Sunday, May 12, 2024
Homeರಾಷ್ಟ್ರೀಯಟಿಕೆಟ್ ಕೈತಪ್ಪಿದ್ದಕ್ಕೆ ಭಾವುಕರಾದ ಸಂಸದೆ ಪೂನಂ ಮಹಾಜನ್‌

ಟಿಕೆಟ್ ಕೈತಪ್ಪಿದ್ದಕ್ಕೆ ಭಾವುಕರಾದ ಸಂಸದೆ ಪೂನಂ ಮಹಾಜನ್‌

ಮುಂಬೈ,ಏ.28- ಈ ಬಾರಿ ಬಿಜೆಪಿಯಿಂದ ಟಿಕೇಟ್‌ ನಿರಾಕರಿಸಿದ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ ಪೂನಂ ಮಹಾಜನ್‌, ಕ್ಷೇತ್ರದ ಜನರು 10 ವರ್ಷಗಳ ಕಾಲ ತನ್ನನ್ನು ಕುಟುಂಬದಂತೆ ನೋಡಿಕೊಂಡಿದ್ದು, ಮತ್ತು ಈ ಸಂಬಂಧವು ಯಾವಾಗಲೂ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತಿರುವುದಾಗಿ ಭಾವನಾತ್ಮಕವಾಗಿ ಹೇಳಿದ್ದಾರೆ.

ತಮ್ಮ ಅಧಿ ಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪೂನಂ ಮಹಾಜನ್‌, ವಕೀಲ ಉಜ್ವಲ್‌ ನಿಕಮ್‌ ಅವರಿಗೆ ಟಿಕೆಟ್‌ ನೀಡಿರುವ ಪಕ್ಷದ ತೀರ್ಮಾನಕ್ಕೆ ಎಲ್ಲಿಯೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಿಗೆ ಮುಂಬೈ ಉತ್ತರ ಸೆಂಟ್ರಲ್‌ ಕ್ಷೇತ್ರದ ಜನರಿಗೆ 10 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ನನ್ನ ತಂದೆ ದಿ. ಪ್ರಮೋದ್‌ ಮಹಾಜನ್‌ ಅವರು ತೋರಿಸಿದ `ರಾಷ್ಟ್ರದ ಮೊದಲು’ ಹಾದಿಯಲ್ಲಿ ಮುಂದುವರಿಯಲು ನಾನು ಬಯಸುತ್ತೇನೆ. ಆ ಹಾದಿಯಲ್ಲಿ ನಾನು ಯಾವಾಗಲೂ ನಡೆಯುತ್ತೇನೆ ಎಂದು ಅವರು ಹೇಳಿದರು.ಬಿಜೆಪಿ ಮಹಾಜನ್‌ಗೆ ಟಿಕೆಟ್‌ ನಿರಾಕರಿಸಿದ್ದು, ಮುಂಬೈ ಭಯೋತ್ಪಾದನಾ ದಾಳಿ ಮತ್ತು 1993ರ ಸರಣಿ ಸ್ಫೋಟ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದ ನಿಕಮ್‌ ಅವರನ್ನು ಮುಂಬೈ ಉತ್ತರ ಕೇಂದ್ರ ಸ್ಥಾನದಿಂದ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಕಾಂಗ್ರೆಸ್‌ ನಾಯಕಿ ವರ್ಷಾ ಗಾಯಕ್ವಾಡ್‌ ವಿರುದ್ಧ ನಿಕಮ್‌ ಕಣಕ್ಕಿಳಿದಿದ್ದಾರೆ.

