ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭ. ಸನಾತನ ಹಿಂದೂ ಧರ್ಮದಲ್ಲಿ ಹೊಸ ವರ್ಷ.ಹೊಸ ಚಿಗುರಿನ ಪ್ರಕೃತಿ ವೈಭವ. ನಿಜವಾಗಿಯೂ ಇದೇ ನವ ವರುಷ. ನಂಬಿಕೆಯಂತೆ ರಾಶಿ ಫಲಾ ಫಲ ಹೀಗಿದೆ.
ಮೇಷ:
ಶನಿಯ ಸಾಡೇಸಾತಿಯ ಪ್ರಾರಂಭದೊಂದಿಗೆ ನಿಮ ಈ ಹೊಸ ವರ್ಷ ಪ್ರಾರಂಭ. ಸ್ವಲ್ಪ ಮಟ್ಟಿಗೆ ದುಃಖ, ವ್ಯಯ, ಆರೋಗ್ಯ ಬಾಧೆಗಳು ಬಾಧಿಸಲಿವೆೆ. ಕಣ್ಣು-ಕಾಲಿನ ಭಾಗದಲ್ಲಿ ತೊಂದರೆ ಸಾಧ್ಯತೆ. ವೃತ್ತಿಯಲ್ಲಿ ಅತಿಯಾದ ಒತ್ತಡ. ವಿದ್ಯಾರ್ಥಿಗಳಿಗೆ ಆಲಸ್ಯದಿಂದ ವಿದ್ಯೆ ಹಾನಿ. ಹಣಕಾಸಿನ ತಕರಾರುಗಳು ಸಂಭವಿಸಲಿವೆ. ಗುರುಬಲದಿಂದ ಸ್ವಲ್ಪ ಅನುಕೂಲವಿದ್ದು ,ಶುಭ ಕಾರ್ಯಗಳು ನಡೆಯಲಿವೆ. ಹಣದ ವಹಿವಾಟೂ ಚೆನ್ನಾಗಿರಲಿದೆ. ಗೃಹ-ವಾಹನ ಖರೀದಿ ಯೋಗ. ಧರ್ಮಕಾರ್ಯಗಳಲ್ಲಿ ಆಸಕ್ತರಾಗುತ್ತೀರಿ.
ವೃಷಭ:
ಈ ವರ್ಷದ ಆದಿಯಲ್ಲಿ ಬೇವಿಗಿಂತ ಬೆಲ್ಲವೇ ಅಧಿಕ. ಹೆಚ್ಚಿನ ಶುಭಫಲ. ವೃತ್ತಿಯಲ್ಲಿ ಬಡ್ತಿ. ಅಧಿಕಾರ ಯೋಗ. ರಾಜಕಾರಣಿಗಳಿಗೆ ವಿಶೇಷ ಅನುಕೂಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವೂ ಇದೆ. ಮೇ ನಂತರ ಬರುವ ಗುರುಬಲದಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವಿವಾಹಾಪೇಕ್ಷಿತರಿಗೆ ವಿಶೇಷ ಯೋಗವಿದೆ. ಸರ್ಕಾರಿ ನೌಕರರಿಗೆ ವಿಶೇಷ ಅನುಕೂಲಗಳು. ವರ್ಷದ ಮಧ್ಯ ಭಾಗದಲ್ಲಿ ಮಕ್ಕಳ ವಿಚಾರದಲ್ಲಿ ಅಸಮಾಧಾನ, ಅನನುಕೂಲ ಸಾಧ್ಯತೆ. ಅಕ್ಟೋಬರ್ ನಂತರ ಸಹೋದರರ ಸಹಕಾರ. ಜನವರಿ ನಂತರ ಹೆಚ್ಚಿನ ಧನಲಾಭ. ಆರೋಗ್ಯ ವೃದ್ಧಿ ಯಶಸ್ಸು ಸಿಗಲಿದೆ.
ಮಿಥುನ:
ಣಕಾಸಿನ ತೊಂದರೆ. ಕರ್ಮ ಸ್ಥಾನದ ಶನೈಶ್ಚರ ,ಶುಕ್ರನಿಂದ ಪ್ರಾರಂಭದ ಮೂರು ತಿಂಗಳು ಉನ್ನತ ಯಶಸ್ಸನ್ನುಗಳಿಸುವಿರಿ. ಕಲಾವಿದರಿಗೆ ವಿಶೇಷ ಯೋಗ, ವಾಹನ-ಗೃಹ ಯೋಗ. ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ತೊಡೆ ಭಾಗದಲ್ಲಿ ತೊಂದರೆ ಸಂಭವಿಸಬಹುದು. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವಿವಾಹಾದಿ ಶುಭಕಾರ್ಯಗಳು ನಡೆಯಲಿವೆ. ಹಣಕಾಸಿನ ಅನುಕೂಲ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಶುಭಫಲ. ಆಪ್ತರಿಗಾಗಿ ಹೆಚ್ಚಿನ ವ್ಯಯ. ನಂಬಿ ಮೋಸಹೋಗುವ ಸಾಧ್ಯತೆ ಹೆಚ್ಚು.
