Sunday, September 8, 2024
Homeಜಿಲ್ಲಾ ಸುದ್ದಿಗಳು | District Newsರೈಲ್ವೆ ಹಳಿ ಮೇಲೆ ಮೈಮರೆತು ಮಲಗಿ ಪ್ರಾಣ ಕಳೆದುಕೊಂಡ ಯುವಕರು

ರೈಲ್ವೆ ಹಳಿ ಮೇಲೆ ಮೈಮರೆತು ಮಲಗಿ ಪ್ರಾಣ ಕಳೆದುಕೊಂಡ ಯುವಕರು

ಗಂಗಾವತಿ,ಜು.19- ತಮಾಷೆಗಾಗಿ ಹಳಿ ಮೇಲೆ ಮೈಮರೆತು ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಇಲ್ಲಿನ ರೈಲ್ವೇ ಸ್ಟೇಷನ್ ಸಮೀಪ ರಾತ್ರಿ ನಡೆದಿದೆ.

ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲಾ ಪತ್ತಾರ್(23), ಹಣ್ಣೂರು ಗೌರಮ ಕ್ಯಾಂಪ್ನ ಸುನೀಲ್ ತಿಮಣ್ಣ(23) ಹಾಗೂ ಹಿರೇ ಬೆಣಕಲ್ನ ವೆಂಕಟ ಭೀಮರಾಯ (20) ಮೃತ ದುರ್ದೈವಿಗಳು.

ರಾತ್ರಿ 9.30ರ ಸಮಯದಲ್ಲಿ ರೈಲ್ವೆ ಹಳಿ ಪಕ್ಕದಲ್ಲಿ ಔತಣಕೂಟ ಮಾಡಿದ ಈ ಯುವಕರು ಬಳಿಕ ತಮಾಷೆಗೆಂದು ಹಳಿಯ ಮೇಲೆಯೇ ಮಲಗಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ಮಾರ್ಗವಾಗಿ ಹೊರಟ್ಟಿದ್ದ ಹುಬ್ಬಳ್ಳಿ-ಸಿಂಧನೂರು ಪ್ಯಾಸೆಂಜರ್ ರೈಲು ಹರಿದು ಮೂವರು ಸಾವನ್ನಪ್ಪಿದ್ದಾರೆ. ಗದಗ ರೈಲ್ವೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

RELATED ARTICLES

Latest News