Monday, May 6, 2024
Homeರಾಷ್ಟ್ರೀಯಕೇರಳ ಸೆಕ್ರೆಟರಿಯೇಟ್‍ಗೆ ಬಿಜೆಪಿ ಮುತ್ತಿಗೆ

ಕೇರಳ ಸೆಕ್ರೆಟರಿಯೇಟ್‍ಗೆ ಬಿಜೆಪಿ ಮುತ್ತಿಗೆ

ತಿರುವನಂತಪುರಂ, ಅ 30 (ಪಿಟಿಐ) -ಎಡ ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಬಿಜೆಪಿ ನೇತೃತ್ವದ ಎನ್‍ಡಿಎ ಪಕ್ಷಗಳ ಸದಸ್ಯರು ಇಂದು ಕೇರಳ ಸೆಕ್ರೆಟರಿಯೇಟ್‍ನ ನಾಲ್ಕು ಗೇಟ್‍ಗಳ ಪೈಕಿ ಮೂರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಬೆಳಗ್ಗೆ 6 ಗಂಟೆಯಿಂದಲೇ ನೂರಾರು ಬಿಜೆಪಿ ಅನುಯಾಯಿಗಳು ಸೆಕ್ರೆಟರಿಯೇಟ್‍ನ ಮೂರು ಗೇಟ್‍ಗಳ ಹೊರಗೆ ಜಮಾಯಿಸಿದ್ದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಕಚೇರಿಗೆ ತೆರಳುವವರು ಮತ್ತು ಶಾಲಾ ಮಕ್ಕಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಆ ಪ್ರದೇಶದಿಂದ ಸಂಚಾರವನ್ನು ಬದಲಾಯಿಸಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೆಕ್ರೆಟರಿಯೇಟ್‍ನಲ್ಲಿ ಕರೆದಿರುವ ಸರ್ವಪಕ್ಷ ಸಭೆ ನಡೆಯುವ ದಿನದಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪರಸ್ತ್ರೀ ವ್ಯಾಮೋಹಕ್ಕೆ ಹೆತ್ತಮಗನನ್ನು ಕೊಂದ ಪಾಪಿ ತಂದೆ

ರಾಜ್ಯದಲ್ಲಿ ಭಾನುವಾರ ಧಾರ್ಮಿಕ ಸಭೆಯೊಂದರಲ್ಲಿ ನಡೆದ ಅನೇಕ ಸ್ಪೋಟಗಳು ಮೂರು ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಸುಮಾರು 50 ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ.

RELATED ARTICLES

Latest News