ಬೆಂಗಳೂರು, ಮೇ 26- ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ನಗರದಲ್ಲೇ ಒಟ್ಟು 71 ಆ್ಯಕ್ಟೀವ್ ಕೋವಿಡ್ ಕೇಸ್ಗಳು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 9 ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.71 ಜನರಲ್ಲಿ ಬಹುತೇಕ ಮಂಡಿ ಹೋಮ್ ಐಸೋಲೇಷನ್ನಲ್ಲಿದ್ದು ಒಬ್ಬರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.
ಬೆಂಗಳೂರು-5, ಬೊಮನಹಳ್ಳಿ-7, ದಾಸರಹಳ್ಳಿ-1, ಪೂರ್ವ ವಲಯದಲ್ಲಿ -13, ಮಹದೇವಪುರ-16, ಆರ್.ಆರ್.ನಗರ- 1, ದಕ್ಷಿಣ-14, ಪಶ್ಚಿಮ-10 ಹಾಗೂ ಯಲಹಂಕದಲ್ಲಿ ನಾಲ್ಕು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಇದರ ಜೊತೆಗೆ ರಾಜ್ಯದಲ್ಲಿ ಒಟ್ಟು ಶೇ. 8.65ರಷ್ಟು ಪಾಸಿಟಿವ್ ಕೇಸ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವವರನ್ನು ಕಡ್ಡಾಯ ಟೆಸ್ಟಿಂಗ್ಗೆ ಒಳಪಡಿಸಲು ಸೂಚನೆ ನೀಡಲಾಗಿದೆ.
ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ಟೆಸ್ಟಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಿನಕ್ಕೆ 150-200 ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.
ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಬಿಡುಗಡೆ:
ಪ್ರೈವಿಟ್ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ಗಳ ಒಕ್ಕೂಟ ಕೊರೊನಾ ಗೈಡ್ ಲೈನ್್ಸ ಬಿಡುಗಡೆ ಮಾಡಿದೆ. ಗೈಡ್ಲೈನ್ಸ್ ನಲ್ಲಿ ಕರ್ನಾಟಕ ಸರ್ಕಾರ ಹೊರಡಿಸಿದ ಪರೀಕ್ಷಾ ಪ್ರೋಟೋಕಾಲ್ಗಳನ್ನು ಕಡ್ಡಾಯವಾಗಿ ಅನುಸರಿಸುವುದು. ರೋಗಲಕ್ಷಣವಿರುವ ವ್ಯಕ್ತಿಗಳ ಪರೀಕ್ಷೆಗೆ ಆದ್ಯತೆ ನೀಡುವುದು. ಶಂಕಿತ ಮತ್ತು ದೃಢಪಡಿಸಿದ ಕೋವಿಡ್-19 ಪ್ರಕರಣಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಕ್ಷಣ ವರದಿ ಮಾಡುವುದು.
ನಿಖರವಾದ ಡೇಟಾವನ್ನು ಕಡ್ಡಾಯವಾಗಿ ಸರ್ಕಾರಿ ಪೋರ್ಟಲ್ಗಳಿಗೆ ಅಪ್ಲೋಡ್ ಮಾಡುವುದು. ಅಗತ್ಯ ಔಷಧಗಳ ಸಾಕಷ್ಟು ದಾಸ್ತಾನುಗಳನ್ನು ಕಾಪಾಡಿಕೊಳ್ಳುವುದು.ಆಮ್ಲಜನಕ ಮತ್ತು ಸಂಬಂಧಿತ ಮೂಲಸೌಕರ್ಯಗಳ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು.ಆಮ್ಲಜನಕ ಮತ್ತು ಕಿಟ್ಗಳ ಬಫರ್ ಸ್ಟಾಕ್ಗಳನ್ನು ಇಟ್ಟುಕೊಳ್ಳುವುದು.
