Thursday, May 2, 2024
Homeರಾಜ್ಯಆರ್ಯುವೇದ ಪ್ರಚುರಪಡಿಸಲು ಜನಜಾಗೃತಿ ಶಿಬಿರ

ಆರ್ಯುವೇದ ಪ್ರಚುರಪಡಿಸಲು ಜನಜಾಗೃತಿ ಶಿಬಿರ

ಬೆಂಗಳೂರು,ನ.9- ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ಆರ್ಯುವೇದ ಪದ್ದತಿಯನ್ನು ಇನ್ನಷ್ಟು ಪ್ರಚುರಪಡಿಸುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯವು ಹಲವಾರು ಜನಜಾಗೃತಿ ಶಿಬಿರಗಳನ್ನು ಆಯೋಜಿಸಿ ಇದರ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಗಿದೆ.ಕಳೆದ 2016ರಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ನ.10ರಂದು ಆರ್ಯುವೇದ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಆರ್ಯುವೇದ ಪದ್ದತಿಯಿಂದ ಜನರಿಗೆ ಆಗಬಹುದಾದ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ.

ಸಂಸ್ಥೆಯಲ್ಲಿ ಲಭ್ಯವಿರುವ ಉಚಿತ ಆರೋಗ್ಯ ಸೇವೆಗಳನ್ನು ಉಪಯೋಗಿಸಿಕೊಳ್ಳುವಂತೆ ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆಯ (ಆಯುಷ್ ಸಚಿವಾಲಯ, ಭಾರತ ಸರಕಾರ) ಸಹಾಯಕ ನಿರ್ದೇಶಕರಾದ ಡಾ. ಸುಲೋಚನಾ ಭಟ್ಟ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ದೇಶದಾದ್ಯಂತ ಆಯುರ್ವೇದಕ್ಕಾಗಿ ಓಟ 8ನೇ ಆಯುರ್ವೇದ ದಿನಾಚರಣೆಯನ್ನು ರಾಜ್ಯದಲ್ಲೂ ನವೆಂಬರ್ ತಿಂಗಳಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆಯುರ್ವೇದ ದಿನವನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಆಚರಿಸಲು ಸಹಕರಿಸಿದ ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆಯ ಎಲ್ಲ ಸಿಬ್ಬಂದಿವರ್ಗಕ್ಕೂ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರದರ್ಶನ ಮತ್ತು ಸಣ್ಣ -ಎಕ್ಸ್ ಪೋ, ದೇಶಾದ್ಯಂತ ವೈದ್ಯಕೀಯ ಮತ್ತು ಸ್ವಾಸ್ಥ್ಯ ಶಿಬಿರಗಳು, ಸಾರ್ವಜನಿಕ ಜಾಗೃತಿ ಉಪನ್ಯಾಸಗಳು, ಸಾಮಾನ್ಯ ಔಷೀಯ ಸಸ್ಯಗಳ ವಿತರಣೆ, ಪಾರಂಪರಿಕ ಸ್ಥಳಗಳಲ್ಲಿ ಎಲ್‍ಇಡಿ ಪ್ರದರ್ಶನ (ವಿಷಯಗಳನ್ನು ಆಯುಷ್ ಸಚಿವಾಲಯ ಒದಗಿಸುವುದು), ಶಾಲಾ ಸಂಪರ್ಕ ಕಾರ್ಯಕ್ರಮಗಳು, ಅಂಗನವಾಡಿಗಳ ಒಳಗೊಳ್ಳುವಿಕೆ, ಆಯುರ್ವೇದ ಪೋಷಣೆಯನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದೊಂದಿಗೆ ಜೋಡಿಸುವುದು, ಆಯುಷ್ ಕ್ಯಾಂಪೇನ್ ಪೋರ್ಟಲ್‍ನಲ್ಲಿ ರಸಪ್ರಶ್ನೆ ಸ್ಪರ್ಧೆಗಳು, ಸಮುದಾಯ ಸೇವಾ ಕೇಂದ್ರಗಳು/ ಸಮುದಾಯ ಆರೋಗ್ಯ ಕೇಂದ್ರಗಳು / ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೊಡಗಿಸಿಕೊಳ್ಳಲಾಗಿತ್ತು.

