ಬೆಂಗಳೂರು, ಜು.5– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜು.7 ಸೋಮವಾರದಿಂದ ಹೊಸ ಮಾರ್ಗಗಳಲ್ಲಿ ಬಸ್ ಸೇವೆಗಳನ್ನು ಆರಂಭಿಸಲಿದೆ.
ಕೆಂಗೇರಿ ಟಿಟಿಎಂಸಿ ಬಸ್ ನಿಲ್ದಾಣದಿಂದ ಮಾಗಡಿ ಬಸ್ ನಿಲ್ದಾಣದವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್ ಸೇವೆಯನ್ನು ಆರಂಭಿಸಲಿದೆ. ಈ ಬಸ್ಗಳು ಕೊಮ್ಮಘಟ್ಟ, ಸೂಲಿಕೆರೆ, ಗುಲಗಂಜನಹಳ್ಳಿ ಕ್ರಾಸ್, ತಾವರೆಕೆರೆ, ಚೋಳನಾಯಕನಹಳ್ಳಿ, ಶಾನು ಭೋಗನಹಳ್ಳಿ, ತಗಚಗುಪ್ಪೆ, ರಂಗನಾಥಪುರ ಮಾರ್ಗಗಳಲ್ಲಿ ಸಂಚರಿಸಲಿದೆ.
238-ವಿಬಿ ಮಾರ್ಗ ಸಂಖ್ಯೆಯ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಉತ್ಕಾರ್ ನಿಲ್ದಾಣದವರೆಗೆ ಸಂಚರಿಸಲಿವೆ. ಈ ಬಸ್ಗಳು ಸುಜಾತ ಟಾಕೀಸ್, ವಿಜಯನಗರ, ಚಂದ್ರಾಲೇಔಟ್, ನಾಗರಭಾವಿ ವೃತ್ತ, ಐಟಿಐ ಲೇಔಟ್, ಮುದ್ದಯ್ಯನ ಪಾಳ್ಯ, ಆರ್ಟಿಓ ಆಫೀಸ್, ವಿಶ್ವೇಶ್ವರಯ್ಯ ಲೇ ಔಟ್, ಉಪ್ಯಾರ್ ಲೇಔಟ್ರೆಗೆ ಸಂಚರಿಸಲಿದೆ.
ಬೆಳಿಗ್ಗೆ 5.50ರಿಂದ ರಾತ್ರಿ 8 ಗಂಟೆಯವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್ಗಳು ಸಂಚರಿಸಲಿವೆ. 238-ವಿಬಿ ಮಾರ್ಗ ಸಂಖ್ಯೆಯ ಬಸ್ಗಳು 5-55ರಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲಿವೆ.
- ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ ಪಡೆಯಲು ಸರ್ಕಾರ ಪ್ರಯತ್ನ : ಎಚ್.ಕೆ. ಪಾಟೀಲ
- ಸಿಎಂ, ಡಿಸಿಎಂ ಮನೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಬೆದರಿಕೆ
- ಅಕ್ರಮ ಪಟಾಕಿ ದಾಸ್ತಾನು-ಮಾರಾಟ ಮಾಡಿದರೆ ಕಠಿಣ ಕ್ರಮ : ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ
- ಬೆಂಗಳೂರಲ್ಲಿ ಕುಳಿತು ಅಮೆರಿಕಾದ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಕಿಲಾಡಿಗಾಗಿ ಪೊಲೀಸರ ಹುಡುಕಾಟ
- ಪೂಜೆ ಮಾಡಿ ನಿಧಿ ತೆಗೆಸಿ ಕೊಡಿಸುವ ನೆಪದಲ್ಲಿ ಕಳ್ಳತನ ಮಾಡಿದ್ದವನ ಬಂಧನ