Homeರಾಜ್ಯಕೆಪಿಎಸ್‌‍ಸಿ ಅಕ್ರಮ : ನಾಪತ್ತೆಯಾಗಿದ್ದ ಶಾಂತಾ ಹೊಸಮನಿ ಸಿಐಡಿ ಮುಂದೆ ಹಾಜರು

ಕೆಪಿಎಸ್‌‍ಸಿ ಅಕ್ರಮ : ನಾಪತ್ತೆಯಾಗಿದ್ದ ಶಾಂತಾ ಹೊಸಮನಿ ಸಿಐಡಿ ಮುಂದೆ ಹಾಜರು

ಬೆಂಗಳೂರು,ಸೆ.17- ಕೆಪಿಎಸ್‌‍ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಸದಸ್ಯೆ ಶಾಂತಾ ಹೊಸಮನಿ ಕೊನೆಗೂ ಸಿಐಡಿ ಮುಂದೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಕೆಎಎಸ್‌‍ ಸೇರಿದಂತೆ 3 ಪ್ರಮುಖ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಕೆಪಿಎಸ್‌‍ಸಿ ಸದಸ್ಯೆ ಶಾಂತಾ ಹೊಸಮನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ 52ನೇ ಸಿಸಿಹೆಚ್‌ ನ್ಯಾಯಾಲಯ ಕಳೆದವಾರ ವಜಾಗೊಳಿಸಿತ್ತು.
ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಐಡಿ ಮುಂದೆ ಶಾಂತಾ ಅವರು ಹಾಜರಾಗಿದ್ದಾರೆ.

ಕೆಎಎಸ್‌‍ , ಪಶುವೈದ್ಯಾಧಿಕಾರಿ ಹಾಗೂ ಗ್ರಾಮೀಣಾಭಿವದ್ಧಿ ಇಲಾಖೆಯ ಎಇಇ ಹ್ದುೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದು ಹ್ದುೆ ಕೊಡಿಸಲು ಮುಂದಾಗಿದ್ದಾರೆ ಎಂಬ ಗಂಭೀರ ಆರೋಪಗಳು ಇವರ ಮೇಲಿವೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ವಿಧಾನಸೌಧ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಜಾರಿ ನಿರ್ದೇಶನಾಲಯ ಹಾಗೂ ಸಿಐಡಿ ಪ್ರಕರಣ ತನಿಖೆ ಕೈಗೆತ್ತಿಕೊಂಡ ಬಳಿಕ ಅವರು ತಲೆಮರೆಸಿಕೊಂಡಿದ್ದರು. ಶಾಂತಾ ಹೊಸಮನಿ ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ಲುಕ್‌ಔಟ್‌ ನೋಟಿಸ್‌‍ ಕೂಡ ಹೊರಡಿಸಲಾಗಿತ್ತು.

RELATED ARTICLES
spot_img

Latest News