Thursday, July 10, 2025
Homeರಾಷ್ಟ್ರೀಯ | Nationalನಿವೃತ್ತಿ ನಂತರ ವೇದಗಳು, ಉಪನಿಷದ್ ಓದುತ್ತಾ ಸಾವಯವ ಕೃಷಿ ಮಾಡ್ತಾರಂತೆ ಅಮಿತ್ ಶಾ

ನಿವೃತ್ತಿ ನಂತರ ವೇದಗಳು, ಉಪನಿಷದ್ ಓದುತ್ತಾ ಸಾವಯವ ಕೃಷಿ ಮಾಡ್ತಾರಂತೆ ಅಮಿತ್ ಶಾ

'Vedas, Upanishads, and farming': Amit Shah's post-retirement plan

ನವದೆಹಲಿ, ಜು. 10- ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್‌ ಮತ್ತು ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ರಾಜಸ್ಥಾನದಲ್ಲಿ ಸಹಕಾರ್‌ ಸಂವಾದ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನನ್ನ ನಿವೃತ್ತಿ ಜೀವನದ ಬಗ್ಗೆ ಯೋಚಿಸಿದ್ದೇನೆ.

ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಮುಂದಿನ ಜೀವನವನ್ನು ವೇದಗಳ ಪಠಣ, ಉಪನಿಷತ್‌ ಪಾರಾಯಣ ಮತ್ತು ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.ನನ್ನ ಬಳಿ ಸುಮಾರು ಎಂಟು ಸಾವಿರ ಪುಸ್ತಕಗಳಿವೆ. ಅವುಗಳನ್ನು ಓದಲು ಸಹ ನನಗೆ ಸಮಯ ಇಲ್ಲ. ಹೀಗಾಗಿ ನಿವೃತ್ತಿ ನಂತರ ಓದಿನತ್ತ ಗಮನ ಹರಿಸುವುದಾಗಿಯೂ ಅವರು ಹೇಳಿದ್ದಾರೆ.

ಶಾಸ್ತ್ರೀಯ ಸಂಗೀತದ ಬಗ್ಗೆಯೂ ಒಲವಿದೆ. ರಾಸಾಯನಿಕ ಗೊಬ್ಬರಗಳಿಂದ ಬೆಳೆದ ಗೋಧಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಬಿಪಿ (ರಕ್ತದೊತ್ತಡ), ಮಧುಮೇಹ, ಥೈರಾಯ್‌್ಡ ಮತ್ತು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬರುತ್ತವೆ. ನೈಸರ್ಗಿಕ ಕೃಷಿ ದೇಹವನ್ನು ರೋಗ ಮುಕ್ತಗೊಳಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಔಷಧಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.

RELATED ARTICLES

Latest News