Saturday, July 27, 2024
Homeಜಿಲ್ಲಾ ಸುದ್ದಿಗಳುಹಾಸನದ ವಿವಿಧೆಡೆ ಎಸ್‌‍ಐಟಿ ದಾಳಿ : 7 ಪೆನ್‌ ಡ್ರೈವ್‌, 6 ಹಾರ್ಡ್‌ ಡಿಸ್ಕ್‌, 4...

ಹಾಸನದ ವಿವಿಧೆಡೆ ಎಸ್‌‍ಐಟಿ ದಾಳಿ : 7 ಪೆನ್‌ ಡ್ರೈವ್‌, 6 ಹಾರ್ಡ್‌ ಡಿಸ್ಕ್‌, 4 ಲ್ಯಾಪ್ಟಾಪ್‌ ವಶಕ್ಕೆ

ಹಾಸನ, ಮೇ 17- ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ವಿಶೇಷ ತನಿಖಾ ತಂಡಕ್ಕೆ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 7 ಪೆನ್‌ಡ್ರೈವ್‌ಗಳು, ಹಾರ್ಡ್‌ ಡಿಸ್ಕ್‌ ಪತ್ತೆಯಾಗಿವೆ.

ಪ್ರೀತಂ ಗೌಡ ಆಪ್ತರು ಮತ್ತು ಪ್ರಕರಣದ ಸಂಬಂಧ ಈಗಾಗಲೇ ಬಂಧಕ್ಕೊಳಗಾಗಿರುವವರ ಮನೆಗಳ ಮೇಲೆ ಎಸ್‌‍ಐಟಿ ಕಳೆದ ಎರಡು ದಿನ ಮುಂಜಾನೆವರೆಗೂ ದಾಳಿ ನಡೆಸಿತ್ತು. ಈಗ ವಶಕ್ಕೆ ಪಡೆದಿರುವ ಪೆನ್‌ಡ್ರೈವ್‌ಗಳನ್ನು ಎಸ್‌‍ಐಟಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಿದೆ.

ಪ್ರೀತಂಗೌಡ ಆಪ್ತರ ಮನೆಯಲ್ಲಿ ದೊರೆತ ಪೆನ್‌ಡ್ರೈವ್‌ ಪ್ರಜ್ವಲ್‌ ಪ್ರಕರಣಕ್ಕೆ ಸಂಬಂಧಿಸಿದ್ದೇ ಎಂಬುದ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ತಿಳಿದುಬರಲಿದೆ. ಇನ್ನು ಹಾಸನದ 18 ಕಡೆ ನಡೆಸಿದ ದಾಳಿಯಲ್ಲಿ ಎಸ್‌‍ಐಟಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 7 ಪೆನ್‌ಡ್ರೈವ್‌, 6 ಹಾರ್ಡ್‌ ಡಿಸ್ಕ್‌, ನಾಲ್ಕು ಲ್ಯಾಪ್‌ ಟಾಪ್‌, ಮೂರು ಡೆಸ್ಕ್‌ ಟಾಪ್‌ ವಶಕ್ಕೆ ಪಡೆದಿದೆ.

ದಾಳಿ ನಡೆಸಿದ ಕಡೆಯಲ್ಲಿ ಮನೆ ಕಚೇರಿಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನೂ ಸಹ ಪರಿಶೀಲನೆ ನಡೆಸಲಾಗುತ್ತಿದೆ. ಪತ್ತೆಯಾದ ಹಾರ್ಡ್‌ಡಿಸ್ಕ್‌ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ವಿಡಿಯೋಗಳನ್ನು ಪೆನ್‌ಡ್ರೈವ್‌, ಲ್ಯಾಪ್‌ಟಾಪ್‌ ಹಾಗೂ ಡೆಸ್ಕ್‌ಟಾಪ್‌ಗೆ ಕಾಪಿ ಮಾಡಿ ನಂತರ ಬೇರೆಯವರಿಗೆ ಹಂಚಿರುವ ಆರೋಪವಿದೆ.

ಕಾಂಗ್ರೆಸ್‌‍ ಕಾರ್ಯಕರ್ತರ ಬಂಧನವಿಲ್ಲ:
ಹಾಸನದ ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾದ 33/2024 ಪ್ರಕರಣಕ್ಕೆ ಹೊಸ ಹೆಸರು ಸೇರಿಸಿ ಇಬ್ಬರನ್ನು ಬಂಧಿಸಲಾಗಿದೆ. 6 ಮತ್ತು 7 ನೇ ಆರೋಪಿಗಳಾಗಿ ಚೇತನ್‌ ಹಾಗು ಲಿಖಿತ್‌ ಎಂಬವರನ್ನು ಬಂಧಿಸಲಾಗಿದೆ.

ಇವರಿಬ್ಬರ ಬಂಧನವಾದರೂ ಮೊದಲ ಐವರು ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಕಾಂಗ್ರೆಸ್‌‍ ಕಾರ್ಯಕರ್ತರಾದ ನವೀನ್‌ ಗೌಡ, ಚೇತನ್‌ ಹಾಗೂ ಪುಟ್ಟಿ ಆಲಿಯಾಸ್‌‍ ಪುಟ್ಟರಾಜರನ್ನು ಈವರೆಗೂ ಎಸ್‌‍ಐಟಿ ಬಂಧಿಸಿಲ್ಲ. ಪೆನ್‌ಡ್ರೈವ್‌ ಹೊಂದಿದ್ದ ಮೂಲ ವ್ಯಕ್ತಿ, ಪ್ರಜ್ವಲ್‌ ಮಾಜಿ ಕಾರು ಚಾಲಕನನ್ನೂ ತನಿಖಾ ತಂಡ ವಶಕ್ಕೆ ಪಡೆದಿಲ್ಲ.

ಪ್ರಕರಣ ಸಂಬಂಧ ಕೇವಲ ಬಿಜೆಪಿ ಹಾಗೂ ಜೆಡಿಎಸ್‌‍ ಕಾರ್ಯಕರ್ತರು ಹಾಗೂ ಮುಖಂಡರನ್ನೆ ಟಾರ್ಗೆಟ್‌ ಮಾಡಲಾಗುತ್ತಿದ್ದು, ಕಾಂಗ್ರೆಸ್‌‍ ಕಾರ್ಯಕರ್ತರು ಹಾಗೂ ಇತರೆ ವ್ಯಕ್ತಿಗಳನ್ನು ಎಸ್‌‍ಐಟಿ ವಿಚಾರಣೆಗೆ ಒಳಪಡಿಸಿಲ್ಲ ಜೆಡಿಎಸ್‌‍ನ ಲೀಗಲ್‌ ಸೆಲ್‌ ನ ಪೂರ್ಣಚಂದ್ರ ಅವರು ಹಂಚಿಕೆ ಸಂಬಂಧ ಹಲವು ದಿನಗಳ ಹಿಂದೆಯೇ ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಇದಾದ ಬಳಿಕ ಐವರು ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು ಜಾಮೀನು ಅರ್ಜಿ ತಿರಸ್ಕೃತಗೊಂಡರು ಸಹ ಎಸ್‌‍ಐಟಿ ಇದನ್ನು ಗಂಭೀರವಾಗಿ ಪರಿಗಣಿಸದೆ ಆರೋಪಿಗಳ ಬಂಧನದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

RELATED ARTICLES

Latest News