Sunday, September 8, 2024
Homeಜಿಲ್ಲಾ ಸುದ್ದಿಗಳು | District Newsಪತಿ ಮೇಲಿನ ಸಿಟ್ಟಿಗೆ ಹೆತ್ತ ಮಗುವನ್ನು ಮೊಸಳೆ ಬಾಯಿಗೆ ಹಾಕಿದ ಪತ್ನಿ..!

ಪತಿ ಮೇಲಿನ ಸಿಟ್ಟಿಗೆ ಹೆತ್ತ ಮಗುವನ್ನು ಮೊಸಳೆ ಬಾಯಿಗೆ ಹಾಕಿದ ಪತ್ನಿ..!

ಕಾರವಾರ,ಮೇ.5- ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.ದಂಪತಿ ನಡುವಿನ ಜಗಳದಿಂದ ಸಿಟ್ಟಿಗೆದ್ದ ತಾಯಿ ಹೆತ್ತ ಕಂದಮ್ಮನನ್ನು ಮೊಸಳೆ ಬಾಯಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಆಲಮಡ್ಡಿಯಲ್ಲಿ ನಡೆದಿದೆ.

ವಿನೋದ (6) ಮೊಸಳೆ ಬಾಯಿಗೆ ಸಿಲುಕಿ ಮೃತಪಟ್ಟ ಬಾಲಕ.ಸಾವಿತ್ರಿ ಹಾಗೂ ರವಿಕುಮಾರ್‌ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತಾರಕಕ್ಕೇರಿದ್ದು, ಸಿಟ್ಟಿಗೆದ್ದ ಸಾವಿತ್ರಿ ತನ್ನ ಮಗನನ್ನು ಮನೆಯ ಸಮೀಪವಿರುವ ಮೊಸಳೆಗಳಿದ್ದ ನಾಲೆಗೆ ಎಸೆದಿದ್ದಾಳೆ.

ನಂತರ ಪಶ್ಚಾತ್ತಾಪದಿಂದ ತನ್ನ ತಪ್ಪಿನ ಅರಿವಾಗಿ ನಾಲೆಗೆ ಎಸೆದಿರುವುದಾಗಿ ತಿಳಿಸಿದ್ದಾಳೆ. ಕೂಡಲೇ ಬಾಲಕನ ಪತ್ತೆಗಾಗಿ ಶೋಧ ನಡೆಸಿದರಾದರೂ ಅಷ್ಟರೊಳಗಾಗಿ ಬಾಲಕ ಮೊಸಳೆ ಬಾಯಿಗೆ ಆಹಾರವಾಗಿದ್ದು, ಶವವಾಗಿ ಪತ್ತೆಯಾಗಿದ್ದಾನೆ.

ಒಂದು ಕ್ಷಣ ಶಾಂತವಾಗಿ ಯೋಚಿಸಿ, ಕೋಪದ ಕೈಗೆ ಬುದ್ಧಿ ಕೊಡದೆ ಯೋಚಿಸಿದರೆ ಇಂತಹ ಅಚಾತುರ್ಯಗಳು ನಡೆಯವುದಿಲ್ಲ. ಕಷ್ಟಪಟ್ಟು ಹೆತ್ತು ಹೊತ್ತು ಸಾಕಿ ಸಲುಹಿದ ಕರುಳ ಕುಡಿಯನ್ನು ಈ ರೀತಿ ಅಮಾನೀಯವಾಗಿ ಕೊಂದ ಪಾಪ ಜೀವನ ಪರ್ಯಂತ ಕಾಡದಿರದು.

ಏನೇ ಕಷ್ಟಗಳಿದ್ದರೂ ಕುಳಿತು ಪರಸ್ಪರ ಮಾತನಾಡಿ, ಗೆಹರಿಸಿಕೊಳ್ಳಬಹುದು. ದಂಪತಿ ನಡುವಿನ ಜಗಳಕ್ಕೆ ಏನೂ ಅರಿಯದ ಕಂದಮ್ಮ ಬಲಿಯಾಗಿರುವುದು ನಿಜಕ್ಕೂ ಕರುಳು ಹಿಂಡುವಂತಿದೆ.ಈ ಸಂಬಂಧ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

RELATED ARTICLES

Latest News