ಕರ್ಕಾಟಕ:
ಈ ಹೊಸ ವರ್ಷ ನಿಮ್ಮಪಾಲಿಗೆ ಕಷ್ಟ-ನಷ್ಟಗಳ ವರ್ಷ. ಗುರುವಿನ ಪರಿವರ್ತನೆ, ಆದರೂ ಅಧಿಕ ವ್ಯಯ. ಕಾಲಿನ ಭಾಗದಲ್ಲಿ ತೊಂದರೆ ಉಂಟಾಗಲಿದೆ. ಪ್ರಾರಂಭದ ಮೂರು ತಿಂಗಳ ಕಾಲ ಶುಕ್ರನಿಂದ ಅತ್ಯುನ್ನತ ಸಂತಸ-ವೈಭೋಗಗಳನ್ನು ಅನುಭವಿಸುತ್ತೀರಿ. ಅಕ್ಟೋಬರ್ ನಂತರ ಗುರುವಿನಿಂದ ನಿಮ್ಮ ಬದುಕು ಸಂಪೂರ್ಣ ಬದಲಾಗುತ್ತದೆ. ಉಚ್ಚಸ್ಥಾನಕ್ಕೆ ಬರುವ ಗುರುವು ನಿಮಲ್ಲಿ ಗುರುತರ ಜವಾಬ್ದಾರಿ ತರಲಿದ್ದಾನೆ. ಚಿಕ್ಕವಯಸ್ಸಿನಲ್ಲೇ ಹಿರಿಯರಂತೆ ಆಲೋಚಿಸುವ ಗುಣ ಮೈಗೂಡಲಿದೆ. ಆರೋಗ್ಯದಲ್ಲೂ ಚೇತರಿಕೆ ಉಂಟಾಗಲಿದೆ. ಆದರೆ ಅಲೆದಾಟ ತಪ್ಪದು. ದೇಶ-ವಿದೇಶಗಳ ಓಡಾಟ, ಸ್ಥಳ ಪರಿವರ್ತನೆಗಳು ನಿಮ್ಮನ್ನು ಹೈರಾಣು ಮಾಡುತ್ತವೆ. ನವೆಂಬರ್ ನಂತರ ಶುಕ್ರ-ಸೂರ್ಯ-ಬುಧರಿಂದ ಗೃಹ-ವಾಹನಾದಿ ಶುಭಫಲವನ್ನೂ ಕಾಣುತ್ತಿರಿ.
ಸಿಂಹ:
ಈ ವರ್ಷ ನಿಮ ಪಾಲಿಗೆ ಮಿಶ್ರಫಲ. ಮೇ ನಂತರ ಗುರುವು ಪ್ರವೇಶಿಸುವುದರಿಂದ ವ್ಯಾಪಾರದಲ್ಲಿ ಲಾಭ. ಗುರುಬಲದಿಂದಾಗಿ ವಿಶೇಷ ಅನುಕೂಲ, ವಿವಾಹಾದಿ ಮಂಗಳ ಕಾರ್ಯಗಳು ನಡೆಯಲಿವೆ. ಆದರೆ ಸಪ್ತಮದ ರಾಹು ಹಾಗೂ ಜನದ ಕೇತು ನಿಮ ಆರೋಗ್ಯವನ್ನೂ ಹಾಗೂ ನಿಮ ದಾಂಪತ್ಯ ಜೀವನವನ್ನುಕಾಡಬಹುದು ಅಕ್ಟೋಬರ್ ನಂತರ ಹೆಚ್ಚಿನ ವ್ಯಯ. ಆಲೋಚನಾ ಶಕ್ತಿ ಕಳೆದುಕೊಳ್ಳುವಿರಿ ಎಚ್ಚರ . ಜನವರಿ ನಂತರ ಮತ್ತೆ ಶುಭಫಲಗಳನ್ನು ಕಾಣುವಿರಿ. ಮನೆಯಲ್ಲಿ ಶುಭಕಾರ್ಯಗಳು ಉಂಟಾಗಲಿವೆ. ಕಳೆದುಕೊಂಡ ಹಣ ಮತ್ತೆ ಕೈಸೇರಲಿದೆ. ದೇವರ ಅನುಗ್ರಹದಿಂದ ಉತ್ತಮ ಫಲ ಕಾಣುತ್ತೀರಿ.
