿದೆ.