ಬೆಂಗಳೂರು, ಅ.18- ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ಕರ್ತವ್ಯ ನಿರತ ಪ್ರೊಬೆಷನರಿ ಮಹಿಳಾ ಸಬ್ ಇನ್ಸ್ಪೆಕ್ಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವರನ್ನು ಕೆಳಗೆ ಬೀಳಿಸಿ ಧಮ್ಕಿ ಹಾಕಿ ಪರಾರಿಯಾಗಿದ್ದ ಯುವಕನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಲಗಾಳ ನಿವಾಸಿ ಭರತ್ (32) ಬಂಧಿತ ಯುವಕ. ಈತ ವಾಟರ್ ಫ್ಯೂರಿಫೈನಲ್ಲಿ ಕೆಲಸ ಮಾಡುತ್ತಿದ್ದಾನೆ.
ಪ್ರೊಬೆಷನರಿ ಮಹಿಳಾ ಸಬ್ ಇನ್ಸ್ಪೆಕ್ಟರ್ ಅಶ್ವಿನಿ ಹಿಪ್ಪರಗಿ ಅವರು ಅ.15ರಂದು ಮಧ್ಯಾಹ್ನ ಸುಬ್ಬಣ್ಣ ಗಾರ್ಡನ್ನಲ್ಲಿ ಗಸ್ತಿನಲ್ಲಿದ್ದರು. ಆ ವೇಳೆ ಅತಿವೇಗವಾಗಿ ಬೈಕ್ನಲ್ಲಿ ಹೋಗುತ್ತಿದ್ದ ಭರತ್ನನ್ನು ಗಮನಿಸಿ ಅಶ್ವಿನಿಯವರು ತಡೆದು ಬುದ್ದಿವಾದ ಹೇಳಿ ತಮ್ಮ ದ್ವಿಚಕ್ರ ವಾಹನ ತೆಗೆದುಕೊಂಡು ಮುಂದೆ ಹೋಗುತ್ತಿದ್ದರು.
ಸಬ್ಇನ್ಸ್ಪೆಕ್ಟರ್ ಮಾತಿನಿಂದ ಕೋಪಗೊಂಡ ಯುವಕ ತನ್ನ ಬೈಕ್ ತೆಗೆದುಕೊಂಡು ಹಿಂದಿನಿಂದ ಅಶ್ವಿನಿಯವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವರನ್ನು ಬೀಳಿಸಿ ನನಗೆ ಬುದ್ದಿವಾದ ಹೇಳ್ತಿರಾ, ನನ್ನ ಹತ್ರ ಇದೆಲ್ಲಾ ಇಟ್ಕೋಬೇಡಿ ಎಂದು ಧಮ್ಕಿ ಹಾಕಿ ಪರಾರಿಯಾಗಿದ್ದನು.
ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡ ಅಶ್ವಿನಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನಾ ಸ್ಥಳದಲ್ಲಿನ ಸಿಸಿ ಟಿವಿಗಳನ್ನು ಪರಿಶೀಲಿಸಿ ಆರೋಪಿ ಯುವಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಡಿ.2026ರ ವೇಳೆಗೆ ಸಿದ್ಧವಾಗಲಿದೆ ಕುಲಶೇಖರಪಟ್ಟಣಂ ಉಡಾವಣಾ ಸಂಕೀರ್ಣ: ಇಸ್ರೋ ಮುಖ್ಯಸ್ಥರು
- ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಕೊಂದು ಮನೆಯಲ್ಲೇ ಶವ ಹೂಳಲು ಯತ್ನಿಸಿದ ಪಾಗಲ್
- ಕಾಶ್ಮೀರದ ಬಂಡಿಪೋರಾ ಗಡಿನಿಯಂತ್ರಣ ರೇಖೆ ಬಳಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ
- ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಕಟ್ಟಡ ಕುಸಿತ ದುರಂತ : ಸಾವಿನ ಸಂಖ್ಯೆ 15ಕ್ಕೆ ಏರಿಕೆ
- ಚಾರ್ಮುಡಿ ಘಾಟ್ನಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ನಿಯಮ