ಹಾಸನ,ಸೆ.21- ಪಿತೃ ಪಕ್ಷಕ್ಕೆ ಅಕ್ಕನ ಮನೆಗೆ ಬಂದಿದ್ದ ಸಹೋದರ ಚಿನ್ನದ ಸರವನ್ನು ಎಗರಿಸಿರುವ ಘಟನೆ ಸಕಲೇಶಪುರ ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ ನಡೆದಿದೆ. ಮಾನಸ ಚಿನ್ನದ ಸರ ಕಳೆದುಕೊಂಡವರು.
ಪಿತೃ ಪಕ್ಷದ ಹಬ್ಬದ ಊಟಕ್ಕೆಂದು ಒಡಹುಟ್ಟಿದ ತಮ್ಮ ಜೀವನ್ನನ್ನು ಕರೆದಿದ್ದಳು. ಅಕ್ಕನೆ ಮನೆಗೆ ಸ್ನೇಹಿತ ಪ್ರಶಾಂತ್ ಜೊತೆ ಬಂದಿದ್ದ ಜೀವನ್ ಮನೆಯಲ್ಲಿ ಎಲ್ಲರೂ ಬ್ಯುಸಿಯಾಗಿರುವುದನ್ನು ಗಮನಿಸಿ ಅಕ್ಕನ ಬ್ಯಾಗ್ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿದ್ದ.
ನಂತರ ಬೆಂಗಳೂರಿನ ಸ್ನೇಹಿತನೊಂದಿಗೆ ಸೇರಿಕೊಂಡು ಚಿನ್ನದ ಸರ ಮಾರಾಟ ಮಾಡಿದ್ದರು. ಇದರಿಂದ ಬಂದ ಹಣದಿಂದ ಸ್ನೇಹಿತರು ಮೋಜು ಮಸ್ತಿ ಮಾಡಿದ್ದರು.ಚಿನ್ನದ ಸರ ಕಾಣದಿದ್ದಾಗ ಅನುಮಾನಗೊಂಡ ಮಾನಸ ಸಹೋದರ ಹಾಗೂ ಆತನ ಸ್ನೇಹಿತನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜೀವನ್ ಹಾಗೂ ಪ್ರಶಾಂತ್ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಸರಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡು ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ್ದರು.ಮಾನಸ ಅವರಿಗೆ ಪೊಲೀಸರು ಸರವನ್ನು ಹಸ್ತಾಂತರಿಸಿದ ನಂತರ ಜೀವನ್ ಆಕೆಯ ಸಹೋದರನಾಗಿದ್ದು ಜೊತೆಗೆ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಬುದ್ದಿವಾದ ಹೇಳಿ ಕಳುಹಿಸಲಾಗಿದೆ.