Homeರಾಷ್ಟ್ರೀಯಹೌರಾ ಬಾಂಬ್‌ ಬ್ಲಾಸ್ಟ್‌ : ಟಿಎಂಸಿ ನಾಯಕರು ಮುಂಬೈನಲ್ಲಿ ಸೆರೆ

ಹೌರಾ ಬಾಂಬ್‌ ಬ್ಲಾಸ್ಟ್‌ : ಟಿಎಂಸಿ ನಾಯಕರು ಮುಂಬೈನಲ್ಲಿ ಸೆರೆ

ಮುಂಬೈ,ಮೇ 23-ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಬಂಗಾಳದಲ್ಲಿ ಬಾಂಬ್‌ ಸ್ಫೋಟಿಸಿ ಪರಾರಿಯಾಗಿದ್ದ ಮೂವರು ತೃಣಮೂಲ ಕಾಂಗ್ರೆಸ್‌‍ ಪಕ್ಷದ ಮೂವರು ನಾಯಕರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಮೀಮ್‌ ಅಹಮದ್‌, ಜಮೀಲ್‌ ಅಖ್ತರ್‌ ಮತ್ತು ಅಫ್ತಾಬ್‌ ಅನ್ವರ್‌ ಎಂದು ಗುರುತಿಸಲಾಗಿದೆ.

ಮೊದಲನೇ ಆರೋಪಿ ಶಮೀಮ್‌ ಅಹಮದ್‌ ಟಿಎಂಸಿ ಪಕ್ಷದ ಕೌನ್ಸಿಲರ್‌ ಶಮೀಮ ಬಾನೋ ಅವರ ಪತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಸಾಕಷ್ಟು ಗಲಬೆ ಗೊಂದಲಗಳು ನಡೆದಿದ್ದವು.
ಅದರಲ್ಲೂ ಹೌರಾದ ಶಿಬ್‌ಪುರ್‌ನಲ್ಲಿ ಬಂಧಿತ ಮೂವರು ಆರೋಪಿಗಳು ಬಾಂಬ್‌ ಸ್ಪೋಟಿಸಿ ಮುಂಬೈಗೆ ಪರಾರಿಯಾಗಿದ್ದರು.

ಆರೋಪಿಗಳಿಗಾಗಿ ಬಂಗಾಳದಲ್ಲಿ ತೀವ್ರ ಶೋಧ ನಡೆಸಿದರೂ ಅವರ ಬಂಧನ ಸಾಧ್ಯವಾಗಿರಲಿಲ್ಲ. ಬಂಗಾಳದಿಂದ ತಲೆಮರೆಸಿಕೊಂಡು ಮುಂಬೈನಲ್ಲಿ ನೆಲೆಸಿದ್ದ ಪಾತಕಿಗಳನ್ನು ಬಂಧಿಸಿರುವ ಅಲ್ಲಿನ ಪೊಲೀಸರು ಆರೋಪಿಗಳನ್ನು ಕೊಲ್ಕತ್ತಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

RELATED ARTICLES

Latest News