ಬೆಂಗಳೂರು, ಜು.5– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜು.7 ಸೋಮವಾರದಿಂದ ಹೊಸ ಮಾರ್ಗಗಳಲ್ಲಿ ಬಸ್ ಸೇವೆಗಳನ್ನು ಆರಂಭಿಸಲಿದೆ.
ಕೆಂಗೇರಿ ಟಿಟಿಎಂಸಿ ಬಸ್ ನಿಲ್ದಾಣದಿಂದ ಮಾಗಡಿ ಬಸ್ ನಿಲ್ದಾಣದವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್ ಸೇವೆಯನ್ನು ಆರಂಭಿಸಲಿದೆ. ಈ ಬಸ್ಗಳು ಕೊಮ್ಮಘಟ್ಟ, ಸೂಲಿಕೆರೆ, ಗುಲಗಂಜನಹಳ್ಳಿ ಕ್ರಾಸ್, ತಾವರೆಕೆರೆ, ಚೋಳನಾಯಕನಹಳ್ಳಿ, ಶಾನು ಭೋಗನಹಳ್ಳಿ, ತಗಚಗುಪ್ಪೆ, ರಂಗನಾಥಪುರ ಮಾರ್ಗಗಳಲ್ಲಿ ಸಂಚರಿಸಲಿದೆ.
238-ವಿಬಿ ಮಾರ್ಗ ಸಂಖ್ಯೆಯ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಉತ್ಕಾರ್ ನಿಲ್ದಾಣದವರೆಗೆ ಸಂಚರಿಸಲಿವೆ. ಈ ಬಸ್ಗಳು ಸುಜಾತ ಟಾಕೀಸ್, ವಿಜಯನಗರ, ಚಂದ್ರಾಲೇಔಟ್, ನಾಗರಭಾವಿ ವೃತ್ತ, ಐಟಿಐ ಲೇಔಟ್, ಮುದ್ದಯ್ಯನ ಪಾಳ್ಯ, ಆರ್ಟಿಓ ಆಫೀಸ್, ವಿಶ್ವೇಶ್ವರಯ್ಯ ಲೇ ಔಟ್, ಉಪ್ಯಾರ್ ಲೇಔಟ್ರೆಗೆ ಸಂಚರಿಸಲಿದೆ.
ಬೆಳಿಗ್ಗೆ 5.50ರಿಂದ ರಾತ್ರಿ 8 ಗಂಟೆಯವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್ಗಳು ಸಂಚರಿಸಲಿವೆ. 238-ವಿಬಿ ಮಾರ್ಗ ಸಂಖ್ಯೆಯ ಬಸ್ಗಳು 5-55ರಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲಿವೆ.
- ದೆಹಲಿ ಸಿಎಂ ರೇಖಾ ಗುಪ್ತಾಗೆ ಝಡ್+ ಭದ್ರತೆ
- ಏರ್ಶೋಗೆ ಅನುಮತಿ ನೀಡಿದ ರಾಜನಾಥ್ಸಿಂಗ್ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
- ಮಾಜಿ ಪ್ರಧಾನಿ ಹೆಚ್ಡಿಡಿ ನಿವಾಸಕ್ಕೆ ಎನ್ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ಭೇಟಿ
- ಐಸಿಸ್ ಉಗ್ರರಿಗೆ ವರದಾನವಾದ ಸಿರಿಯಾ, ಆಫ್ರಿಕಾ ಅಸ್ಥಿರತೆ
- ಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ -ಈದ್ ಮಿಲಾದ್ ಹಬ್ಬ ಆಚರಿಸಿ : ಡಿಸಿಪಿ ಸಜೀತ್