Friday, October 25, 2024
Homeರಾಷ್ಟ್ರೀಯ | Nationalಕಾಂಗ್ರೆಸ್‌‍ನಿಂದ ಉಚ್ಚಾಟಿಸಲ್ಪಟ್ಟಿದ್ದ ಬಾಬಾ ಸಿದ್ದಿಕ್‌ ಪುತ್ರ ಜೀಶನ್‌ ಸಿದ್ದಿಕ್‌ ಎನ್‌ಸಿಪಿ ಸೇರ್ಪಡೆ

ಕಾಂಗ್ರೆಸ್‌‍ನಿಂದ ಉಚ್ಚಾಟಿಸಲ್ಪಟ್ಟಿದ್ದ ಬಾಬಾ ಸಿದ್ದಿಕ್‌ ಪುತ್ರ ಜೀಶನ್‌ ಸಿದ್ದಿಕ್‌ ಎನ್‌ಸಿಪಿ ಸೇರ್ಪಡೆ

Baba Siddique's son joins Ajit Pawar's NCP, to contest from Bandra East

ಮುಂಬೈ,ಅ.25- ಇತ್ತೀಚೆಗೆ ಭೀಕರವಾಗಿ ಕಗ್ಗೊಲೆಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್‌ ಅವರ ಪುತ್ರ ಜೀಶನ್‌ ಸಿದ್ದಿಕ್‌ ಅವರು ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣಕ್ಕೆ ಸೇರ್ಪಡೆಯಾದರು.
ಮಹಾರಾಷ್ಟ್ರ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದಲ್ಲಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌‍ನಿಂದ ಉಚ್ಚಾಟಿಸಲಾಗಿತ್ತು.

ಈ ಆರೋಪವನ್ನು ಅವರು ಈ ಹಿಂದೆ ನಿರಾಕರಿಸಿದ್ದರು. ಇದನ್ನು ಭಾವನಾತಕ ಕ್ಷಣ ಎಂದು ಕರೆದ ಜೀಶನ್‌, 2019ರಲ್ಲಿ ಕಾಂಗ್ರೆಸ್‌‍ ಟಿಕೆಟ್‌ನಲ್ಲಿ ಗೆದ್ದಿರುವ ವಂಡ್ರೆ ಪೂರ್ವ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತಕ ದಿನವಾಗಿದೆ. ಈ ಕಠಿಣ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅಜಿತ್‌ ಪವಾರ್‌, ಪ್ರಫುಲ್‌ ಪಟೇಲ್‌, ಸುನೀಲ್‌ ತಟ್ಕರೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ವಂಡ್ರೆ ಪೂರ್ವದಿಂದ ನಾಮನಿರ್ದೇಶನಗೊಂಡಿದ್ದೇನೆ, ಪ್ರೀತಿಯಿಂದ ಮತ್ತು ಎಲ್ಲಾ ಜನರ ಬೆಂಬಲ, ನಾನು ಖಂಡಿತವಾಗಿಯೂ ವಂಡ್ರೆ ಪೂರ್ವವನ್ನು ಮತ್ತೊಮೆ ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ.

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್‌ ಅವರನ್ನು ಅಕ್ಟೋಬರ್‌ 12 ರಂದು ಜೀಶನ್‌ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಗುಂಡು ಹಾರಿಸಲಾಗಿತ್ತು.

ಬಿಷ್ಣೋಯ್‌ ಗ್ಯಾಂಗ್‌ನ ಸದಸ್ಯರೊಬ್ಬರು ಬಾಬಾ ಸಿದ್ದಿಕ್‌ ಅವರ ಹತ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡರು, ಸಲಾನ್‌ ಖಾನ್‌ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಅವರು ಗುರಿಯಾಗಿದ್ದರು ಎಂದು ಹೇಳಿದರು.ಮಹಾ ವಿಕಾಸ್‌‍ ಅಘಾಡಿಯಲ್ಲಿ ಸೀಟು ಹಂಚಿಕೆಯ ಭಾಗವಾಗಿ ವಂಡ್ರೆ ಪೂರ್ವ ಕ್ಷೇತ್ರವು ಕಾಂಗ್ರೆಸ್‌‍ ಮಿತ್ರಪಕ್ಷ ಶಿವಸೇನೆ (ಯುಬಿಟಿ) ಪಾಲಾಗಿದೆ. ಪಕ್ಷವು ಉದ್ಧವ್‌ ಠಾಕ್ರೆ ಅವರ 2ನೇ ಪುತ್ರ ವರುಣ್‌ ಸರ್ದೇಸಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ.

ಜೀಶನ್‌ ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್‌‍ನಲ್ಲಿದ್ದರೂ ಬೆಲೆ ನೀಡಲಿಲ್ಲ. ಕಾಂಗ್ರೆಸ್‌‍ ಮೇಲೆ ಶಿವಸೇನೆ (ಯುಬಿಟಿ) ಒತ್ತಡ ಬರುತ್ತಿದೆ ಎಂದು ಆರೋಪಿಸಿದ್ದಾರೆ. ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ ಮತ್ತು ಹಲವಾರು ಜನರು ಅದನ್ನು ರಾಜಕೀಯವಾಗಿ ತಪ್ಪಾಗಿ ಬಳಸಿಕೊಂಡರು.

ನಾನು ಕಾಂಗ್ರೆಸ್‌‍ ಬಗ್ಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ ಏಕೆಂದರೆ ಅವರು ಯಾವಾಗಲೂ ಶಿವಸೇನೆಯ ಒತ್ತಡಕ್ಕೆ ಒಳಗಾಗುತ್ತಾರೆ ( ಯುಬಿಟಿ) ಕಾಂಗ್ರೆಸ್‌‍ ಯಾವಾಗಲೂ ನನ್ನನ್ನು ಗೌರವಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಎಂವಿಎ ಸದಸ್ಯರು ತಮೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ವಂಡ್ರೆ ಪೂರ್ವ ಕ್ಷೇತ್ರದಿಂದ ಅವರನ್ನು ಮತ್ತೆ ಕಣಕ್ಕಿಳಿಸಲು ಆಸಕ್ತಿ ತೋರಿದ್ದು, ಮೋಸ ಮಾಡುವುದು ಅವರ ಸ್ವಭಾವವಾಗಿದೆ ಎಂದು ಆರೋಪಿಸಿದ್ದಾರೆ. ನವೆಂಬರ್‌ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ನವೆಂಬರ್‌ 2 ರಂದು ಮತ ಎಣಿಕೆ ನಡೆಯಲಿದೆ.

RELATED ARTICLES

Latest News