ಕನ್ಯಾ :
ಅಪನಂಬಿಕೆಗಳು ನಿಮನ್ನು ಕಾಡಬಹುದು. ಮೇ ತಿಂಗಳ ನಂತರ ಕರ್ಮ ಸ್ಥಾನಕ್ಕೆ ಪ್ರವೇಶ ಮಾಡುವ ಗುರುವು, ವೃತ್ತಿಯಲ್ಲಿ ಸ್ವಲ್ಪ ಬಲವನ್ನು ಕೊಡುತ್ತಾನೆ. ಷಷ್ಠದ ರಾಹು ಧೈರ್ಯ-ಸಾಹಸ ಕೊಟ್ಟು ಹುಂಬತನ ತುಂಬಲಿದ್ದಾನೆ. ಇದರಿಂದ ನಷ್ಟವೂ ಆಗಲಿದೆ. ಅಕ್ಟೋಬರ್ ನಂತರ ಒಂದು ವಿಶೇಷ ಅನುಕೂಲ ಉಂಟಾಗಲಿದೆ. ಲಾಭ-ಬಡ್ತಿಯಂಥ ವಿಶೇಷ ಶುಭಫಲವನ್ನು ಹೊಂದುತ್ತೀರಿ. ವಿದೇಶ ಸಂಪರ್ಕಗಳು ಏರ್ಪಾಡಾಗಲಿವೆ. ಹಾಲು-ಹೈನುಗಾರರಿಗೆ ವಿಶೇಷ ಲಾಭವಿದೆ. ಶಾಲೆ-ಬೋಧನಾ ಕ್ಷೇತ್ರದವರಿಗೆ ವಿಶೇಷ ಲಾಭ. ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಬುಧ-ಶುಕ್ರರು ಬಲ ಸ್ಥಾನಗಳಲ್ಲಿ ಸಂಚರಿಸುವಾಗ ಹೆಚ್ಚಿನ ಶುಭಫಲ ಇದ್ದೇ ಇರಲಿದೆ ಚಿಂತಿಸಬೇಡಿ
ತುಲಾ :
ಕಠಿಣ ಕೆಲಸಗಳು ಸುಲಭವಾಗುತ್ತವೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಧರ್ಮ ಕಾರ್ಯಗಳು ನಡೆಯಲಿವೆ. ದೇವಸ್ಥಾನ-ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೀರಿ. ಗುರು-ಹಿರಿಯರಿಂದ ಉತ್ತಮ ಮಾರ್ಗದರ್ಶನ ಸಿಗಲಿದೆ. ಸಹೋದರರಲ್ಲಿ ಸಹಕಾರ. ಆದಾಯದಲ್ಲಿ ಹೆಚ್ಚಳ, ಅಕ್ಟೋಬರ್ ನಂತರ ವೃತ್ತಿಯಲ್ಲಿ ವಿಶೇಷ ಅನುಕೂಲ ಉಂಟಾಗಲಿದೆ. ಜಲ-ಕೃಷಿ ಕ್ಷೇತ್ರ ವ್ಯಾಪಾರದಲ್ಲಿ ವಿಶೇಷ ಲಾಭ ಕಾಣುತ್ತೀರಿ. ಜನವರಿಯಿಂದ ಮತ್ತೆ ಪುಣ್ಯಕಾರ್ಯಗಳಲ್ಲಿ ಭಾಗಿಯಾಗುವಿರಿ. ಉತ್ತಮರ ಭೇಟಿಯಾಗಲಿದೆ. ವಿದ್ಯಾರ್ಥಿಗಳಿಗೂ ಅನುಕೂಲವಿದೆ. ಆದಾಯ ಹೆಚ್ಚಲಿದೆ. ಹೆಚ್ಚಿನ ಸಂತೋಷ ಸಿಗಲಿದೆ.