ಬಳಸಲಾದ ಕೊರೊನಾ ಕಿಟ್ಗಳ ಸರಿಯಾದ ಬಳಕೆ, ವಿಲೇವಾರಿ ಮತ್ತು ಸಂರಕ್ಷಣೆಯಲ್ಲಿ ಸಿಬ್ಬಂದಿಗೆ ತರಬೇತಿ ನೀಡುವುದು. ಸಿಬ್ಬಂದಿ, ರೋಗಿಗಳು ಮತ್ತು ರೋಗಿಯ ಸಂಬಂಧಿಕರಿಗೆ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸುವುದು. ಪೋಸ್ಟರ್ಗಳ ಮೂಲಕ ಸೋಂಕಿನ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಬಿಬಿಎಂಪಿ ಸಭೆ;
ನಗರದಲ್ಲಿ 71 ಕೊರೊನಾ ಸೋಂಕಿತರಯ ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಯುಕ್ತ ಮಹೇಶ್ವರ್ ರಾವ್ ಅವರು ಮಹತ್ವದ ಸಭೆ ನಡೆಸಿದ್ದಾರೆ.ಕೊರೊನಾ ವೈರಸ್ ತಡೆಗಟ್ಟಲು ಬಿಬಿಎಂಪಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸಭೆಯಲ್ಲಿ ಪಾಲಿಕೆಯ 8 ವಲಯಗಳ ವಿಶೇಷ ಅಯುಕ್ತರು. ಅರೋಗ್ಯ ಅಧಿಕಾರಿಗಳು ಭಾಗಿಯಾಗಿದ್ದರು. ಈಗಾಗಲೇ ನಗರದಲ್ಲಿ ವೈರಸ್ ನಿಂದ ಒಬ್ಬರು ಮೃತ ಪಟ್ಟಿದ್ದು ಬಿಟ್ಟರೆ ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ವೈರಸ್ ಸೋಂಕಿತರ ಸಂಖ್ಯೆ ಕಡಿಮೆ ಇದೆ.
ವೈರಸ್ ಉಲ್ಬಣ ಅಗದಂತೆ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇನ್ನೂ ಬಿಬಿಎಂಪಿ ಅಸ್ಪತ್ರೆ ಗೆ ಬರುವಂತಹ ವೃದ್ದರು.ಗರ್ಭಿಣಿಯರು ಸೇರಿದಂತೆ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಲು ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈಗಾಗಲೇ ಅಸ್ಪತ್ರೆಗೆ ಬರುವ ರೋಗಿಗಳಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಬೇಕು ಹಾಗೂ ಸಾರಿ ಕೇಸ್ ಗಳು ಕಂಡು ಬಂದರೆ ಕೂಡಲೇ ಹೆಚ್ಚಿನ ಚಿಕಿತ್ಸೆ ನೀಡುವಂತೆ ಆದೇಶಿಸಲಾಗಿದೆ.
ಇನ್ನೂ ಪಾಲಿಕೆ ಅಸ್ಪತ್ರೆಗೆ ಬರುವ ಪ್ರತಿ ರೋಗಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿ ಹೆರಿಗೆಗೆ ಬಂದ ಗರ್ಭಿಣಿಯರಲ್ಲಿ ಕೋವಿಡ್ ಕಂಡುಬಂದರೆ ವಿಶೇಷ ವಾರ್ಡ ವ್ಯವಸ್ಥೆ ಮಾಡುವಂತೆಯೂ ಸೂಚಿಸಲಾಗಿದೆ.
ಮೆಟ್ರೋದಲ್ಲಿ ಮಾಸ್ಕ್ ಕಡ್ಡಾಯವಿಲ್ಲ:
ನಮ ಮೆಟ್ರೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮಹೇಶ್ವರ್ ರಾವ್ ಅವರು ಮೆಟ್ರೋ ರೈಲಿನಲ್ಲಿ ಇನ್ನು ಮಾಸ್ಕ್ ಕಡ್ಡಾಯಗೊಳಿಸಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾಸ್ಕ್ ಕಡ್ಡಾಯದ ಬಗ್ಗೆ ಇದುವರೆಗೂ ಯಾವುದೇ ಸೂಚನೆ ಬಾರದಿರುವ ಹಿನ್ನೆಲೆಯಲ್ಲಿ ಮೆಟ್ರೋ ರೈಲಿನಲ್ಲಿ ಇನ್ನು ಮಾಸ್ಕ್ ಕಡ್ಡಾಯಗೊಳಿಸಿಲ್ಲ ಎಂದು ಅವರು ಮಾಹಿತಿ ನೀಡಿದರು.