ರುದ್ರ ಪ್ರಯಾಗ, ಜೂ. 26-ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಇಲ್ಲಿನ ಅಲಕನಂದಾ ನದಿಗೆ ಬಿದ್ದುಇಬ್ಬರು ಸಾವನ್ನಪ್ಪಿ, ಹತ್ತು ಜನರು ನಾಪತ್ತೆಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ರುದ್ರಪ್ರಯಾಗ ಮತ್ತು ಗೌಚರ್ ನಡುವಿನ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫೋಲ್ತಿರ್ ಗ್ರಾಮದ ಬಳಿ ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಹಾರ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಕಾರ್ಯಚರಣೆ ಕೈಗೊಂಡಿದೆ. ಅಪಘಾತ ಸ್ಥಳದ ಬಳಿ ಮತ್ತು ರುದ್ರಪ್ರಯಾಗ ಬಳಿಯ ನದಿಯಿಂದ ಎರಡು ಶವಗಳನ್ನು ಹೊರತೆಗೆಯಲಾಗಿದೆ ಎಂದು ರೆಡ್ ಕ್ರಾಸ್ ಸೊಸೈಟಿ ರಕ್ಷಣಾ ತಂಡದ ಸದಸ್ಯ ಸತ್ಯೇಂದ್ರ ಸಿಂಗ್ ಭಂಡಾರಿ ತಿಳಿಸಿದ್ದಾರೆ.
ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಮತ್ತು ಹತ್ತು ಜನರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ವಾಹನದಲ್ಲಿ ಚಾಲಕ ಸೇರಿದಂತೆ 20 ಜನರು ಇದ್ದರು ಮತ್ತು ಬದರಿನಾಥ ಧಾಮದ ಕಡೆಗೆ ಹೋಗುತ್ತಿದ್ದರು.ರಾಜಸ್ಥಾನದ ಉದಯಪುರದಿಂದ ಉತ್ತರಾಖಂಡದ ಚಾರ್ ಧಾಮ ಯಾತ್ರೆಗೆ ಯಾತ್ರಿಕರು ಬಂದಿದ್ದರು ಎಂದು ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.
- ಚೀನಾದಲ್ಲಿ ಪ್ರವಾಹಕ್ಕೆ ಆರು ಮಂದಿ ಬಲಿ
- ಸಂಸತ್ಗಿಂತ ಸಂವಿಧಾನವೇ ಸರ್ವೋಚ್ಚ : ಸಿಜೆಐ ಬಿ.ಆರ್. ಗವಾಯಿ
- 50 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಪೊಲೀಸರು
- ರಕ್ಷಣಾ ಸ್ವಾವಲಂಬನೆಗೆ ಒತ್ತು : ಪ್ರಧಾನಿ ಮೋದಿ
- ಅಧ್ಯಕ್ಷರು, ಸಚಿವರ ಬದಲಾವಣೆ : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಗರಿಗೆದರಿದ ಚರ್ಚೆ