Saturday, July 27, 2024
Homeರಾಜ್ಯಸುಂದರ, ಸ್ವಚ್ಛ ನಗರಕ್ಕಾಗಿ ಬ್ರ್ಯಾಂಡ್ ಬೆಂಗಳೂರು ಪ್ರಯಾಣ ಆರಂಭ ಆರಂಭಿಸಿದ್ದೇವೆ : ಸಿಎಂ

ಸುಂದರ, ಸ್ವಚ್ಛ ನಗರಕ್ಕಾಗಿ ಬ್ರ್ಯಾಂಡ್ ಬೆಂಗಳೂರು ಪ್ರಯಾಣ ಆರಂಭ ಆರಂಭಿಸಿದ್ದೇವೆ : ಸಿಎಂ

ಬೆಂಗಳೂರು,ಫೆ.17- ಸುಂದರ, ಹಸಿರು ಮತ್ತು ಸ್ವಚ್ಛ ನಗರಕ್ಕಾಗಿ ಬ್ರ್ಯಾಂಡ್ ಬೆಂಗಳೂರು ಪ್ರಯಾಣವನ್ನು ತಮ್ಮ ಸರ್ಕಾರ ಈಗಾಗಲೇ ಆರಂಭಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ದಿ ಪ್ರಿಂಟರ್ಸ್ (ಮೈಸೂರು) ಆಯೋಜಿಸಿದ್ದ ಬೆಂಗಳೂರು 2040 ವಿಷನ್‍ನ 3ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಮ್ಮೆಲ್ಲರ ಹೆಮ್ಮೆಯ ನಗರ. ಜಾಗತಿಕವಾಗಿ ತಾಂತ್ರಿಕತೆಯಿಂದ ಉನ್ನತ ಸ್ಥಾನದಲ್ಲಿದೆ.

ಇಲ್ಲಿಗೆ ನಾವು ಬಹುಮುಖ್ಯವಾದ ಆದ್ಯತೆ ನೀಡಬೇಕಿದೆ. ಅಭಿವೃದ್ಧಿಗೆ ಒತ್ತು ನೀಡುವ ಜೊತೆಗೆ ಸಂಶೋಧನೆ, ವೈವಿಧ್ಯತೆ, ಪ್ರಗತಿಗೆ ಬೆಂಬಲವಾಗಿರಬೇಕು ಎಂದು ಹೇಳಿದರು. ಬೆಂಗಳೂರಿನ ಮೂಲಸೌಲಭ್ಯ, ಜೀವನ ಗುಣಮಟ್ಟ, ನಾಗರಿಕ ಸೌಲಭ್ಯಗಳಲ್ಲಿರುವ ಸವಾಲುಗಳನ್ನು ನಿಭಾಯಿಸಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಆರ್ಥಿಕ ಮುಂಚೂಣಿಯಾಗಿರುವ ಮಹಾನಗರಿ ಈಗ ಜಾಗತಿಕವಾಗಿ ಆರ್ಥಿಕ ಶಕ್ತಿ ಮನೆಯಾಗಿದೆ. ಅದಕ್ಕಾಗಿ ಉತ್ಕøಷ್ಠ ದರ್ಜೆಯ ಮೂಲಸೌಲಭ್ಯ ಕಲ್ಪಿಸುವುದು ಅನಿವಾರ್ಯ ಎಂದು ಹೇಳಿದರು.

ಬೆಂಗಳೂರಿನ ಸಂಚಾರದ ಸಮಸ್ಯೆಯ ಬಗ್ಗೆ ಎಲ್ಲರಿಗೂ ಅರಿವಿದೆ. ಇದನ್ನು ಸರಿಪಡಿಸಲು ಬಹು ಆಯಾಮಗಳಡಿ ಶ್ರಮರಹಿತವಾಗಿ ಕೆಲಸ ಮಾಡುತ್ತಿದ್ದೇವೆ. ನಿನ್ನೆ ಮಂಡಿಸಲಾದ ರಾಜ್ಯಸರ್ಕಾರದ ಆಯವ್ಯಯದಲ್ಲಿ ಬೆಂಗಳೂರಿನ ಗಂಭೀರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೆಟ್ರೋ ಮಾರ್ಗಗಳು, ರಸ್ತೆಗಳು, ಸುಲಲಿತ ಸಂಚಾರ ವ್ಯವಸ್ಥೆ, ಕೈಗೆಟಕುವ ವೈದ್ಯಕೀಯ ಸೇವೆ, ಶಿಕ್ಷಣ, ವಸತಿ ಹಾಗೂ ನಗರ ಪ್ರದೇಶದ ಬಡಜನರ ಅಗತ್ಯತೆಗಳನ್ನು ಪರಿಹರಿಸಲು ಒತ್ತು ನೀಡಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಟ್ಟು ಶಾಂತಿ ಪಾಲನೆ ಮಾಡಲಾಗುತ್ತಿದೆ. ಸುರಕ್ಷತೆಯ ಖಾತ್ರಿ ನಮ್ಮ ಆದ್ಯತೆ. ಪ್ರತಿಯೊಬ್ಬ ನಾಗರಿಕನಿಗೂ ಸಮಗ್ರ ಹಾಗೂ ಉತ್ತಮ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತೇವೆ ಎಂದಿದ್ದಾರೆ.
ಬೆಂಗಳೂರಿನ ಹೊರವಲಯದ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ, ಬಿಡದಿ ಉಪನಗರಗಳನ್ನು ಅಭಿವೃದ್ಧಿಪಡಿಸಿ ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುವುದು. ಸಾರ್ವಜನಿಕ ಆರೋಗ್ಯ ನಮ್ಮ ಪ್ರಥಮ ಆದ್ಯತೆಯಾಗಿದೆ. ಇದಕ್ಕಾಗಿ ಸಾಕಷ್ಟು ಅನುದಾನ ಒದಗಿಸಲಾಗಿದೆ. ಇಂದಿರಾ ಕ್ಯಾಂಟೀನ್‍ಗಳು ನಗರ ಪ್ರದೇಶದ ಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಹಳೇ ಹುಬ್ಬಳ್ಳಿ ಗಲಭೆ ಆರೋಪಿಗಳ ಬಿಡುಗಡೆಗೆ ಕಾಂಗ್ರೆಸ್ ಸಹಕರಿಸಿದೆ : ಪ್ರಹ್ಲಾದ್ ಜೋಶಿ

ವಸತಿ ಯೋಜನೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ಆಸ್ತಿಗಳ ಪರಭಾರೆಯ ಮೂಲಕ ಬಡವರ ಮನೆಗಳ ನಿರ್ಮಾಣಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಣದ ಅವಕಾಶಗಳ ಬಗ್ಗೆ ಚಿಂತನೆ ನಡೆಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಕಾರ್ಪರೇಟ್ ಸಂಸ್ಥೆಗಳು ಹಾಗೂ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಮಣಿಪಾಲ್ ಆಸ್ಪತ್ರೆಯ ಡಾ.ಸುದರ್ಶನ್ ಬಲ್ಲಾಳ್, ದಿ ಪ್ರಿಂಟರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್‍ಕುಮಾರ್, ನಿರ್ದೇಶಕರಾದ ಕೆ.ಎನ್.ಶಾಂತಕುಮಾರ್, ಡೆಕ್ಕನ್ ಹೆರಾಲ್ಡ್‍ನ ಸೀತಾರಾಮನ್ ಶಂಕರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News