Sunday, November 2, 2025
Homeಬೆಂಗಳೂರುಮದ್ಯಕ್ಕಾಗಿ ಪೀಡಿಸಿದ ವ್ಯಕ್ತಿ ಕೊಲೆ

ಮದ್ಯಕ್ಕಾಗಿ ಪೀಡಿಸಿದ ವ್ಯಕ್ತಿ ಕೊಲೆ

A man who was tortured for alcohol was killed.

ಬೆಂಗಳೂರು, ಅ.23- ಚಾಕುವಿನಿಂದ ಅಪರಿಚಿತ ವ್ಯಕ್ತಿಯ ಕುತ್ತಿಗೆಗೆ ಇರಿದು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಸುಮಾರು 35ರಿಂದ 40 ವರ್ಷದಂತೆ ಕಾಣುವ ಈ ಅಪರಿಚಿತ ವ್ಯಕ್ತಿಯ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ. ಮೋದಿ ಜಂಕ್ಷನ್ನ ಬಳಿ ಇರುವ ಬಾರ್ ಮುಂದೆ ಈ ವ್ಯಕ್ತಿ ನಿನ್ನೆ ರಾತ್ರಿ ಬಾರ್ಗೆ ಬರುವವರ ಬಳಿ ಎಣ್ಣೆ ಕೊಡಿಸುವಂತೆ ಪೀಡಿಸುತ್ತಿದ್ದನು.

- Advertisement -

ಬೆಳಗಾಗುವಷ್ಟರಲ್ಲಿ ಈ ವ್ಯಕ್ತಿಯನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಮಹಾವೀರ ಹಾರ್ಡ್ವೇರ್ ಅಂಗಡಿ ಮುಂಭಾಗ ಕೊಲೆ ಮಾಡಿ ಪರಾರಿಯಾಗಿದ್ದಾರೆ..

ಸುದ್ದಿ ತಿಳಿದು ಬಸವೇಶ್ವರ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ

- Advertisement -
RELATED ARTICLES

Latest News