Friday, May 3, 2024
Homeರಾಷ್ಟ್ರೀಯವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿ ಅರಿಂದಮ್ ಬಾಗ್ಚಿ ನೇಮಕ

ವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿ ಅರಿಂದಮ್ ಬಾಗ್ಚಿ ನೇಮಕ

ನವದೆಹಲಿ, ಅ. 17-ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರನ್ನು ವಿಶ್ವಸಂಸ್ಥೆ (ಯುಎನ್) ಮತ್ತು ಜಿನೀವಾದಲ್ಲಿರುವ ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಖಾಯಂ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರ ನೇಮಿಸಿದೆ.

1995ರ ಬ್ಯಾಚ್‍ನ ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಅಧಿಕಾರಿಯಾಗಿರುವ ಬಾಗ್ಚಿ ಅವರು ಮಾರ್ಚ್ 2021 ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿ ಅಧಿಕಾರ ವಹಿಸಿಕೊಂಡರು ಮತ್ತು ಪೂರ್ವ ಲಡಾಖ್ ಗಡಿ, ಭಾರತದಲ್ಲಿ ಕೋವಿಡ್ ನಿಯಂತ್ರಣ ಸೇರಿದಂತೆ ಹಲವಾರು ನಿರ್ಣಾಯಕ ಸಮಸ್ಯೆಗಳನ್ನು ಬಹಳ ಚತುರತೆಯಿಂದ ನಿಭಾಯಿಸಿದರು.ಭಾತರದ ಜಿ-20 ಅಧ್ಯಕ್ಷೀಯ ಕಾರ್ಯಭಾರದಲ್ಲಿ ಯಶಸ್ಸಿನ ಪಾಲು ಇದೆ.

ಪ್ರಸ್ತುತ ಜಿನೀವಾದಲ್ಲಿ ಇಂದ್ರ ಮಣಿ ಪಾಂಡೆಯ ಅವರು ನವದೆಹಲಿಗೆ ಮರಳಲಿದ್ದು ಅವರ ಉತ್ತರಾಧಿಕಾರಿಯಾಗಿ ಬಾಗ್ಚಿ ನಿಯೋಜನೆಗೊಂಡಿದ್ದಾರೆ. ಅರಿಂದಮ್ ಬಾಗ್ಚಿ ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದು ಈಗ ಅವರು ಜಿನೀವಾದಲ್ಲಿ ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಮುಂದಿನ ರಾಯಭಾರಿ/ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ ಎಂದು ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.ಅವರು ಶೀಘ್ರದಲ್ಲೇ ಅಕಾರ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

ಎಂಇಎ ವಕ್ತಾರ ಹುದ್ದೆಗೆ ಜಂಟಿ ಕಾರ್ಯದರ್ಶಿ (ಜಿ20) ನಾಗರಾಜ್ ನಾಯ್ಡು ಕಾಕನೂರ್ ಮತ್ತು ಮಾರಿಷಸ್‍ನ ಹೈಕಮಿಷನರ್ ಕೆ ನಂದಿನಿ ಸಿಂಗ್ಲಾ ಸೇರಿದಂತೆ ಸುಮಾರು ನಾಲ್ವರು ಹಿರಿಯ ರಾಜತಾಂತ್ರಿಕರ ಹೆಸರು ಕೇಳಿಬಂದಿದೆ.

20 ಶಾಸಕರ ಜೊತೆ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಪ್ಲಾನ್!

ಈ ಹಿಂದೆ, ಬಾಗ್ಚಿ ಕ್ರೊಯೇಷಿಯಾಕ್ಕೆ ರಾಯಭಾರಿಯಾಗಿ ಮತ್ತು ಶ್ರಿಲಂಕಾಕ್ಕೆ ಡೆಪ್ಯುಟಿ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ನಿರ್ದೇಶಕರಾಗಿ ಮತ್ತು ನ್ಯೂಯಾರ್ಕ್‍ನ ಯುಎನ್‍ನಲ್ಲಿ ಭಾರತದ ಖಾಯಂ ಮಿಷನ್‍ನಲ್ಲಿಯೂ ಸಹ ಕಾರ್ಯ ನಿರ್ವಹಿಸಿದ ಅನುಭವವಿದೆ.

RELATED ARTICLES

Latest News