Sunday, June 8, 2025
Homeರಾಜ್ಯವಿಜಯೇಂದ್ರ ಮಣಿಸಲು ಮಾಸ್ಟರ್ ಪ್ಲಾನ್ ಮಾಡಿದ ಯತ್ನಾಳ್‌ ಟೀಮ್

ವಿಜಯೇಂದ್ರ ಮಣಿಸಲು ಮಾಸ್ಟರ್ ಪ್ಲಾನ್ ಮಾಡಿದ ಯತ್ನಾಳ್‌ ಟೀಮ್

ಬೆಂಗಳೂರು,ಜ.28- ಸದ್ಯದಲ್ಲೇ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ವಿಜಯೇಂದ್ರ ಆ ಹ್ದುೆಗೆ ಸ್ಪರ್ಧಿಸುವುದು ಬಹುತೇಕ ಖಚಿತ. ಇನ್ನು ನಾನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ, ನನ್ನ ಗೆಲುವು ನಿಶ್ಚಿತ ಎನ್ನುವ ಮಾತನ್ನು ಯತ್ನಾಳ್‌ ಆಡಿದ್ದಾರೆ. ಆದರೆ, ಅವರೀಗ ತಮ ನಿಲುವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆಯಿದೆ. ಶ್ರೀರಾಮುಲು ಜೊತೆ ಸತತ ಸಂಪರ್ಕದಲ್ಲಿರುವ ಯತ್ನಾಳ್‌ ಮತ್ತು ಭಿನ್ನಮತೀಯರು ಅವರನ್ನು ತಮ ಅಧ್ಯಕ್ಷಗಾದಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಶ್ರೀರಾಮುಲು ಸಕಾರಾತಕವಾಗಿ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿಯಿದೆ. ಇದು ಯತ್ನಾಳ್‌ ಬಣಕ್ಕೆ ದೊಡ್ಡ ಬೂಸ್ಟ್‌ ಸಿಕ್ಕಂತಾಗಿದೆ.

ಕೋರ್‌ ಕಮಿಟಿ ಸಭೆಯ ನಂತರ ರಾಧಾ ಮೋಹನ್‌ ಅಗರ್ವಾಲ್‌ ಅವರು, ಬಿಜೆಪಿಯ 60ಕ್ಕೂ ಹೆಚ್ಚು ಶಾಸಕರನ್ನು ಭೇಟಿಯಾಗಿದ್ದರು. ಅದರಲ್ಲಿ 2-3 ಶಾಸಕರ ಹೊರತಾಗಿ, ಎಲ್ಲರೂ ವಿಜಯೇಂದ್ರ ಪರವಾಗಿ ಏನೋ ನಿಂತಿದ್ದರು. ಆದರೆ, ಶ್ರೀರಾಮುಲು ರಂಗ ಪ್ರವೇಶಿಸಿದರೆ, ಕಣ ರಂಗೇರುವ ಸಾಧ್ಯತೆ ಹೆಚ್ಚಾಗಿದೆ. ಶ್ರೀರಾಮುಲು ಅವರ ರಾಜಕೀಯ ಬಳ್ಳಾರಿ ಭಾಗಕ್ಕೆ ಹೆಚ್ಚಾಗಿ ಸೀಮಿತವಾಗಿದ್ದರೂ, ಒಂದು ವೇಳೆ ಇವರು ಅಧ್ಯಕ್ಷ ಸ್ಥಾನದ ಹುರಿಯಾಳು ಆದರೆ, ಯತ್ನಾಳ್‌ ಮತ್ತು ಜಾರಕಿಹೊಳಿ ಕಡೆಯಿಂದ ಹಂಡ್ರೆಂಡ್‌ ಪ್ರರ್ಸೆಂಟ್‌ ಸಹಕಾರ ಸಿಗಬಹುದು. ಅವರ ಉದ್ದೇಶ, ಹೇಗಾದರೂ ಮಾಡಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಹಾಗಾಗಿ, ಅಧ್ಯಕ್ಷೀಯ ಚುನಾವಣೆ ನಿರೀಕ್ಷಿಸಿದಷ್ಟು ವಿಜಯೇಂದ್ರ ಸುಲಭ ತುತ್ತು ಆಗುವ ಸಾಧ್ಯತೆ ಕಮಿ ಎಂದು ವಿಶ್ಲೇಷಿಸಲಾಗುತ್ತಿದೆ.

