ನವದೆಹಲಿ,ಫೆ.1- ಭಾರತವನ್ನು ಜೈವಿಕ ಔಷಧ ಉತ್ಪಾದನಾ ವಲಯ ಶಕ್ತಿಯನ್ನಾಗಿಸಲು 5 ವರ್ಷಗಳ ಅವಧಿಗೆ 10 ಸಾವಿರ ಕೋಟಿ ರೂ.ಗಳ ವಿಶೇಷ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಸಂಸತ್ನಲ್ಲಿಂದು ತಮ 9ನೇ ದಾಖಲೆಯ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ತಮದು ಆತನಿರ್ಭರ ಮತ್ತು ದೂರದೃಷ್ಟಿಯ ಹಾಗೂ ಯುವಶಕ್ತಿಯ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.
ಕರ್ತವ್ಯಭವನದಲ್ಲಿ ಸಿದ್ದಪಡಿಸಿದ ಮೊದಲ ಬಜೆಟ್ ಇದಾಗಿದ್ದು, ಮೂರು ಪ್ರಮುಖ ಕರ್ತವ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಮೊದಲ ಕರ್ತವ್ಯ ಭಾರತದ ಆರ್ಥಿಕತೆಯ ಸುಸ್ಥಿರತೆ ಮತ್ತು ವೇಗವರ್ಧನೆಯಾಗಿದೆ. ಜಾಗತಿ ಸ್ಪರ್ಧಾತಕ ಹಾಗೂ ಉತ್ಪಾದನಾ ಹೆಚ್ಚಳಕ್ಕೆ ದಾರಿ ಮಾಡಿಕೊಡಲಿದೆ. ಜಾಗತಿಕ ಸ್ವೀಕಾರ್ಹ ಕ್ರಿಯಾಶೀಲತೆಗೆ ಒತ್ತು ನೀಡುತ್ತೇವೆ ಎಂದಿದ್ದಾರೆ.
2ನೇ ಕರ್ತವ್ಯವಾಗಿ ಜನರ ಆಶೋತ್ತರಗಳನ್ನು ಈಡೇರಿಸುವುದು, ಸಾಮರ್ಥ್ಯ ವೃದ್ಧಿ ಮತ್ತು ಸಹಭಾಗಿದಾರರ ಸಮೃದ್ಧಿಯನ್ನು ಹೆಚ್ಚಿಸುವುದು 3ನೇ ಕರ್ತವ್ಯವಾಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ ಧ್ಯೇಯವಾಗಿದೆ. ಪ್ರತಿಯೊಂದು ಸಮುದಾಯ, ಜಾತಿ, ವಲಯಗಳ ಕುಟುಂಬಗಕ್ಕೂ ಅವಕಾಶ ಮತ್ತು ಸಂಪನೂಲ ದೊರಕಿಸುವ ಮೂಲಕ ಅರ್ಥಪೂರ್ಣ ಸಹಭಾಗಿತ್ವಕ್ಕೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ.
ಕ್ರಿಯಾತಕ ಅಭಿವೃದ್ದಿ ಮತ್ತು ಭವಿಷ್ಯದ ಅಭಿವೃದ್ಧಿಯ ನಿರಂತರ ವೇಗ ವರ್ಧನೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಉಳಿತಾಯವನ್ನು ಕೇಂದ್ರೀಕರಣಗೊಳಿಸಿ ಅದರ ಭದ್ರತೆಗೆ ಮತ್ತು ಬಂಡವಾಳ ಸಾಮರ್ಥ್ಯಕ್ಕೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅದರಲ್ಲೂ ಕೃತಕಬುದ್ದಿಮತ್ತೆಯನ್ನು ಹೆಚ್ಚು ಬಳಸುವುದು ನಮ ಉದ್ದೇಶವಾಗಿದೆ. ಉದ್ಯೋಗ ಸೃಷ್ಟಿಗೆ ಮತ್ತು ಉತ್ಪಾದನೆ ಹೆಚ್ಚಳಕ್ಕೆ ಸಮಗ್ರವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಂದು ವಿವರಿಸಿದರು.
