Thursday, October 24, 2024
Homeಮನರಂಜನೆಕನ್ನಡಿಗರ ಆರಾಧ್ಯ ದೈವ ಡಾ.ರಾಜ್ ಹುಟ್ಟುಹಬ್ಬ, ಸಮಾಧಿ ಬಳಿ ಹರಿದುಬಂದ ಅಭಿಮಾನಿ ದೇವರುಗಳು

ಕನ್ನಡಿಗರ ಆರಾಧ್ಯ ದೈವ ಡಾ.ರಾಜ್ ಹುಟ್ಟುಹಬ್ಬ, ಸಮಾಧಿ ಬಳಿ ಹರಿದುಬಂದ ಅಭಿಮಾನಿ ದೇವರುಗಳು

ಬೆಂಗಳೂರು, ಏ.24- ರಾಜ್ಯದಲ್ಲೆಡೆ ಅಣ್ಣಾವ್ರ ಹುಟ್ಟು ಹಬ್ಬವನ್ನು ಅಭಿಮಾನಿಗಳು, ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ 95ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದರು. ಇಂದು ರಾಜಕುಟುಂಬದ ಎಲ್ಲರೂ ಕಂಠೀರವ ಸ್ಟುಡಿಯೋ ಬಳಿಯಿರುವ ಅಣ್ಣಾವ್ರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದರು. ಸಾವಿರಾರು ಅಭಿಮಾನಿಗಳು ಕುಟುಂಬದವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ವರನಟ ಡಾ ರಾಜ್‍ಕುಮಾರ್ ಹುಟ್ಟುಹಬ್ಬ ಎಂದರೆ ಕನ್ನಡಿಗರಿಗೆ, ಕನ್ನಡ ಕಲಾ ರಸಿಕರಿಗೆ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಮಾಡಿದಷ್ಟು ಸಂಭ್ರಮ. ಕಲಾ ಪ್ರಪಂಚದ ಸಾಮ್ರಾಟರು, ಕಲೆಯ ಉತ್ತುಂಗದ ಶಿಖರವೇರಿ ಕಲಾ ಸರಸ್ವತಿಯನ್ನು ದರ್ಶನ ಮಾಡಿ ಬಂದ ಏಕ ಮಾತ್ರ ನಟ.
ನಟರಾಗಿ ಹೇಳುವುದಾದರೆ ನಿರಂತರವಾಗಿ ರೂಢಿಸಿಕೊಂಡಿದ್ದ ಅವರ ಕಲಿಕೆಯ ಮನೋಧರ್ಮ. ಅವರಿಗಿದ್ದ ಅನುಭವದಲ್ಲಿ ಯಾರನ್ನೂ ಬೇಕಾದರೂ ನಿರ್ದೇಶನ ಮಾಡಬಹುದಿತ್ತು, ಅವರಿಗಿದ್ದ ಕಲಿಕೆಯಿಂದ ಯಾವ ದೃಶ್ಯವನ್ನು ಬೇಕಾದರೂ ತಮಗೆ ಬೇಕಾದಂತೆ ಮಾಡಬಹುದಿತ್ತು.

ಅವರಿಗಿದ್ದ ಸೌಕರ್ಯಗಳಿಂದ ಏನನ್ನೂ ಬೇಕಾದರೂ ಪಡೆಯಬಹುದಿತ್ತು. ಆದರೆ, ರಾಜ್‍ಕುಮಾರ್ ಅದ್ಯಾವೂದನ್ನೂ ಪಡೆಯಲಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ ಪಾತ್ರ ನನ್ನ ಚಿತ್ ಮಾಡಬೇಕೇ ಹೊರತು, ನಾನು ಪಾತ್ರವನ್ನು ಚಿತ್ ಮಾಡುವುದಲ್ಲ. ನಟ ಪಾತ್ರವನ್ನು ಸೋಲಿಸಬಾರದು, ಪಾತ್ರವೇ ನಟನನ್ನು ಸೋಲಿಸಬೇಕು.

ಪಾತ್ರವೇ ಹಿರಿದಾಗಿ ಕಂಡು, ಆ ಪಾತ್ರಧಾರಿ ಮರೆಯಾಗಬೇಕು. ನಟ, ಪಾತ್ರಕ್ಕೆ ಮಿಗಿಲಾದವನು ಅಲ್ಲ ಎಂಬುದು ಅವರ ನಂಬಿಕೆ. ರಾಜ್ ತೋರಿದ ಈ ಮನೋಧರ್ಮ ಈಗಿನ ನಟರು ಅಳವಡಿಸಿಕೊಂಡರೆ ಸಾಕು.

