ನಿತ್ಯ ನೀತಿ : ಮೊದಲ ಪ್ರಯತ್ನದಲ್ಲಿ ಗೆಲ್ಲುವವರು ಬದುಕಿನಲ್ಲಿ ಗೆಲ್ಲಬಲ್ಲರು, ಆದರೆ ಮೊದಲ ಪ್ರಯತ್ನದಲ್ಲಿ ಸೋತವರು ಜಗತ್ತನ್ನೇ ಗೆಲ್ಲಬಲ್ಲರು. ಯಾಕೆಂದರೆ ಸಂಕಟದೊಂದಿಗೆ ಸೆಣಸಾಡುವ ಮನಸ್ಸಿಗೇ ಛಲ ಹೆಚ್ಚು.
ಪಂಚಾಂಗ : ಶನಿವಾರ, 13-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಕೃತ್ತಿಕಾ / ಯೋಗ: ಹರ್ಷಣ / ಕರಣ: ವಿಷ್ಟಿ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.22
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ನಿಮ್ಮ ಸ್ವಂತ ಪರಿಶ್ರಮದ ಮೇಲೆ ನಂಬಿಕೆ ಇಡಿ. ಛಾಡಿ ಮಾತಿಗೆ ಕಿವಿಕೊಡಬೇಡಿ.
ವೃಷಭ: ಹಣ ಬರಲು ವಿಳಂಬ ಆಗಬಹುದು.
ಮಿಥುನ: ಹಿರಿಯರ ಸಹಾಯದಿಂದ ಸಮಸ್ಯೆಗಳನ್ನು ಸುಲಭವಾಗಿ ಜಯಿಸುವಿರಿ.
ಕಟಕ: ಕಾರ್ಯಸಾಧನೆ ಮಾಡುವ ವೇಳೆ ದಾರಿ ತಪ್ಪದಿರಿ.
ಸಿಂಹ: ಕೈಗಾರಿಕಾ ಕ್ಷೇತ್ರದಲ್ಲಿ ಸಕಾರಾತಕ ಬದಲಾವಣೆಯ ಕಾರಣ ಉತ್ತಮ ಫಲ ಸಿಗಲಿದೆ.
ಕನ್ಯಾ: ಮಕ್ಕಳಿಗೆ ವಿದೇಶ ಪ್ರಯಾಣ ಮಾಡುವ ಯೋಗ ಒದಗಿಬರಲಿದೆ.
ತುಲಾ: ಪೋಷಕರ ಆಶೀರ್ವಾದದಿಂದ ಹೊಸ ವಾಹನವನ್ನು ಖರೀದಿಸುವಿರಿ.
ವೃಶ್ಚಿಕ: ಆಪ್ತರಿಂದ ನೀವು ಅಂದುಕೊಂಡ ಕೆಲಸಕ್ಕೆ ವಿಘ್ನ ಒದಗಿ ಬರಲಿದೆ.
ಧನುಸ್ಸು: ಹೊಸ ವ್ಯಾಪಾರ ಆರಂಭಿಸುವಾಗ ದಾರಿ ತಪ್ಪಿಸುವ ಜನರಿಂದ ದೂರವಿರಿ.
ಮಕರ: ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟವು ತಪ್ಪಲಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಿರಿ.
ಕುಂಭ: ದೂರ ಪ್ರಯಾಣವು ಅತ್ಯಂತ ಸುಖಕರವಾಗಿ ನಡೆಯುವುದು.
ಮೀನ: ಲೆಕ್ಕಾಚಾರ ಇಲ್ಲದ ಹಣದ ವ್ಯವಹಾರ ಬೇಡ. ಒಂದು ವೇಳೆ ಮಾಡುವ ಸಮಯ ಬಂದರೆ ಎಚ್ಚರವಾಗಿರಿ.