ತಮ ಸರ್ಕಾರ ಸುಧಾರಣೆ ಹಾಗೂ ಪರಿವರ್ತನೆಗೆ ಮುಕ್ತ ಮನಸ್ಸು ಹೊಂದಿದೆ. ಪ್ರಧಾನಿ ನರೇಂದ್ರಮೋದಿ ಅವರು 2025ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಕಟಿಸಿದಂತೆ 350 ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಜಿಎಸ್ಟಿ ಸರಳೀಕರಣ, ಕಾರ್ಮಿಕ ನ್ಯಾಯಾಲಯಗಳ ನಿಯಮಗಳು ಹಾಗೂ ಗುಣಮಟ್ಟ ನಿಯಂತ್ರಣ ಕಡ್ಡಾಯ ಆದೇಶಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರಗಳೊಂದಿಗೆ ಕೆಲವು ಕಡ್ಡಾಯ ನಿಯಮಗಳ ಸರಳೀಕರಣಕ್ಕೆ ನಿರಂತರವಾದ ಶ್ರಮ ವಹಿಸುತ್ತಿದೆ. ಈ ಮೂಲಕ ನಮ ಕರ್ತವ್ಯಗಳನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮೊದಲನೇ ಕರ್ತವ್ಯದ ಭಾಗವಾಗಿ ಆರ್ಥಿಕವಾಗಿ ಬೆಳವಣಿಗೆಗೆ ಆರು ವಲಯಗಳನ್ನು ಪರಿಗಣಿಸಲಾಗಿದೆ. ಉತ್ಪಾದನೆ ಹೆಚ್ಚಳಕ್ಕೆ ಎರಡು ತಾಂತ್ರಿಕ ಕ್ಷೇತ್ರಗಳನ್ನು ಪರಿಗಣಿಸಲಾಗಿದೆ. ಕೈಗಾರಿಕಾ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ನಾಯಕತ್ವ ಸೃಷ್ಟಿ , ಶಕ್ತಿಯುತವಾದ ಮೂಲಸೌಲಭ್ಯ ಅಭಿವೃದ್ಧಿ, ದೀರ್ಘಕಾಲದ ಭದ್ರತೆ ಮತ್ತು ಸುಸ್ಥಿರತೆ, ಆರ್ಥಿಕ ನಗರ ವಲಯಗಳ ಅಭಿವೃದ್ದಿ ಏಳು ಅಂಶಗಳಾಗಿವೆ ಎಂದು ವಿವರಿಸಿದ್ದಾರೆ.
ಆರೋಗ್ಯ ಆಧುನೀಕರಣಕ್ಕೆ ಜೈವಿಕ ಔಷಧ ವಲಯ ನೆರವಾಗಲಿದೆ. ಶಕ್ತಿ ಹೆಸರಿನಲ್ಲಿ ಜೈವಿಕ ಔಷಧಿ ಉತ್ಪಾದನೆಗೆ ಒತ್ತು ನೀಡಲಾಗುವುದು. ಜ್ಞಾನ, ತಂತ್ರಜ್ಞಾನ, ಸಂಶೋಧನೆಗಳ ಮೂಲಕ ಜೈವಿಕ ಔಷಧ ಉತ್ಪಾದನೆಯನ್ನು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು.
ಭಾರತದಲ್ಲಿ ಮಧುಮೇಹ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳು ಹೊರೆಯಾಗಿವೆ. ಕ್ಯಾನ್ಸರ್ನಂತಹ ಮತ್ತಿತರ ರೋಗಗಳಿಗೆ ಜೈವಿಕ ಔಷಧಿಗಳು ಪರಿಣಾಮಕಾರಿಯಾಗಿವೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಉತ್ಪಾದನಾ ವಲಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ದೇಶೀಯ ಉತ್ಪಾದನೆಗೆ ಆದ್ಯತೆ ಸಿಗಲಿದೆ ಎಂದು ಹೇಳಿದ್ದಾರೆ.
ಮೂರು ರಾಷ್ಟ್ರೀಯ ಆರ್ಯುವೇದ ಸಂಸ್ಥೆಗಳ ಸ್ಥಾಪನೆ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಏಳು ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ನಿರ್ಮಲ ಸೀತಾರಾಮನ್ ಮಂಡಿಸಿದ್ದಾರೆ.
ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಕ್ಲಿನಿಕಲ್ ಟ್ರಯಲ್ ಮತ್ತು ಔಷಧಿ ಅಂಗೀಕರಿಸುವ ವ್ಯವಸ್ಥೆಯನ್ನು ಉನ್ನತಮಟ್ಟಕ್ಕೇರಿಸುವ ಭರವಸೆ ನೀಡಿದ್ದಾರೆ. ಔಷಧಿಗಳನ್ನು ಅಂಗೀಕರಿಸುವ ವೇಳೆ ವೈಜ್ಞಾನಿಕ ಪರಿಶೀಲನಾ ವ್ಯವಸ್ಥೆಯನ್ನು ಅಳವಡಿಸುವುದಾಗಿ ತಿಳಿಸಿದ್ದಾರೆ.
