ಹೈದ್ರಾಬಾದ್, ಜೂ.11- ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ನ ಖ್ಯಾತ ನಿರ್ದೇಶಕ ಎ.ಎಸ್.ರವಿಕುಮಾರ್ (70) ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದು, ಇವರ ನಿಧನಕ್ಕೆ ಟಾಲಿವುಡ್ ನ ಖ್ಯಾತ ನಟರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ. ಗೋಪಿ ಚಂದ್ ರನ್ನು ಯಜ್ಞಂ ಚಿತ್ರದ ಮೂಲಕ ನಾಯಕನಟರಾಗಿಸಿದ್ದ ರವಿಕುಮಾರ್ ಚೌಧರಿ ಅವರು ವರುಣ್ ತೇಜ್ ರ ಚೊಚ್ಚಲ ನಟನೆಯ ಪಿಲ್ಲಾ ನೂವು ಲೇನಿ ಜೀವಿತಂ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರಕ್ಕಾಗಿ ಅವರಿಗೆ ನಂದಿ ಪ್ರಶಸ್ತಿ ಲಭಿಸಿತ್ತು.
ನಂದಮೂರಿ ಬಾಲಕೃಷ್ಣ ನಟನೆಯ ವೀರಭದ್ರ, ನಿತಿನ್ ರ ಅಟಾಡಿಸ್ತಾ, ಗೋಪಿಚಂದ್ ನಟನೆಯ ಲೌಕ್ಯಂ, ತಿರಗಬಡರಾ ಸಾಮಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು.