Thursday, October 24, 2024
Homeಬೆಂಗಳೂರುರಹಸ್ಯ ಕಾಪಾಡುವಲ್ಲಿ ಬಿಬಿಎಂಪಿ ಯಡವಟ್ಟು

ರಹಸ್ಯ ಕಾಪಾಡುವಲ್ಲಿ ಬಿಬಿಎಂಪಿ ಯಡವಟ್ಟು

ಬೆಂಗಳೂರು,ಅ.31- ಒಂದಲ್ಲ ಒಂದು ಯಡವಟ್ಟು ಮಾಡುವ ಬಿಬಿಎಂಪಿ ಅಧಿಕಾರಿಗಳು ಇದೀಗ ಸಾರ್ವಜನಿಕರ ರಹಸ್ಯ ಕಾಪಾಡುವಲ್ಲಿಯೂ ವಿಫಲರಾಗಿದ್ದಾರೆ. ನಗರದಲ್ಲಿರುವ ಅಕ್ರಮ ಒತ್ತುವರಿ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಾರ್ವಜನಿಕರನ್ನು ನಂಬಿಸಿ ಮಹತ್ವದ ಮಾಹಿತಿ ಪಡೆದುಕೊಂಡಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ಸಾರ್ವಜನಿಕರು ನೀಡಿದ ಮಾಹಿತಿ ವಿಚಾರವನ್ನು ಬಹಿರಂಗಪಡಿಸುವ ಮೂಲಕ ನಾವು ನಂಬಿಕೆಗೆ ಅರ್ಹರಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದ್ದಾರೆ.

ಈ ಹಿಂದೆ ಸಾರ್ವಜನಿಕರಿಂದ ಒತ್ತುವರಿ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದ ಬಿಬಿಎಂಪಿಯವರ ಮಾತನ್ನು ನಂಬಿಕೊಂಡ ಪ್ರಜ್ಞಾವಂತ ನಾಗರಿಕರು ನಗರದ ಕೆಲವು ಭಾಗಗಳಲ್ಲಿ ನಡೆದಿದ್ದ ಒತ್ತುವರಿ ಬಗ್ಗೆ ಅಗತ್ಯ ಮಾಹಿತಿ ನೀಡಿದ್ದರು. ಮಾತ್ರವಲ್ಲ, ಒತ್ತುವರಿ ಮಾಡಿರೋ ಕಟ್ಟಡಗಳ ಫೋಟೋ ಸಮೇತ ಬಿಬಿಎಂಪಿ ಗೆ ಮಾಹಿತಿ ನೀಡಿದ್ದರೂ ಆದರೆ, ಅವರ ನಿರ್ಧಾರವೇ ಈಗ ಸಾರ್ವಜನಿಕರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.

ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು

ಬಿಬಿಎಂಪಿಗೆ ಅಗತ್ಯ ಮಾಹಿತಿ ನೀಡಿದ್ದ ಸಾರ್ವಜನಿಕರ ಮಾಹಿತಿಯನ್ನು ಕೆಲ ಅಧಿಕಾರಿಗಳು ಬಹಿರಂಗಗೊಳಿಸುವ ಮೂಲಕ ಮಾತು ತಪ್ಪಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳಿಗೆ ನನಿಮ್ಮ ಒತ್ತುವರಿ ಬಗ್ಗೆ ಇಂತವರು ಮಾಹಿತಿ ನೀಡಿದರೆ ಅಂತ ಬಿಬಿಎಂಪಿಯವರು ಮಾಹಿತಿ ನೀಡಿರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಅಯುಕ್ತರು ಮಾಹಿತಿ ಸೋರಿಕೆ ಅಗಿದ್ರೆ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಬಿಬಿಎಂಪಿಯವರ ಮಾತು ನಂಬಿ ಅಗತ್ಯ ಮಾಹಿತಿ ನೀಡಿದ್ದ ಪ್ರಜ್ಞಾವಂತ ನಾಗರಿಕರು ಮತ್ತೆ ಅವರ ಮಾತು ನಂಬಿ ಮೋಸ ಹೋಗದಿರಲು ತೀರ್ಮಾನಿಸಿದ್ದಾರಂತೆ.

RELATED ARTICLES

Latest News