Saturday, May 4, 2024
Homeರಾಷ್ಟ್ರೀಯಕಾವಲುಗಾರನ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ

ಕಾವಲುಗಾರನ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ

ನವದೆಹಲಿ,ಅ.26- ಕಾವಲುಗಾರನ ಕಾರ್ಯಕ್ಷಮತೆಯಿಂದಾಗಿ ದೇಶದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ರೈಲು ದುರಂತ ತಪ್ಪಿದೆ. ಭಂಡಾಯ್ ನಿಲ್ದಾಣದ ಬಳಿಯ ರೈಲ್ವೇ ಕ್ರಾಸಿಂಗ್ ಒಂದರಲ್ಲಿ ನಿಯೋಜನೆಗೊಂಡಿರುವ ನಿವೃತ್ತ ಸೇನಾ ಅಧಿಕಾರಿ ಗೇಟ್‍ಮ್ಯಾನ್ ಯಶಪಾಲ್ ಸಿಂಗ್ ನೂರಾರು ಜನರ ಪ್ರಾಣ ರಕ್ಷಿಸಿದ ವ್ಯಕ್ತಿಯಾಗಿದ್ದಾರೆ.

ಒಂದು ವೇಳೆ ಅವರು ಕರ್ತವ್ಯ ಲೋಪ ಮಾಡಿದ್ದರೆ ರೈಲಿಗೆ ಬಿದ್ದ ಬೆಂಕಿಯಿಂದ ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎನ್ನಲಾಗಿದೆ. ರೈಲು ಭಂಡಾಯ್ ನಿಲ್ದಾಣವನ್ನು ತಲುಪುವ ಮೊದಲು ನಿನ್ನೆ ಮಧ್ಯಾಹ್ನ 3.35 ಕ್ಕೆ ಗೇಟ್ ಮೂಲಕ ಹಾದುಹೋದಾಗ, ಸಿಂಗ್ ಇಂಜಿನ್‍ನಿಂದ 4 ನೇ ಕೋಚ್‍ನಿಂದ ಹೊಗೆ ಬರುತ್ತಿರುವುದನ್ನು ಪತ್ತೆ ಹಚ್ಚಿ ತಕ್ಷಣವೇ ನಿಲ್ದಾಣದ ಉಪ ಸ್ಟೇಷನ್ ಸೂಪರಿಂಟೆಂಡೆಂಟ್ ಹರಿದಾಸ್ ಅವರಿಗೆ ಮಾಹಿತಿ ನೀಡಿದರು.

ರೈಲು ನಿಯಂತ್ರಕರು ತಕ್ಷಣವೇ ಓಎಚ್‍ಇ (ಓವರ್ ಹೆಡ್ ಎಕ್ವಿಪ್‍ಮೆಂಟï) ಉಸ್ತುವಾರಿ ವಹಿಸಿರುವ ಎಲ್ಲಾ ರೈಲುಗಳ ವಿದ್ಯುತ್ ಸರಬರಾಜನ್ನು ಆಯಾ ಸ್ಥಳಗಳಲ್ಲಿ ಅಪ್ ಅಂಡ್ ಡೌನ್ ದಿಕ್ಕುಗಳಲ್ಲಿ ಅವುಗಳನ್ನು ನಿಲ್ಲಿಸುವಂತೆ ನಿರ್ದೇಶಿಸಿದ್ದರು.

ದುರ್ಗಾಪೂಜೆ ವೇಳೆ ಪಾಕ್ ಪರ ಘೋಷಣೆ : ಅಪ್ರಾಪ್ತ ಬಾಲಕಿ ಸೇರಿ 6 ಜನರ ಅರೆಸ್ಟ್

ಪಟಾಲ್‍ಕೋಟ್ ಎಕ್ಸ್‍ಪ್ರೆಸ್ ಮಧ್ಯಾಹ್ನ 3.37 ಕ್ಕೆ ನಿಂತಾಗ, ಅದು ಈಗಾಗಲೇ ಭಂಡಾಯ್ ನಿಲ್ದಾಣವನ್ನು ದಾಟಿತ್ತು. 10 ನಿಮಿಷಗಳಲ್ಲಿ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಮತ್ತು ಸ್ಪಾರ್ಟ್ (ಸ್ವಯಂ ಚಾಲಿತ ಅಪಘಾತ ಪರಿಹಾರ ರೈಲು) ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.

ಅಷ್ಟೊತ್ತಿಗೆ ಬೆಂಕಿ ಎರಡು ಕೋಚ್‍ಗಳನ್ನು ಆವರಿಸಿತ್ತು. ಇಂಜಿನ್‍ನಿಂದ 3 ನೇ ಮತ್ತು 4 ನೇ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸಮಯಕ್ಕೆ ಸ್ಥಳಾಂತರಿಸಲಾಯಿತು. ಸಂಜೆ 5.10 ರ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು ಮತ್ತು ಒಟ್ಟು 11 ಜನರಿಗೆ ಸಣ್ಣ ಸುಟ್ಟ ಗಾಯಗಳಾಗಿವೆ ಎಂದು ರೈಲ್ವೆ ರಕ್ಷಣಾ ಪಡೆ ತಿಳಿಸಿದೆ.

ಘಟನೆಯಲ್ಲಿ ರಾಹುಲ್ ಕುಮಾರ್ (18), ಮೋಹಿತ್ (25), ಶಿವಂ (18) ಮನೋಜ್ ಕುಮಾರ್ (34), ಹರದಯಾಳ್ (59), ಮಣಿರಾಮ್ (45), ರಾಮೇಶ್ವರ್ (29), ಗೌರವ್ (22), ಸಿದ್ಧಾರ್ಥ್ (18) ಹಿತೇಶ್ (17) ಮತ್ತು ರೈಲಿಗೆ ಬೆಂಕಿ ತಗುಲಿ ವಿಕಾಸ್ (17) ಗಾಯಗೊಂಡಿದ್ದಾರೆ.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ರೈಲು ಪಂಜಾಬ್‍ನ ಫಿರೋಜ್‍ಪುರ ಕಂಟೋನ್ಮೆಂಟ್‍ನಿಂದ ಮಧ್ಯಪ್ರದೇಶದ ಸಿಯೋನಿಗೆ ಹೋಗುತ್ತಿದ್ದಾಗ ಆಗ್ರಾದಿಂದ 10 ಕಿಮೀ ದೂರದಲ್ಲಿರುವ ಭಂಡಾಯ್ ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಆಗ್ರಾ ರೈಲ್ವೆ ವಿಭಾಗದ ಪಿಆರ್‍ಒ ಶ್ರೀವಾಸ್ತವ ತಿಳಿಸಿದ್ದಾರೆ.

RELATED ARTICLES

Latest News