ರಾಜ್ ಕುಮಾರ್ ಅವರು ಯಾವತ್ತೂ ನನ್ನ ಕೆಲಸ ಅಂದಿಲ್ಲ. ನಮ್ಮ ಕೆಲಸ ಅಂದರು. ಶೂಟಿಂಗ್ ಸೆಟ್ ನಲ್ಲಿ ಎಲ್ಲರ ಜತೆ ಕೂರುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು. ಕಷ್ಟ- ಸುಖ ಕೇಳುತ್ತಿದ್ದರು. ಅನೋನ್ಯತೆ- ಸಂಬಂಧ, ಸ್ನೇಹ ಬೆಳೆಸುತ್ತಿದ್ದರು. ಸಿನಿಮಾ ಒಂದು ತಂಡದ ಸಾಧನೆ ಹೊರತು, ಒಬ್ಬ ವ್ಯಕ್ತಿಯ ಕೆಲಸ ಅಂದುಕೊಂಡಿದ್ದರು. ಅವರಗೆ ಇದ್ದ ಈ ತಂಡದ ಸೂರ್ತಿ, ವಿನಮ್ರತೆ, ಶಿಸ್ತು ಈಗಿನ ಚಿತ್ರರಂಗಕ್ಕೆ ಅಣ್ಣಾವ್ರರ ಈ ಪಾಠ-ನಡೆ ಕೂಡ ಅತ್ಯಗತ್ಯ.

ರಾಜ್ ಕನ್ನಡ ನಾಡಿನ ಸಾಂಸ್ಕøತಿಕ ಶಕ್ತಿಯಾಗಿ ಬೆಳೆದುದರ ಹಿಂದೆ ಅವರ ಅಭಿಮಾನಿಗಳ ಬಲವಿದೆ. ವರನಟನ ಮೇಲಿನ ಅಭಿಮಾನವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಹಲವು ಜೀವಗಳು ನಮ್ಮ ನಡುವೆ ಇವೆ. ಏ.24ರ ನಟ ಸಾರ್ವಭೌಮನ ಜನ್ಮದಿನದ ಹೊತ್ತಿನಲ್ಲಿ ಅವರ ಅಭಿಮಾನಿ ದೇವರುಗಳು, ನೇತ್ರದಾನ ರಕ್ತದಾನ, ಅನ್ನದಾನ ದಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತನ್ನ ದೇವರನ್ನ ಇಂದಿಗೂ ನೆನೆದು ಆರಾಸುತ್ತಾರೆ.

ಜಾತಿ ಧರ್ಮಗಳ ಹಂಗಿನಿಂದ ದೂರ ಬದುಕಿದ ವ್ಯಕ್ತಿತ್ವ ಅವರದು. ತಾನು ಕೆಲಸ ಮಾಡುವ ವಾತಾವರಣದಲ್ಲಿ ಜಾತಿ-ಧರ್ಮಗಳ ಪ್ರಸ್ತಾಪವಾಗುವ ಆಗಿರಲಿಲ್ಲ. ಚೆನ್ನೈನಲ್ಲಿ ಒಮ್ಮೆ ಒಬ್ಬರು ಜಾತಿಯ ಬಗ್ಗೆ ಮಾತನಾಡಿದಾಗ ತುಂಬಾ ಕೋಪಗೊಂಡು ಇನ್ನು ಮುಂದೆ ಈ ರೀತಿಯ ಪದಗಳು ನನ್ನ ಮುಂದೆ ಬರಬಾರದು ಎಂದು ಎಚ್ಚರಿಕೆ ನೀಡಿದ್ದರು. ರಾಯರ ಪಾತ್ರ ಮಾಡುವಾಗಲೂ ಕೆಲವರ್ಗ ಅದನ್ನು ವಿರೋಧಿಸಿದಾಗ ಬೇರೆಯವರ ಭಾವನೆಗಳಿಗೆ ನೋವುಂಟಾಗುವುದಾದರೆ ಪಾತ್ರ ಮಾಡುವುದು ಬೇಡ ಎಂದಿದ್ದರಂತೆ. ಅಷ್ಟು ಮೃದು ಸ್ವಭಾವದ ವ್ಯಕ್ತಿತ್ವ ಅವರದ್ದು.

ಅವರು ನಮ್ಮ ಕನ್ನಡ ನಾಡು, ಭಾಷೆ ಮತ್ತು ಕಲಾಪ್ರಪಂಚದ ರಾಯಭಾರಿ. ಸದಾ ಕನ್ನಡಕ್ಕಾಗಿ ಮಿಡಿಯುತ್ತಿದ್ದ ಹೃದಯ. ಇತಿಹಾಸ ಕಂಡುಕೇಳರಿಯದ ಗೋಕಾಕ್ ಚಳುವಳಿ ಯಂತಹ ದೊಡ್ಡ ಕನ್ನಡಪರ ಚಳುವಳಿಯನ್ನು ಮಾಡಿ ಕನ್ನಡಿಗರ ಎದೆಯಲ್ಲಿ ಕನ್ನಡತನವನ್ನು ಎಚ್ಚರಿಸಿದ ಕನ್ನಡ ಸಂತ. ಕಲಿಯುವವರಿಗೆ ಇವರು ವಿಶ್ವಕೋಶ. ಬಗೆದಷ್ಟು ತೆಗೆದಷ್ಟು ಕಲಾಸಂಪತ್ತು ಹೊರಹೊಮ್ಮುತ್ತದೆ. ಯಾರ್ಯಾರು ಎಷ್ಟೆಷ್ಟು ಬಗೆದು ತೆಗೆಯುತ್ತಾರೊ ಅದು ಅವರ ಅವರವರ ಸಾಮಥ್ರ್ಯಕ್ಕೆ ಬಿಟ್ಟಿದ್ದು.

RELATED ARTICLES

Latest News