ಇಷ್ಟೇ ಅಲ್ಲದೇ, ಶ್ರೀರಾಮುಲು ವಿರುದ್ಧ ಪಕ್ಷದೋಹದ ಆರೋಪ ಮಾಡಿರುವ ಜನಾರ್ದನ ರೆಡ್ಡಿಯನ್ನು ತಕ್ಷಣದಿಂದಲೇ ಪಕ್ಷದಿಂದ ಉಚ್ಚಾಟಿಸಬೇಕು ಎನ್ನುವ ಹೊಸ ಬೇಡಿಕೆಯನ್ನು ಯತ್ನಾಳ್‌ ಬಣ ಇಟ್ಟಿತು. ಆ ಮೂಲಕ, ಬಿಜೆಪಿ ವರಿಷ್ಠರಿಗೆ ಯತ್ನಾಳ್‌ ಬಣ ಹೊಸ ತಲೆನೋವನ್ನು ತಂದೊಡ್ಡಿದೆ. ಕೋರ್‌ ಕಮಿಟಿ ಸಭೆಯಲ್ಲಿ ಉಸ್ತುವಾರಿಯಾಗಿ ಬಂದಿದ್ದ ರಾಧಾ ಮೋಹನ್‌ ದಾಸ್‌‍ ಅಗರ್ವಾಲ್‌‍, ತೂಕವಾಗಿ ಮಾತನಾಡಿದ್ದರೆ, ಬಿಜೆಪಿಯ ಆಂತರಿಕ ಕಲಹ ಇನ್ನಷ್ಟು ಹೆಚ್ಚಾಗುತ್ತಿರಲಿಲ್ಲವೇನೋ? ಶ್ರೀರಾಮುಲು – ಜನಾರ್ದನ ರೆಡ್ಡಿ ನಡುವಿನ ವೈಷಮ್ಯ ಹೊರಜಗತ್ತಿಗೆ ಅಷ್ಟಾಗಿ ಗೊತ್ತಾಗದೇ ಇರುವ ಸಾಧ್ಯತೆಗಳಿದ್ದವು.

ಸಂಡೂರಿನಲ್ಲಿ ಬಿಜೆಪಿ ಸೋಲಿಗೆ ಶ್ರೀರಾಮುಲು ಕಾರಣ ಎಂದು ರಾಧಾ ಮೋಹನ್‌ ಹೇಳಿರುವುದು ಬಿಜೆಪಿಯ ಆಂತರಿಕ ಕಲಹ ಇನ್ನೊಂದು ಮಜಲಿಗೆ ಹೋಗಲು ಕಾರಣವಾಯಿತು. ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ದ ಕೆಲಸ ಮಾಡಿದ್ದೇ ಸೋಲಿಗೆ ಕಾರಣ ಎಂದು ಜನಾರ್ದನ ರೆಡ್ಡಿಯ ದೂರನ್ನು ಅವರು ಉಲ್ಲೇಖಿಸಿದ್ದು, ಪಕ್ಷದಲ್ಲೇ ಹಲವು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಇದಾದ ನಂತರ, ರೆಡ್ಡಿಯ ಹೇಳಿಕೆ ಬಿಜೆಪಿ ಬಣ ಬಡಿದಾಟಕ್ಕೆ ಇನ್ನಷ್ಟು ತುಪ್ಪವನ್ನು ಸುರಿಯಿತು. ಸತೀಶ್‌ ಜಾರಕಿಹೊಳಿಯವನ್ನು ಹಣೆಯಲು ಅದೇ ಸಮುದಾಯದ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೆಳೆಯಲು ಡಿ.ಕೆ.ಶಿವಕುಮಾರ್‌ ಪ್ರಯತ್ನಿಸುತ್ತಿದ್ದಾರೆ ಎನ್ನುವ ಇವರ ಆರೋಪ, ಶ್ರೀರಾಮುಲು ಅವರ ಕೋಪಕ್ಕೆ ಕಾರಣವಾಯಿತು.

ಯಾವಾಗ ವಿಜಯೇಂದ್ರ ವಿರುದ್ದ ಶ್ರೀರಾಮುಲು ಅಸಮಾಧಾನದ ಮಾತನ್ನು ಆಡಿದರೋ, ವಿರೋಧಿ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಬಣ ಚುರುಕಾಯಿತು. ನಿಮ ಜೊತೆ ನಾವಿದ್ದೇವೆ, ಬೇಸರಿಸಿಕೊಳ್ಳಬೇಡಿ, ನಮದೆಲ್ಲರದ್ದೂ ಒಂದೇ ಸಮಸ್ಯೆ ಎಂದು ಶ್ರೀರಾಮುಲು ಪರ ನಿಂತಿತು.

RELATED ARTICLES

Latest News