ಆಯುರ್ವೇದದ ಬಳಕೆಗೆ ಸಂಬಂಸಿದಂತೆ ಆನ್‍ಲೈನ್ ಪೋರ್ಟಲ್‍ಗಳ ಮೂಲಕ ಪ್ರಕೃತಿಮೌಲ್ಯಮಾಪನ ಮತ್ತು ಸ್ವಾಸ್ಥ್ಯ ಮೌಲ್ಯಮಾಪನ, ಕೃಷಿ ವಿಶ್ವವಿದ್ಯಾನಿಲಯಗಳು ಇತ್ಯಾದಿ ಸೇರಿದಂತೆ ಇತರ ಅನುಷ್ಠಾನ ಸಂಸ್ಥೆಗಳ ಮೂಲಕ ಸಸ್ಯಗಳ ಔಷೀಯ ಮತ್ತು ಆರ್ಥಿಕ ಮËಲ್ಯದ ಕುರಿತು ಜಾಗೃತಿಕಾರ್ಯಕ್ರಮಗಳನ್ನು ನಡೆಸಲಾಗಿದೆ. ಚಿತ್ರಕಲೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಯುರ್ವೇದ ಪಾಕವಿಧಾನಗಳ ಜ್ವಾಲೆಯಿಲ್ಲದ ಅಡುಗೆ, ಜಿಂಗಲ್, ಘೋಷಣೆ, ಪೋಸ್ಟರ್ , ಕಿರು ವಿಡಿಯೋ ಚಿತ್ರ ಸ್ಪರ್ಧೆ, ಪ್ರಬಂಧ, ಔಷೀಯ ಸಸ್ಯ ಸಂಬಂತ ಸ್ಪರ್ಧೆ ಮತ್ತು ಚರ್ಚಾ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ, ಗಣ್ಯ ವ್ಯಕ್ತಿಗಳಿಂದ ವೀಡಿಯೊ ಸಂದೇಶಗಳು, ಆಯುರ್ವೇದದ ಮೇಲೆ ಮಾಹಿತಿ ಪತ್ರಗಳ ಪ್ರಸರಣ, ಆಕಾಶವಾಣಿ /ಟಿವಿ ಸಂದೇಶಗಳು , ಕಿರುಚಿತ್ರಗಳು/ ಜಾಹಿರಾತು ಫಲಕಗಳು / ಎಲ್‍ಇಡಿ ಪ್ರದರ್ಶಕಗಳು / ಯೂಟ್ಯೂಬ್ ದೃಶ್ಯ ಸಂದೇಶಗಳು /ಪತ್ರಿಕಾ ಜಾಹೀರಾತುಗಳು, ಆಯುರ್ವೇದದಲ್ಲಿ ರೇಡಿಯೋ ಮತ್ತು ಟಿವಿ ವಿಚಾರವಿನಿಮಯ ಕಾರ್ಯಕ್ರಮಗಳು,

ಆಯುರ್ವೇದ ದಿನದಂದು ಇ-ಕಿಟ್ ಪ್ರಸಾರ, ಒಣ ಭೂಮಿಗೆ ಸೂಕ್ತವಾದ ಔಷೀಧಿಯ ಸಸ್ಯಗಳನ್ನು ಒಳಗೊಂಡಂತೆ (ರಾಜ್ಯವಾರು) ಕೃಷಿಗೆ ಸೂಕ್ತವಾದ ಔಷೀಯ ಸಸ್ಯಗಳ ಪಟ್ಟಿಯ ಪ್ರಸರಣ, ರಾಷ್ಟ್ರೀಯ ಔಷೀಧಿಯ ಸಸ್ಯ ಮಂಡಳಿ ಅಭಿವೃದ್ಧಿಪಡಿಸಿರುವ ಕೃಷಿ-ತಂತ್ರಜ್ಞಾನಗಳ ಪ್ರಸರಣ, ವಿವಿಧ ಪಾಲುದಾರರು, ರೈತ ಉತ್ಪಾದಕರ ಸಂಸ್ಥೆಗಳು, ಇತ್ಯಾದಿಗಳೊಂದಿಗೆ ಔಷೀಯ ಸಸ್ಯಗಳು/ ಇ-ಚರಕ್‍ಗಳ ಮಾರುಕಟ್ಟೆಯ ಅರಿವು ಮೂಡಿಸುವಿಕೆ ಮತ್ತು ರೈತರಲ್ಲಿ ಉತ್ತಮ ಕೃಷಿ ಪದ್ಧತಿ (ಜಿಎಪಿ) ಮತ್ತು ಉತ್ತಮ ಕ್ಷೇತ್ರ ಸಂಗ್ರಹ ಪದ್ಧತಿಗಳ (ಜಿಎಫ್‍ಸಿಪಿ) ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

RELATED ARTICLES

Latest News