Wednesday, May 1, 2024
Homeಬೆಂಗಳೂರುಕಿಲ್ಲರ್ ಬಿಎಂಟಿಸಿಗೆ ಮತ್ತೊಬ್ಬ ಮಹಿಳೆ ಬಲಿ

ಕಿಲ್ಲರ್ ಬಿಎಂಟಿಸಿಗೆ ಮತ್ತೊಬ್ಬ ಮಹಿಳೆ ಬಲಿ

ಬೆಂಗಳೂರು,ಡಿ.28- ಬಿಬಿಎಂಪಿ ಕಸದ ಲಾರಿಯೊಂದು ಆ್ಯಕ್ಟಿವ್ ಹೊಂಡಾ ಸ್ಕೂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ವೆಲ್ಡರ್ ಮೃತಟ್ಟಿರುವ ಘಟನೆ ಬನಶಂಕರಿ ಸಂಚಾರಿ ಫೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಯಾರಬ್ ನಗರದ ಹುಮ್ನಾಬಾಗ್ ಲೇಔಟ್ ನಿವಾಸಿ ಮುದ್ಗರ್ (42) ಮೃತಪಟ್ಟ ಸವಾರ.

ವೆಲ್ಡರ್ ವೃತ್ತಿ ಮಾಡುತ್ತಿದ್ದ ಮುದ್ಗರ್ ಆ್ಯಕ್ಟಿವ್ ಹೊಂಡಾದಲ್ಲಿ ನಿನ್ನೆ ಮಧ್ಯಾಹ್ನ 1.45ರ ಸಮಯ ದಲ್ಲಿ ಯಾರಬ್ ನಗರದ ಮುಖ್ಯರಸ್ತೆ, ಬೇಂದ್ರೆ ಸರ್ಕಲ್ ಬಳಿ ಹೋಗುವಾಗ ಅತಿವೇಗ, ಅಜಾಗ ರೂಕತೆಯಿಂದ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದಮುದ್ಗರ್ ಮೇಲೆಯೇ ಲಾರಿಚಕ್ರ ಹರಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಬನಶಂಕರಿ ಸಂಚಾರಿ ಠಾಣೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಾನವೀಯ ಮೌಲ್ಯದ ಮೇರು ಸಂತ, ಧರ್ಮಪ್ರಭು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

ಬಿಎಂಟಿಸಿ ಬಸ್ ಡಿಕ್ಕಿ ಮಹಿಳೆ ದುರ್ಮರಣ
ಬೆಂಗಳೂರು,ಡಿ.28- ಮನೆಯಿಂದ ಬೇಕರಿಗೆ ಹೋಗುತ್ತಿದ್ದ ಮಹಿಳೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಕಬ್ಬನ್ ಪೇಟೆ ನಿವಾಸಿ ಪುಷ್ಪ (60) ಮೃತ ಮಹಿಳೆ, ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಪುಷ್ಪ ಅವರು ಮನೆಯಿಂದ ಸಮೀಪದ ಬೇಕರಿಗೆ ಹೋಗುತ್ತಿದ್ದಾಗ ಸುಬ್ಬಯ್ಯ ಸರ್ಕಲ್ ಬಳಿ ಅತಿವೇಗದಿಂದ ಮುನ್ನುಗ್ಗಿದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಪಲಿಸದೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಹಲಸೂರು ಗೇಟ್ ಸಂಚಾರಿ ಠಾಣೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News