ಬೆಂಗಳೂರು,ಆ.22- ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಆರ್.ರಾಮಯ್ಯ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು.ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಆರ್.ರಾಮಯ್ಯ ನಿಧನರಾಗಿರುವುದನ್ನು ಸದನಕ್ಕೆ ವಿಷಾದದಿಂದ ತಿಳಿಸಿದರು.
ಆರ್.ರಾಮಯ್ಯ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ 1946 ರ ಮೇ 22ರಂದು ಜನಿಸಿದ್ದರು. ವಿಶ್ವವಿದ್ಯಾಲಯದ ಮಟ್ಟದವರೆಗೆ ವಿದ್ಯಾಭ್ಯಾಸ ಮಾಡಿದ್ದ ಶ್ರೀಯುತರು ವೃತ್ತಿಯಲ್ಲಿ ಕೃಷಿಕರಾಗಿದ್ದರು.
ಅಮೆಚೂರ್ ಕಲಾವಿದರಾಗಿದ್ದ ಅವರು 1985ರಲ್ಲಿ ಹಿರಿಯೂರು ಕ್ಷೇತ್ರದಿಂದ ಎಂಟನೇ ವಿಧಾನಸಭೆಗೆ ಚುನಾಯಿತರಾಗಿದ್ದರು ಎಂದು ಸರಿಸಿದರು.ಹಿರಿಯ ಸಜ್ಜನ ರಾಜಕಾರಣಿ ಆರ್.ರಾಮಯ್ಯ ಅವರು ನಿನ್ನೆ ನಿಧನ ಹೊಂದಿರುತ್ತಾರೆ. ಅವರ ಆತಕ್ಕೆ ಚಿರ ಶಾಂತಿ ಕೋರುವುದಾಗಿ ಅವರು ತಿಳಿಸಿದರು.ಬಳಿಕ ಸದನದ ಮೌನಾಚರಣೆ ಸಲ್ಲಿಸುವ ಮೂಲಕ ರಾಮಯ್ಯ ಅವರ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು.
- ನಾಳೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಮೃತ ಮಹೋತ್ಸವ
- ಸವದತ್ತಿ ಯಲ್ಲಮ ಕ್ಷೇತ್ರದ ಅಭಿವೃದ್ಧಿಗೆ 230 ಕೋಟಿ ರೂ. ವೆಚ್ಚದಲ್ಲಿ ಯೋಜನೆ : ಎಚ್.ಕೆ.ಪಾಟೀಲ್
- ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸ್ಥಾನ ಇಲ್ಲ : ಕಾಲೆಳೆದ ಸಿಎಂ ಸಿದ್ದರಾಮಯ್ಯ
- ಮೇಲ್ಮನೆಯಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ವಿಧೇಯಕ ಅಂಗೀಕಾರ
- ಮಕ್ಕಳ ಶಿಕ್ಷಣದ ಹಣದಲ್ಲೂ ಲೂಟಿ ಮಾಡುವ ಸ್ಥಿತಿ ತಲುಪಿದ ಕಾಂಗ್ರೆಸ್ ಸರ್ಕಾರ : ರೇವಣ್ಣ ಆಕ್ರೋಶ