Sunday, August 17, 2025
Homeಬೆಂಗಳೂರುಬೆಂಗಳೂರು : ಚಾಕುವಿನಿಂದ ಇರಿದು ರೌಡಿ ಪಪ್ಪಾಯಿ ಸುಹೇಲ್ ಕೊಲೆ

ಬೆಂಗಳೂರು : ಚಾಕುವಿನಿಂದ ಇರಿದು ರೌಡಿ ಪಪ್ಪಾಯಿ ಸುಹೇಲ್ ಕೊಲೆ

ಬೆಂಗಳೂರು, ಸೆ.29- ರೌಡಿಯೊಬ್ಬನನ್ನು ಮನೆಯಿಂದ ಹೊರಗೆ ಕರೆದೊಯ್ದ ಗುಂಪೊಂದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಡಿಜೆ ಹಳ್ಳಿ ಮೋದಿ ರಸ್ತೆಯ ಮಸೀದಿ ಸಮೀಪದ ನಿವಾಸಿ ಸಯ್ಯದ್ ಸುಹೇಲ್ ಅಲಿಯಾಸ್ ಪಪ್ಪಾಯಿ ಸುಹೇಲ್ (28) ಕೊಲೆಯಾದ ರೌಡಿ. ಈತ ಜೆಸಿ ನಗರ ಪೊಲೀಸ್ ಠಾಣೆಯ ರೌಡಿಶೀಟರ್.

ಸಯ್ಯದ್ ಸುಹೇಲ್ ರಾತ್ರಿ 9.30ರ ಸುಮಾರಿನಲ್ಲಿ ಮನೆಯಲ್ಲಿದ್ದಾಗ ಆರೇಳು ಮಂದಿಯ ಗುಂಪು ಈತನ ಮನೆ ಬಳಿ ಬಂದು ಸುಹೇಲ್‍ನನ್ನು ಹೊರಗೆ ಕರೆದೊಯ್ದು ಮನೆ ಸಮೀಪದಲ್ಲೆ ಚಾಕುವಿನಿಂದ ಇರಿದು ಪರಾರಿಯಾಗಿದೆ.

ಅಪಾಯದಲ್ಲಿ ಐತಿಹಾಸಿಕ ಲಂಡನ್ ಬ್ರಿಡ್ಜ್, ಸಂಚಾರ ಸ್ಥಗಿತ

ಇರಿತದಿಂದ ಗಂಭೀರ ಗಾಯಗೊಂಡಿದ್ದ ಸುಹೇಲ್‍ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಡಿಜೆ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

ಹಳೆ ದ್ವೇಷದಿಂದ ಈ ಕೊಲೆ ನಡೆದಿದೆ ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 6 ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News