ವೃಶ್ಚಿಕ:
ಗೊಂದಲಗಳು ಹೆಚ್ಚಲಿವೆ. ಆಲೋಚನಾ ಶಕ್ತಿ ಕುಸಿಯುವ ಆತಂಕ . ಮೇ ತಿಂಗಳವರೆಗೆ ಗುರುಬಲ. ಮೇ 14 ರ ನಂತರ ಗುರುವು ಅಷ್ಟಮ ಸ್ಥಾನಕ್ಕೆ ಪ್ರವೇಶಿಸುವುದರಿಂದ ಆರೋಗ್ಯದ ಬಗ್ಗೆ ಎಚ್ಚರ. ಹೆಚ್ಚಿನ ನಷ್ಟ ಫಲವಿದ್ದರೂ ಒಳ್ಳೆಯ ಕಾರ್ಯಕ್ಕೆ ಭಗವಂತ ಕಾಪಾಡುತ್ತಾನೆ. ಪ್ರಯಾಣದಲ್ಲಿ ಎಚ್ಚರವಹಿಸಿ. ಅಕ್ಟೋಬರ್ ನಂತರ ಬದುಕಿನಲ್ಲಿ ಒಂದು ವಿಶೇಷ ತಿರುವನ್ನು ಪಡೆಯುವಿರಿ. ಭಾಗ್ಯ ಸ್ಥಾನವನ್ನು ಪ್ರವೇಶಿಸುವ ಗುರು ಸೌಭಾಗ್ಯವನ್ನು ತರಲಿದ್ದಾನೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಬೋಧನಾ ಕ್ಷೇತ್ರದಲ್ಲಿ ಲಾಭ. ಹಣ-ಮಾತಿನ ವಿಚಾರದಲ್ಲಿ ಎಚ್ಚರವಿರಲಿ .
ಧನುಸ್ಸು :
ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು. ಮೇ ಮಧ್ಯಬಾಗದಲ್ಲಿ ಗುರು ಬಲದಿಂದ ವಿಶೇಷ ಅನುಕೂಲ ಕಾಣುತ್ತೀರಿ. ವಿವಾಹ ಕಾರ್ಯಗಳು ನಡೆಯಲಿವೆ. ವ್ಯಾಪಾರದಲ್ಲಿ ಶುಭ ಉಂಟಾಗಲಿದೆ. ಗೃಹ-ನಿವೇಶನ ಖರೀದಿ ಸಾಧ್ಯವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ವಾತಾವರಣ ಉಂಟಾಗಲಿದೆ. ವಾಹನ ಖರೀದಿ ಸಾಧ್ಯತೆ ಇದೆ. ನವೆಂಬರ್ ವೇಳೆಗೆ ಶುಕ್ರ-ಬುಧರಿಂದ ವೃತ್ತಿಯಲ್ಲಿ ಅನುಕೂಲವಿದೆ. ವಸಾ್ತ್ರಭರಣ ಕ್ಷೇತ್ರದಲ್ಲಿ ಹೆಚ್ಚಿನ ಲಾಭಗಳಿಸುವಿರಿ. ಕಲಾವಿದರಿಗೆ ವಿಶೇಷ ಗೌರವ ಪ್ರಾಪ್ತಿಯಾಗಲಿದೆ. ಜನವರಿಯಿಂದ ಮತ್ತೆ ಗುರುಬಲ ಬಂದು ನಿಮ್ಮ ಜೀವನ ಸುಖಮಯವಾಗಲಿದೆ. ಅಂದುಕೊಂಡ ಆಸೆ-ಆಕಾಂಕ್ಷೆಗಳು ಈಡೇರಲಿವೆ.
ಮಕರ :
ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಅಧ್ಯಯನ ಶೀಲರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ. ಮೇ ತಿಂಗಳ 14 ರ ನಂತರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಲಿದೆ. ಹೆಚ್ಚಿನ ವ್ಯಯ ಸಂಭವಿಸಲಿದೆ. ಹಿತ ಶತ್ರುಗಳ ಬಾಧೆ ಕಾಡಲಿದೆ. ಧನ ಸ್ಥಾನಕ್ಕೆ ಬರುವ ರಾಹು ದುಡಿದದ್ದನ್ನೆಲ್ಲಾ ಕಳೆಯುತ್ತಾನೆ. ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆ-ಘರ್ಷಣೆ ಉಂಟಾಗಲಿದೆ. ಒರಟು-ಕಹಿ ಮಾತುಗಳಿಂದ ಹತ್ತಿರದವರನ್ನು ಕಳೆದುಕೊಳ್ಳುವಿರಿ. ಹೆಚ್ಚು ಮೌನ ವಹಿಸಿ. ಅಷ್ಟಮದ ಕೇತು ಆರೋಗ್ಯ ಕ್ಷೀಣಿಸುತ್ತಾನೆ. ಅವಮಾನ ಇತ್ಯಾದಿ ತೊಂದರೆಗಳುಂಟಾಗಬಹುದು. ಜಲೋತ್ಪನ್ನ ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಿನ ಲಾಭಗಳಿಸುತ್ತೀರಿ. ಜನವರಿಯಲ್ಲಿ ಆರೋಗ್ಯ ಬಾಧೆ, ಸಾಲ-ಶತ್ರುಗಳ ಭಯ ನಿಮನ್ನು ಕಾಡಲಿದೆ. ಶುಕ್ರ-ಬುಧರಿಂದ ವೃತ್ತಿಯಲ್ಲಿ ವಿಶೇಷ ಅನುಕೂಲ-ಬಡ್ತಿ, ಗೌರವಗಳು ಉಂಟಾಗಲಿವೆ.
ಕುಂಭ :
ಶನೈಶ್ಚರ ರಾಹುವಿನ ಜತೆ ಸೇರಿ ನಿಮ್ಮ ಮಾತಿನ ಬಲ ಕಡಿಮೆಗೊಳಿಸುತ್ತಾನೆ. ಪತ್ರಿಕಾ ರಂಗದವರು-ಉಪನ್ಯಾಸಕರು ಎಚ್ಚರವಹಿಸಿ. ಕುಟುಂಬ ಕಲಹಗಳು ಶುರುವಾಗಲಿವೆ. ಮನೆ ಸೇರದೆ ಸಂಚಾರವೇ ಜೀವನ ಶೈಲಿಯಾಗುತ್ತದೆ. ಮೇ 14 ರ ನಂತರದ ಬುದ್ಧಿಬಲ-ಮನೋಬಲಗಳು ಮೈಗೂಡಿ ವಿಶೇಷ ಸಾಧನೆಯಲ್ಲಿ ತೊಡಗುವಿರಿ. ಬರವಣಿಗೆ-ಅಧ್ಯಯನ-ಸಂಶೋಧನೆಗಳಲ್ಲಿ ತೊಡಗುವಿರಿ. ಪ್ರಶಸ್ತಿ-ಪುರಸ್ಕಾರಗಳು ಒಲಿಯಲಿವೆ. ಮಕ್ಕಳ ಒಡನಾಟ ಮನಸ್ಸಿಗೆ ಮುದ ಕೊಡಲಿದೆ. ಸಂತಾನ ಸೂಚನೆಯಂಥಾ ಶುಭಫಲಗಳು ಉಂಟಾಗಲಿವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಸಪ್ತಮದ ಕೇತುವಿನಿಂದ ದಾಂಪತ್ಯದಲ್ಲಿ ಮನಸ್ತಾಪ-ಭಿನ್ನಾಭಿಪ್ರಾಯ -ಕಲಹಗಳು ತಾರಕಕ್ಕೇರುತ್ತವೆ. ನಂಬಿದವರೇ ಮೋಸ ಮಾಡಬಹುದು. ಜನವರಿಯಲ್ಲಿ ಮತ್ತೆ ಗುರುಬಲ ಮರುಕಳಿಸುವುದರಿಂದ ಮತ್ತೆ ಶುಭಫಲವನ್ನು ಕಾಣುವಿರಿ. ಕಳೆದು ಹೋಗಿದ್ದ ನೆಮದಿ ಮತ್ತೆ ಮರಳಿ ಬರಲಿದೆ.
ಮೀನ:
ಗೃಹ-ನಿವೇಶನಾದಿ ಶುಭ ಫಲಗಳನ್ನು ಹೊಂದುವಿರಿ. ಆದರೆ ಆರೋಗ್ಯದ ಬಗ್ಗೆ ಎಚ್ಚರ. ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ಅಕ್ಟೋಬರ್ ತಿಂಗಳಲ್ಲಿ ಒಂದು ವಿಶೇಷ ಬದಲಾವಣೆ ಕಾಣುತ್ತೀರಿ. ಊಹಿಸಲಾಗದ ವಿಶಿಷ್ಟ ಶುಭಫಲವನ್ನು ಕಾಣುತ್ತೀರಿ. ಪಂಚಮ ಸ್ಥಾನ ಪ್ರವೇಶಿಸುವ ಗುರುವಿನಿಂದ ಉನ್ನತ ಸ್ಥಾನ-ಮಾನ ಪ್ರಾಪ್ತಿಯಾಗಲಿದೆ. ಅಧ್ಯಯನ-ಸಂಶೋಧನೆಗಳಲ್ಲಿ ಸಹಕಾರ ಸಿಗಲಿದೆ. ಪ್ರಶಸ್ತಿ-ಪುರಸ್ಕಾರಗಳು ದೊರೆಯಲಿವೆ. ವೃತ್ತಿಯಲ್ಲಿ ವಿಶೇಷ ಅನುಕೂಲ ಉಂಟಾಗಲಿವೆ. ಜನವರಿಯಿಂದ ಮತ್ತೆ ಸಾಧಾರಣ ಫಲ ಇರಲಿದೆ.