Sunday, October 6, 2024
Homeಜಿಲ್ಲಾ ಸುದ್ದಿಗಳು | District Newsಸಿಡಿಲಿನಿಂದ ಹೊತ್ತಿ ಉರಿದ ದನದ ಕೊಟ್ಟಿಗೆ, ಹಸು ಸಜೀವ ದಹನ

ಸಿಡಿಲಿನಿಂದ ಹೊತ್ತಿ ಉರಿದ ದನದ ಕೊಟ್ಟಿಗೆ, ಹಸು ಸಜೀವ ದಹನ

ಪಾವಗಡ, ಮೇ 17- ನಿನ್ನೆ ರಾತ್ರಿ 10 ಗಂಟೆಯ ಸಮಯದಲ್ಲಿ ತಾಲೂಕಿನ ವೈ. ಎನ್‌. ಹೊಸಕೋಟೆ ಹೋಬಳಿಯ ರಂಗಸಮುದ್ರ ಗ್ರಾಮದ ಸರ್ವೆ ನಂಬರ್‌ 203ರ ಕರಿಯಪ್ಪ ಎನ್ನುವವರಿಗೆ ಸೇರಿದ ಜಮೀನಿನಲ್ಲಿದ್ದ ದನದ ಕೊಟ್ಟಿಗೆ ಸಿಡಿಲಿನ ರಭಸಕ್ಕೆ ಬೆಂಕಿ ಬಿದ್ದು ಕೊಟ್ಟಿಗೆ ಹೊತ್ತಿ ಉರಿದ ಪರಿಣಾಮ ನಾಲ್ಕು ರಾಸುಗಳ ಪೈಕಿ ಒಂದು ಹಸು ಸಜೀವ ದಹನವಾಗಿದ್ದು ಉಳಿದ ಮೂರು ಹಸುಗಳು ಗಂಭೀರ ಗಾಯಗಳಿಂದ ಪಾರಾಗಿವೆ.

ಈ ಅವಘಡದ ಸಮಯದಲ್ಲಿ ಬಾಲಕ ಮಹಾಲಿಂಗ ಮತ್ತು ತಾತ ಕರಿಯಪ್ಪ ಅವರ ಜೊತೆ ಗುಡಿಸಲಿನಲ್ಲಿಯೇ ಮಲಗಿದ್ದರು, ಏಕಾಏಕಿ ಬೆಂಕಿ ಹೊತ್ತು ಉರಿದಂತಹ ಸಂದರ್ಭದಲ್ಲಿ ರಾಸುಗಳನ್ನು ರಕ್ಷಿಸಲು ಹೋದಾಗ ತಾತ ಗಾಯಗೊಂಡಿದ್ದು, ಮಹಾಲಿಂಗ ಎನ್ನುವ ಬಾಲಕನ ಕೈ ಬೆಂಕಿಯ ಶಾಖಕ್ಕೆ ತುತ್ತಾಗಿ ಸುಟ್ಟಿದ್ದು ಸದ್ಯ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಅರಸೀಕೆರೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

RELATED ARTICLES

Latest News