ಯಾದಗಿರಿ,ಮೇ.5 : ನೀರು ಕುಡಿಯಲು ಹೋಗಿದ್ದ ಮೂವರು ಬಾಲಕರು ಹೊಂಡದಲ್ಲಿ ಮುಳುಗಿ ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಅಚೊಲಾ ತಾಂಡಾದಲ್ಲಿ ನಡೆದಿದೆ. ಕುರಿ ಕಾಯಲು ಹೋಗಿದ್ದ ಬಾಲಕರು ಬೇಸಿಗೆ ಹಿನ್ನಲೆ ನೀರಿನ ದಾಹ ತಣಿಸಿಕೊಳ್ಳಲು ಕೃಷಿ ಹೊಂಡದ ಬಳಿ ಹೋಗಿದ್ದರು ಈ ವೇಳೆ ಕಾಲು ಜಾರಿ ಬಿದ್ದು ನೀರು ಪಾಲು ಆಗಿರಬಹುದು ಎನ್ನಲಾಗಿದೆ.
ಅಚೊಲಾ ತಾಂಡಾದ ನಿವಾಸಿಗಳಾದ ಅಮರ್(12), ಜಯ(14), ಕೃಷ್ಣ 10) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಯಾದಗಿರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಮಕ್ಕಳ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
- ಒಳಜಗಳ ಬಿಟ್ಟು ಒಂದಾಗಿರಬೇಕಾದ ಅಗತ್ಯವಿದೆ : ವಿಜಯೇಂದ್ರ
- ಆರ್ಎಸ್ಎಸ್ ಮುಖಂಡರ ಮನೆ ಮೇಲೆ ದಾಳಿ, ಕಾರಣ ಕೇಳಿ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನೋಟಿಸ್
- ಆದಿಚುಂಚನಗಿರಿ ಮಠದ ಮಹತ್ತರ ಸೇವೆ ಪ್ರಶಂಸನೀಯ : ಅಮಿತ್ ಶಾ
- ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ : ಯಡಿಯೂರಪ್ಪ ಆಕ್ರೋಶ
- ಇರಾನ್ ಮೇಲೆ ದಾಳಿಗೆ 2 ವಾರದ ‘ಡೆಡ್’ಲೈನ್ ನೀಡಿದ ಟ್ರಂಪ್