ನವದೆಹಲಿ, ಮೇ 11– ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ಪ್ರತಿ ಕ್ಷಣವೂ ಕೆಂಡ ಕಾರುತ್ತಿದ್ದ ಕಾಂಗ್ರೆಸ್ನ ಹಿರಿಯ ಮುಖಂಡ ಪಿ. ಚಿದಂಬರಂ ಅವರು ಅಪರೇಷನ್ ಸಿಂಧೂರ್ ಕಾರ್ಯಚರಣೆ ಬಗ್ಗೆ ಶ್ಲಾಘನೆ ಮಾಡಿ ಗಮನ ಸೆಳೆದಿದ್ದಾರೆ.
ನಾಗರೀಕರ ಮೇಲೆ ದಾಳಿ ನಡೆಸದೆ ಕೇವಲ ಉಗ್ರರ ನೆಲೆಗಳನ್ನು ಅಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಚರಣೆಯನ್ನು ಜಾಗರೂಕ ಹಾಗೂ ಅಗತ್ಯ ನಡೆ ಎಂದು ಅವರು ಗುಣಗಾನ ಮಾಡಿದ್ದಾರೆ. ಉಗ್ರ ನೆಲೆ ನಾಶಗೊಳಿಸಿದ ನಂತರ ಮುಂದೆ ಯುದ್ದ ಬೇಡ ಎಂಬ ಮೋದಿ ನಡೆಯನ್ನು ಅವರು ಜಾಗರೂಕ ನಿರ್ಧಾರ ಎಂದು ಬಣ್ಣಿಸಿದ್ದಾರೆ.