ನನ್ನನ್ನು ಸಂಸದಳನ್ನಾಗಿ ನಡೆಸಿಕೊಳ್ಳದೆ ಮಗಳಂತೆ ಪ್ರೀತಿಯನ್ನು ನೀಡಿದ ಮುಂಬೈ ಉತ್ತರ ಮಧ್ಯದ ಕುಟುಂಬದಂತಹ ಜನರಿಗೆ ನಾನು ಋಣಿಯಾಗಿದ್ದೇನೆ ತನ್ನ ಜೀವನದ ಪ್ರತಿಯೊಂದು ಕ್ಷಣವನ್ನು ರಾಷ್ಟ್ರ ಸೇವೆಗೆ ಮೀಸಲಿಡುವುದಾಗಿ ಮಹಾಜನ್‌ ಹೇಳಿದ್ದಾರೆ.

ಬಿಜೆಪಿ ಈ ಬಾರಿ ಮುಂಬೈನಲ್ಲಿ ತನ್ನ ಎಲ್ಲಾ ಮೂರು ಹಾಲಿ ಸಂಸದರನ್ನು ಕೈಬಿಟ್ಟಿದೆ. ಮುಂಬೈ ಉತ್ತರ ಕ್ಷೇತ್ರದಲ್ಲಿ ಗೋಪಾಲ್‌ ಶೆಟ್ಟಿ ಬದಲಿಗೆ ಪೀಯೂಷ್‌ ಗೋಯಲ್‌ ಮತ್ತು ಮುಂಬೈ ಈಶಾನ್ಯ ಕ್ಷೇತ್ರದಲ್ಲಿ ಮನೋಜ್‌ ಕೋಟಕ್‌ ಅವರ ಬದಲಾಗಿ ಮಿಹಿರ್‌ ಕೊಟೆಚಾ ಅವರನ್ನು ನೇಮಿಸಲಾಗಿದೆ.

2019 ರಲ್ಲಿ, ಮುಂಬೈನ ಒಟ್ಟು ಆರು ಸ್ಥಾನಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಶಿವಸೇನೆ (ಅವಿಭಜಿತ) ತಲಾ ಮೂರು ಸ್ಥಾನಗಳನ್ನು ಗೆದ್ದಿದ್ದವು. ಮುಂಬೈ ಸೌತ್‌, ಮುಂಬೈ ಸೌತ್‌ ಸೆಂಟ್ರಲ್‌ ಮತ್ತು ಮುಂಬೈ ನಾರ್ತ್‌ ವೆಸ್‌್ಟ ಅನ್ನು ಶಿವಸೇನೆ ಗೆದ್ದಿತ್ತು.ಪಕ್ಷದ ವಿಭಜನೆಯ ನಂತರ, ಮುಂಬೈ ದಕ್ಷಿಣ ಮಧ್ಯ ಸಂಸದ ರಾಹುಲ್‌ ಶೆವಾಲೆ ಮತ್ತು ಮುಂಬೈ ವಾಯವ್ಯ ಸಂಸದ ಗಜಾನನ ಕೀರ್ತಿಕರ್‌ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯತ್ತ ವಾಲಿದರು.

ಶೆವಾಲೆ ಅವರನ್ನು ಮಾತ್ರ ಶಿಂಧೆ ನೇತೃತ್ವದ ಶಿವಸೇನೆ ಮರುನಾಮಕರಣ ಮಾಡಿದೆ ಮತ್ತು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮುಂಬೈ ದಕ್ಷಿಣದಿಂದ ಅರವಿಂದ್‌ ಸಾವಂತ್‌ ಅವರನ್ನು ಮರುನಾಮಕರಣ ಮಾಡಿದೆ.

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮುಂಬೈ ದಕ್ಷಿಣ ಮತ್ತು ಮುಂಬೈ ವಾಯವ್ಯ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.ಮುಂಬೈ ಉತ್ತರ ಕ್ಷೇತ್ರದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಮುಂಬೈನ ಎಲ್ಲಾ ಆರು ಲೋಕಸಭಾ ಕ್ಷೇತ್ರಗಳಿಗೆ ಮೇ 2 ರಂದು ಮತದಾನ ನಡೆಯಲಿದೆ.

RELATED ARTICLES

Latest News