Sunday, May 12, 2024
Homeರಾಷ್ಟ್ರೀಯತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ತಿಂಗಳಿಗೊಬ್ಬ ಸಿಎಂ ಗ್ಯಾರಂಟಿ : ಕೆ.ಟಿ.ರಾಮರಾವ್

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ತಿಂಗಳಿಗೊಬ್ಬ ಸಿಎಂ ಗ್ಯಾರಂಟಿ : ಕೆ.ಟಿ.ರಾಮರಾವ್

ಹೈದರಾಬಾದ್,ನ.15- ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಆರು ತಿಂಗಳಿಗೊಬ್ಬ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬಿಆರ್ಎಸ್ ಪಕ್ಷದ ಐಟಿ ಸಚಿವ ಕೆ.ಟಿ.ರಾಮರಾವ್ ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣ ಬಿಲ್ಡರ್ಸ್ ಫೆಡರೇಶನ್ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಥಿರ ಸರ್ಕಾರ ಮತ್ತು ಸಮರ್ಥ ನಾಯಕತ್ವವು ಅಭಿವೃದ್ಧಿಗೆ ಪ್ರಮುಖವಾಗಬೇಕಾದರೆ ಬಿಆರ್ಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.ಕರ್ನಾಟಕದಲ್ಲಿ ಸಿಎಂ ಹುದ್ದೆಗೆ 3 ಜನ ಹೆಣಗಾಡುತ್ತಿದ್ದಾರೆ. ಇಲ್ಲಿ 11 ಮಂದಿ ರೆಡಿಯಾಗಿ ದ್ದಾರೆ. ರೆಡ್ಡಿ ನಾಮಪತ್ರ ತಿರಸ್ಕøತವಾದರೂ ಸಿಎಂ ಆಗಲು ಕಾದು ಕುಳಿತಿದ್ದಾರೆ.ಕೆಲವರು ಹೊಸ ಪೈಜಾಮ, ಹೊಸ ಧೋತಿ, ಗಡ್ಡಕ್ಕೆ ಬಣ್ಣ ಬಳಿಯುತ್ತಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು

6 ಗ್ಯಾರಂಟಿ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಪ್ರತಿ 6 ತಿಂಗಳಿಗೆ 1 ಸಿಎಂ ಗ್ಯಾರಂಟಿ ಎಂದು ಅವರು ಹೇಳಿದರು. ಅವರು ಕಾಂಗ್ರೆಸ್ನ ಕೇಂದ್ರ ನಾಯಕತ್ವವನ್ನು ಟೀಕಿಸಿದರು ಮತ್ತು ಅದರ ಸ್ಥಿರತೆಯನ್ನು ಪ್ರಶ್ನಿಸಿದರು.ಕೆಲವರು ನಮ್ಮನ್ನು ಟೀಕಿಸುತ್ತಲೇ ಇದ್ದಾರೆ, ಕೆಸಿಆರ್ ಏನೂ ಮಾಡದೆ ತೆಲಂಗಾಣ ಇಷ್ಟು ಅಭಿವೃದ್ಧಿ ಸಾಸಿದೆಯೇ? ಸ್ಥಿರ ಸರ್ಕಾರ ಮತ್ತು ಸಮರ್ಥ ನಾಯಕತ್ವವೇ ರಾಜ್ಯದ ಅಭಿವೃದ್ಧಿಗೆ ಕಾರಣ, ಪ್ರತಿ 6 ತಿಂಗಳಿಗೊಮ್ಮೆ ಸಂಸ್ಥೆಯ ಮುಖ್ಯಸ್ಥರು ಬದಲಾದರೆ ಏನಾದರೂ ಕೆಲಸ ಮಾಡುತ್ತದೆ. ಸ್ಥಿರ ನಾಯಕತ್ವವಿದ್ದರೆ ಮಾತ್ರ ಕೆಲಸಗಳು ನಡೆಯುತ್ತವೆ ಎಂದು ರಾವ್ ಹೇಳಿದರು.

ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಇತರೆ ನಾಲ್ಕು ರಾಜ್ಯಗಳ ಮತ ಎಣಿಕೆಯೊಂದಿಗೆ ಡಿಸೆಂಬರ್ 3 ರಂದು ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ, ಬಿಆರ್ಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ನಾವು ರಾಜ್ಯದ ಬದ್ಧತೆಯನ್ನು ಹೊಂದಿರಬೇಕು ಎಂದಿದ್ದಾರೆ.

RELATED ARTICLES

Latest News