ಬೆಂಗಳೂರು,ಜೂ.20- ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಮಯೂರ ಸಭಾಂಗಣದಲ್ಲಿ ಜು.2 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ನಂದಿಬೆಟ್ಟದಲ್ಲಿ ಸಂಪುಟ ಸಭೆ ನಡೆಸಲು 2ನೇ ಬಾರಿಗೆ ಸಮಯ ಮತ್ತು ಸ್ಥಳ ನಿಗದಿಪಡಿಸಿದಂತಾಗಿದೆ.
ಕಳೆದ ಮೇ ತಿಂಗಳಿನಲ್ಲಿಯೇ ಸಚಿವ ಸಂಪುಟ ಸಭೆ ನಡೆಸುವುದಾಗಿ ಘೋಷಿಸಿದ್ದ ರಾಜ್ಯಸರ್ಕಾರ ಜೂ.19 ರಂದು ಸಮಯ ನಿಗದಿಪಡಿಸಿತ್ತು. ಆದರೆ ನಿನ್ನೆ ಅಲ್ಲಿ ನಡೆಯಬೇಕಿದ್ದ ಸಭೆಯನ್ನು ದಿಢೀರ್ ರದ್ದುಪಡಿಸಿ ಬೆಂಗಳೂರಿನ ವಿಧಾನಸೌಧದಲ್ಲಿಯೇ ಆಯೋಜಿಸಲಾಗಿತ್ತು. ಈಗ ಮತ್ತೊಮೆ ನಂದಿಬೆಟ್ಟದಲ್ಲೇ ಸಭೆ ನಡೆಸುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ.
ನಂದಿಬೆಟ್ಟದಲ್ಲಿ ಸಭೆ ಎಂಬ ಕಾರಣಕ್ಕೆ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಮುಖ ಯೋಜನೆಗಳನ್ನು ನಂದಿಬೆಟ್ಟದ ಸಭೆ ಬಳಿಕ ಘೋಷಣೆ ಮಾಡುವ ಪೂರ್ವಸಿದ್ಧತೆಗಳಾಗಿದ್ದವು. ಆದರೆ ಕೊನೆಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಕಾರಣಕ್ಕಾಗಿ ಸಭೆ ರದ್ದುಗೊಳಿಸಲಾಗಿತ್ತು.
ಎತ್ತಿನಹೊಳೆ ಸೇರಿದಂತೆ ಬಾಕಿ ಇರುವ ಹಲವು ಯೋಜನೆಗಳಿಗೆ ಗಡುವು ನಿಗದಿಪಡಿಸಿ ಈಗ ಮತ್ತೊಮೆ ಘೋಷಣೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
- ದ್ವೇಷ ರಾಜಕಾರಣಕ್ಕೆ ಕಾಲವೇ ಉತ್ತರ ನೀಡಲಿದೆ : ಹೆಚ್ಡಿಕೆ
- ಲಿವಿಂಗ್ ಟು ಗೆದರ್ ಸಹವಾಸ : ಮಗುವಿಗೆ ಜನ ನೀಡಿ ಪ್ರಾಣ ಬಿಟ್ಟ ಯುವತಿ
- ಮಾವಿಗೆ ಬೆಂಬೆಲ ಬೆಲೆ ಘೋಷಿಸಲು ಸಚಿವ ಕೆ.ಹೆಚ್.ಮುನಿಯಪ್ಪ ಒತ್ತಾಯ
- ವ್ಯಾಪಕ ