Friday, May 17, 2024
Homeರಾಜಕೀಯ'ಕಲೆಕ್ಷನ್ ಮಾಸ್ಟರ್' ಸಿಎಂ ಸಿದ್ದರಾಮಯ್ಯ : ಬಿಜೆಪಿ ವಾಗ್ದಾಳಿ

‘ಕಲೆಕ್ಷನ್ ಮಾಸ್ಟರ್’ ಸಿಎಂ ಸಿದ್ದರಾಮಯ್ಯ : ಬಿಜೆಪಿ ವಾಗ್ದಾಳಿ

ಬೆಂಗಳೂರು, ಅ.16- ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ ಗುತ್ತಿಗೆದಾರರು ಹಾಗೂ ಬಿಲ್ಡರ್ಸ್ ಬಳಿ 100 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿದ್ದಾರೆ.

ಇದೀಗ ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ ಎಂದು ಗಂಭೀರ ಆರೋಪ ಮಾಡಿದೆ. ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯ್ಯಲ್ಲೊಂದು ಬ್ರೀಫ್‍ಕೇಸ್ ಹಿಡಿದುಕೊಂಡಿದ್ದು, ಅದರ ಮುಂಭಾಗದಲ್ಲಿ ಕಲೆಕ್ಷನ್ ಮಾಸ್ಟರ್ ಎಂದು ದೂರಿದೆ.

ಗಾಜಾದಲ್ಲಿ ಗಾಯಾಳುಗಳ ನರಳಾಟ, ಚಿಕಿತ್ಸೆ ಸಿಗದೆ ಪರದಾಟ

ಮತ್ತೊಂದು ಪೋಸ್ಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲ ಹಂತದ ಒಂದು ಸಾವಿರ ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು ಎಂದು ಪ್ರಶ್ನಿಸಿದೆ. ತೆಲಂಗಾಣ ಕಾಂಗ್ರೆಸ್‍ಗೆ 300 ಕೋಟಿ, ಮಿಜೊರಾಂ ಕಾಂಗ್ರೆಸ್‍ಗೆ 100 ಕೋಟಿ, ಛತ್ತೀಸ್‍ಗಡ ಕಾಂಗ್ರೆಸ್‍ಗೆ 200 ಕೋಟಿ, ರಾಜಸ್ಥಾನ ಕಾಂಗ್ರೆಸ್‍ಗೆ 200 ಕೋಟಿ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್‍ಗೆ 200 ಕೋಟಿ ನೀಡಿರಬಹುದೇ ಎಂದು ಪ್ರಶ್ನೆ ಮಾಡಿದೆ.

ಕಮಿಷನ್ ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿಬಿದ್ದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಕೃಷ್ಣಪ್ಪ ಅವರ ಫ್ಲಾಟ್‍ನಲ್ಲಿ ಸಂಗ್ರಹಿಸಿಟ್ಟಿದ್ದ 45 ಕೋಟಿ ರೂ. ಹಣವನ್ನು ಐಟಿ ವಶಪಡಿಸಿಕೊಂಡಿದೆ.

ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ಹರಿಹಾಯ್ದ ನಿಕ್ಕಿ ಹ್ಯಾಲೆ

ಮೂರು ದಿನಗಳ ಹಿಂದೆಯಷ್ಟೇ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಇದೇ ಐಟಿ ತಂಡ 42 ಕೋಟಿ ರೂ. ಹಣವನ್ನು ಪತ್ತೆಹಚ್ಚಿ ಜಪ್ತಿ ಮಾಡಿಕೊಂಡಿದೆ. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಐಟಿ ದಾಳಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ ಸಮರಕ್ಕೆ ನಾಂದಿ ಹಾಡಿದೆ.

RELATED ARTICLES

Latest News