ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದ ನಾನ ವಿಭಾಗದಲ್ಲಿ ಕೆಲಸ ಮಾಡಿ ಕೊನೆಗೂ ಹೀರೋ ಆದವನ ಕಥೆಯೇ ಠಾಣೆ. ಇದು ಪ್ರವೀಣ್ ಕನಸಾಗಿದ್ದರು, ನಿರ್ಮಾಪಕಿಯಾಗಿ ಗಾಯತ್ರಿ ಅವರು ಮಾಡಿದ ತ್ಯಾಗ ಹೆಚ್ಚಾಗಿದೆ. ಇಲ್ಲಿ ತ್ಯಾಗ ಬಲಿದಾನದ ಮಾತಲ್ಲ. ಸಿನಿಮಾ ಹೇಗಿದೆ ಅನ್ನೋದಷ್ಟೇ ಬಹಳ ಮುಖ್ಯ. ವಾರಕ್ಕೆ ರಿಲೀಸ್ ಆಗುವ ಅತಿ ಹೆಚ್ಚು ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅದೆಷ್ಟೋ ಸಿನಿಮಾಗಳು ವೀಕ್ ಆಗುತ್ಯವೆ. ಆದರೆ ಠಾಣೆ ಸಿನಿಮಾ ಆ ರೀತಿಯಲ್ಲ.
ಭಗತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹೊಸಬರ ಪ್ರಯತ್ನ ಎಂದು ಎಲ್ಲಿಯೂ ಅನ್ನಿಸೋದಿಲ್ಲ. ಲವ್ ಇದೆ, ಡ್ರಗ್ಸ್ ಇದೆ, ತನ್ನವರಿಗಾಗಿ ಮಿಡಿಯುವ ನಾಯಕನ ಕಥೆ ಇದೆ, ರಾಜಕಾರಣಿಗಳ ಸ್ಚಾರ್ಥವಿದೆ. ಈ ಎಲ್ಲದನ್ನು ಅದ್ಭುತವಾಗಿ ಎಣೆಯುವ ಕೆಲಸವನ್ನು ನಿರ್ದೇಶಕ ಭಗತ್ ರಾಜ್ ಮಾಡಿದ್ದಾರೆ. ಮಾನಸ ಹೊಳ್ಳ ಅವರ ಸಂಗೀತ ಮತ್ತಷ್ಟು ಪುಷ್ಠಿ ನೀಡಿದೆ. ಹಾಡುಗಳು, ಬ್ಯಾಗ್ರೌಂಡ್ ಮ್ಯೂಸಿಕ್, ಬಿಟ್ ಗಳು ಗಮನ ಸೆಳೆಯುತ್ತಿವೆ.
ಹೀರೋ ಅಂದ್ರೇನೆ ಹೀಗಿರಬೇಕು ಎಂಬುದೆಲ್ಲವನ್ನು ಮೀರಿಸಿದೆ ಪ್ರವೀಣ್ ನಟನೆ. ಈತ ಹೀರೋ ಮೆಟಿರಿಯಲ್ ಹ ಅಂತ ಬೊಟ್ಟು ಮಾಡೋರಿಗೆ ತನ್ಮ ನಟನೆ ಮೂಲಕವೇ, ಸಿನಿಮಾದಲ್ಲಿ ಹೀರೋಗೆ ಬೇಕಾಗಿರುವ ಪ್ರತಿಭೆ ಏನು ಎಂಬುದನ್ನು ಪ್ರವೀಣ್ ತೋರಿಸಿದ್ದಾರೆ. ಇಡ್ಲಿ ಮಾರಿಕೊಂಡು, ಸ್ಲಮ್ ಜನಗಳ ಕಷ್ಟ ಸುಖಲಗಳನ್ನ ಕೇಳುತ್ತಾ, ಪ್ರೀತಿಯಲ್ಲಿ ಬೀಳುವ ನಾಯಕನ ಕಥೆ ಇದಾಗಿದೆ. ಪ್ರವೀಣ್ ಒಟ್ಟಿಗೆ ಸಂತೋಷ್ ಕರ್ಕಿ, ರಾಜ್ ಬಾಲ್ವಾಡಿ, ನಾಗೇಶ್ ಅದ್ಭುತ ನಟನೆಯಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
ಒಂದು ಸಿನಿಮಾದ ಕಥೆ ಹೇಗಿರಬೇಕು ಅಂದ್ರೆ ಸಾಗುವ ಹಾದಿಯಲ್ಲಿ ಪ್ರೇಕ್ಷಕನನ್ನು ಥಿಯೇಟರ್ ನಲ್ಲಿ ಸೀಟಿನ ಹಂಚಿಗೆ ತಂದು ಕೂರಿಸಬೇಕು. ಆಗ ಸಿನಿಮಾ ನೋಡುವುದಕ್ಕೆ ಆಸಕ್ತಿ ಹೆಚ್ಚಾಗಿರುತ್ತದೆ. ಠಾಣೆ ಸಿನಿಮಾ ಆ ರೀತಿಯ ಸಾಕಷ್ಟು ದೃಶ್ಯಗಳನ್ನ ನೀಡಿದೆ. ಸದ್ಯ ರಾಜ್ಯಾದ್ಯಂತ ರಿಲೀಸ್ ಆಗಿರುವ ಸಿನಿಮಾ, ಥಿಯೇಟರ್ ಗಳಲ್ಲಿ ಲಭ್ಯವಿದೆ.