Saturday, July 27, 2024
Homeರಾಷ್ಟ್ರೀಯಹೊತ್ತಿ ಉರಿದ ಚಲಿಸುತ್ತಿದ್ದ ಬಸ್, 9 ಮಂದಿ ಸಜೀವ ದಹನ

ಹೊತ್ತಿ ಉರಿದ ಚಲಿಸುತ್ತಿದ್ದ ಬಸ್, 9 ಮಂದಿ ಸಜೀವ ದಹನ

ಗುರುಗ್ರಾಮ್‌‍, ಮೇ 18 (ಪಿಟಿಐ) : ಹರಿಯಾಣದ ನುಹ್‌ ಜಿಲ್ಲೆಯ ತೌರು ಬಳಿ ಇಂದು ಮುಂಜಾನೆ ಚಲಿಸುತ್ತಿದ್ದ ಬಸ್‌‍ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಒಂಬತ್ತು ಜನರು ಸಜೀವ ದಹನಗೊಂಡಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಂಡ್ಲಿ-ಮನೇಸರ್‌-ಪಲ್ವಾಲ್‌ (ಕೆಎಂಪಿ) ಎಕ್‌್ಸಪ್ರೆಸ್‌‍ವೇಯಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಸ್‌‍ನಲ್ಲಿ ಪಂಜಾಬ್‌ನ ಹೋಶಿಯಾರ್‌ಪುರ ಮತ್ತು ಲುಧಿಯಾನ ನಿವಾಸಿಗಳಾದ ಮಥುರಾ ಮತ್ತು ವಂದಾವನದ ಯಾತ್ರಿ ಪಟ್ಟಣಗಳಿಂದ ಹಿಂತಿರುಗುತ್ತಿದ್ದ ಸುಮಾರು 60 ಜನ ಪ್ರಯಾಣಿಸುತ್ತಿದ್ದು, ಇವರೆಲ್ಲರೂ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.

ಆರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದಂತೆ 9 ಮಂದಿ ಬೆಂಕಿಗೆ ಅಹುತಿಯಾಗಿದ್ದಾರೆ. ಹದಿನೈದು ಜನರು ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲಾ ಗಾಯಾಳುಗಳು ಸ್ಥಿರರಾಗಿದ್ದಾರೆ ಎಂದು ಸದರ್‌ ಟಾರು ಸ್ಟೇಷನ್‌ ಹೌಸ್‌‍ ಆಫೀಸರ್‌ ಇನ್ಸ್ಪೆಕ್ಟರ್‌ ಜಿತೇಂದ್ರ ಕುಮಾರ್‌ ತಿಳಿಸಿದ್ದಾರೆ.

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಕೆಲವರು ದ್ವಿಚಕ್ರವಾಹನದಲ್ಲಿ ಬಸ್‌‍ ಅನ್ನು ಹಿಂಬಾಲಿಸಿ ಚಾಲಕನನ್ನು ನಿಲ್ಲಿಸುವಂತೆ ಹೇಳಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರು ಪೊಲೀಸ್‌‍ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ

RELATED ARTICLES

Latest News