Friday, June 6, 2025
Homeರಾಜ್ಯವಿಜಯೋತ್ಸವ ದುರಂತ : ಕಬ್ಬನ್‌ ಪಾರ್ಕ್‌ ಪೊಲೀಸ್‌‍ ಠಾಣೆಯಲ್ಲಿ 11 ಯುಡಿಆರ್‌ ದಾಖಲು

ವಿಜಯೋತ್ಸವ ದುರಂತ : ಕಬ್ಬನ್‌ ಪಾರ್ಕ್‌ ಪೊಲೀಸ್‌‍ ಠಾಣೆಯಲ್ಲಿ 11 ಯುಡಿಆರ್‌ ದಾಖಲು

Victory Day Tragedy: 11 UDRs filed at Cubbon Park Police Station

ಬೆಂಗಳೂರು, ಜೂ.5- ಐಪಿಎಲ್‌ ವಿಜಯೋತ್ಸವ ಆಚರಣೆ ಸಂದರ್ಭ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡರೂ ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. ಘಟನೆಯನ್ನು ಕೇವಲ ಅಸಹಜ ಸಾವು (ಯುಡಿಆರ್‌) ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಹನ್ನೊಂದು ಯುಡಿಆರ್‌ ದಾಖಲಾಗಿವೆ. ಕಾರ್ಯಕ್ರಮ ಆಯೋಜಿಸಿದವರ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ ಎಂದು ಕೇಸ್‌ ದಾಖಲು ಮಾಡಲು ಅವಕಾಶವಿತ್ತು. ಕಾರ್ಯಕ್ರಮ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ( ಕೆಎಸ್‌ಸಿಎ) ಮತ್ತು ಕಾರ್ಯಕ್ರಮದ ಇವೆಂಟ್‌ ವ್ಯಾನೇಜ್‌ಮೆಂಟ್‌ ಜವಾಬ್ದಾರಿ ವಹಿಸಿದ್ದ ಡಿಎನ್‌ಎ ಕಂಪನಿ ವಿರುದ್ಧ ದೂರು ದಾಖಲು ಮಾಡಿ ತನಿಖೆ ನಡೆಸಬಹುದಾಗಿತ್ತು.

ಆದರೆ ಈಗ ಹೊಣೆಗಾರಿಕೆ ಹೊರಲು ಯಾರೂ ತಯಾರಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರ ಈ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ದುರ್ಘಟನೆಯಿಂದ ಆಗಿರುವ ಸಾವು ಹಾಗೂ ಇತರ ಯಾವುದೇ ವಿಚಾರಕ್ಕೆ ದೂರು ದಾಖಲು ಮಾಡಿಲ್ಲ ಎಂದು ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈಗ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿ ಪಡೆದು ನಂತರ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಪೊಲೀಸರ ಈ ನಡೆಯಿಂದಾಗಿ ಸಂಪೂರ್ಣ ಘಟನೆಗೆ ಯಾರು ಹೊಣೆ ಎಂಬ ಬಗ್ಗೆ ತನಿಖೆಯೇ ನಡೆಯುವುದಿಲ್ಲ. ಜನರು ಅವರಾಗಿಯೇ ಬಂದು ಸಿಕ್ಕಿ ಹಾಕಿಕೊಂಡು ಕಾಲ್ತುಳಿತವಾಗಿ ಸಾವನಪ್ಪಿದ್ದಾರೆ. ಇದಕ್ಕೆ ಯಾರೂ ಹೊಣೆ ಅಲ್ಲ ಎಂಬ ನಿರ್ಧಾರಕ್ಕೆ ಭಾಗಶಃ ಬಂದಂತಾಗಿದೆ.

ಬಿಎನ್‌ಎಸ್‌ ಕಾಯ್ದೆಯ ಸೆಕ್ಷನ್‌ 106 (ನಿರ್ಲಕ್ಷ್ಯದಿಂದ ಉಂಟಾದ ಸಾವು) ಅಡಿ ಪ್ರಕರಣ ದಾಖಲಿಸಲು ಅವಕಾಶ ಇದ್ದರೂ ಹಾಗೆ ಮಾಡದೇ ಇರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಸದ್ಯ ದುರ್ಘಟನೆ ಬಗ್ಗೆ ವ್ಯಾಜಿಸೆ್ಟ್ರೕಟ್‌ ತನಿಖೆಗೆ ಸರ್ಕಾರ ಆದೇಶಿಸಿದೆ. ಈ ಪ್ರಕ್ರಿಯೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಕೆ ಮಾಡುವುದಷ್ಟೇ ವ್ಯಾಜಿಸೆ್ಟ್ರೕಟರ ಹೊಣೆಗಾರಿಕೆಯಾಗಿರುತ್ತದೆ. ಇಲ್ಲಿ ಅದಕ್ಕಿಂತ ಹೆಚ್ಚಿನ ತನಿಖೆ, ವಿಚಾರಣೆಗೆ ಆಸ್ಪದ ಇರುವುದಿಲ್ಲ. ಹೆಚ್ಚೆಂದರೆ, ಅಽಕಾರಿಗಳ ಅಥವಾ ಆಯೋಜಕರ ವಿರುದ್ದ ವ್ಯಾಜಿಸೆ್ಟ್ರೕಟರು ವರದಿ ಸಲ್ಲಿಸಬಹುದು. ಅಂಥ ಸಂದರ್ಭದಲ್ಲಿ ಅಽಕಾರಿಗಳನ್ನು ಅಮಾನತು ಮಾಡಬಹದು ಅಥವಾ ಇಲಾಖಾ ತನಿಖೆಗೆ ಅದೇಶಿಸಬಹುದು.

RELATED ARTICLES

Latest News