ಬೆಂಗಳೂರು, ಜು.29- ದೇಶದಲ್ಲಿ ಬೀದಿ ನಾಯಿಗಳ ಉಪಟಳದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದ ಬೆನ್ನಲ್ಲೇ ನಗರದಲ್ಲಿ ನಾಯಿಗಳ ದಾಳಿಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.
ಬೀದಿ ನಾಯಿಗಳ ದಾಳಿಯಿಂದ ಪ್ರಾಣ ಕಳೆದುಕೊಂಡ ವೃದ್ಧರನ್ನು 68 ವರ್ಷದ ಸೀತಪ್ಪ ಎಂದು ಗುರುತಿಸಲಾಗಿದೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಟೆಲಿಕಾಮ್ ಬಡವಾವಣೆಯಲ್ಲಿ ವಾಸಿಸುತ್ತಿದ್ದ ಸೀತಪ್ಪ ನಿನ್ನೆ ಮಧ್ಯರಾತ್ರಿ ಮೂರು ಗಂಟೆಗೆ ಮನೆಯಿಂದ ಎದ್ದು ಹೊರ ಬಂದಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ಮಾಡಿದೆ.
ಎಂಟತ್ತು ನಾಯಿಗಳು ಸೀತಪ್ಪ ಅವರ ಮೇಲೆ ಮುಗಿಬಿದ್ದು ಎಲ್ಲೆಂದರಲ್ಲಿ ಕಚ್ಚಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡರು.ಕೂಡಲೇ ಸ್ಥಳದಲ್ಲಿದ್ದ ಬೀಟ್ ಪೋಲೀಸರು ಅವರನ್ನು ರಕ್ಷಿಸಲು ಪ್ರಯತ್ನಪಟ್ಟು ತೀವ್ರವಾಗಿ ಗಾಯಗೊಂಡಿದ್ದ ಸೀತಪ್ಪ ಅವರನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೀತಪ್ಪ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ.
- ನೆಹರು-ಕಾಂಗ್ರೆಸ್ ಇತಿಹಾಸ ಬಿಚ್ಚಿಟ್ಟ ಮೋದಿ, ಅಮಿತ್ ಶಾ ವಿರುದ್ಧ ಜೈರಾಮ್ ರಮೇಶ್ ಆಕ್ರೋಶ
- ಇಸ್ರೇಲ್-ಪ್ಯಾಲೆಸ್ತಾನ್ ಸಂಘರ್ಷ ತಡೆಗೆ ಪ್ರಾಯೋಗಿಕ ಪರಿಹಾರ ಬೇಕು ; ಭಾರತ
- ಆಗಸ್ಟ್ ಮೊದಲ ವಾರದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ
- ಆ.1ರಿಂದ ಯುಪಿಐ ಬಳಕೆಗೆ ಹೊಸ ನಿಯಮ
- ಧರ್ಮಸ್ಥಳ ಪ್ರಕರಣ : ಶವಗಳಿಗಾಗಿ ಇನ್ನೆರೆಡು ಹೊಸ ಸ್ಥಳಗಳಲ್ಲೂ ಉತ್ಖನನ ಆರಂಭ