Saturday, October 5, 2024
Homeಜಿಲ್ಲಾ ಸುದ್ದಿಗಳು | District Newsಪೋಷಕರ ನಿತ್ಯ ಜಗಳದಿಂದ ಬೇಸತ್ತು ಮಗ ಆತಹತ್ಯೆ

ಪೋಷಕರ ನಿತ್ಯ ಜಗಳದಿಂದ ಬೇಸತ್ತು ಮಗ ಆತಹತ್ಯೆ

Tired of parents' constant fights, the son commits suicide

ಕೊಳ್ಳೇಗಾಲ, ಅ.5- ಮನೆಯಲ್ಲಿ ನಿತ್ಯ ಪೋಷಕರ ಜಗಳದಿಂದ ಬೇಸತ್ತ ಮಗ ಕಾವೇರಿನದಿಗೆ ಹಾರಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವನಸಮುದ್ರದ ಬಳಿ ಜರುಗಿದೆ.

ಬೆಂಗಳೂರಿನ ನಾಯಂಡಳ್ಳಿ ನಿವಾಸಿ ಶಿವಸ್ವಾಮಿ ಎಂಬುವರ ಪುತ್ರ ಸಂದೀಪ್ ಕುಮಾರ್ (26) ಮೃತ ಯುವಕ.ಮೂಲತಹಃ ದೊಡ್ಡಬಳ್ಳಾಪುರದವರಾದ ಶಿವಸ್ವಾಮಿ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಹಾಲಿ ವಾಸವಿದ್ದಾರೆ.

ಇವರ ಮಗ ಸಂದೀಪ್ ಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದು, ತಂದೆ-ತಾಯಿಯ ನಡುವೆ ನಿತ್ಯ ಜಗಳವಾಗುತಿತ್ತು. ಇದರಿಂದಾಗಿ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದ ಸಂದೀಪ್ ಕುಮಾರ್ಗೆ ಬೇಸರವಾಗುತ್ತಿತ್ತು ಎಷ್ಟು ಹೇಳಿದರೂ ಅವರು ನಡವಳಿಕೆ ಬದಲಿಸಿಕೊಂಡಿರಲಿಲ್ಲ.

ಮನೆಯಲ್ಲಿ ನಿತ್ಯ ಅಶಾಂತಿಯನ್ನು ನೋಡಿ ರೋಸಿ ಹೋಗಿದ್ದ ಸಂದೀಪ್ ಕುಮಾರ್ ಅ.2 ರಂದು ತನ್ನ ಬೈಕ್ ಏರಿ ನೇರವಾಗಿ ಪ್ರಯಾಣ ಬೆಳೆಸಿ, ಇಲ್ಲಿನ ಶಿವನಸಮುದ್ರದ ಕಾವೇರಿ ನದಿಯ ಬಳಿ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ಸಂಜೆ ಈತನ ಮೃತ ದೇಹ ಶಿವನಸಮುದ್ರದ ರಂಗನಾಥಸ್ವಾಮಿ ದೇವಾಲಯದ ಹಿಂಭಾಗ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.ಈ ಸಂಬಂಧ ಮೃತನ ತಂದೆ ಶಿವಸ್ವಾಮಿ ಇಲ್ಲಿನ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ದೇಹವನ್ನು ನದಿಯಿಂದ ಹೊರತೆಗೆಸಿ ಪಂಚನಾಮೆ ನಡೆಸಿ ವಾರಸುದಾರರಿಗೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News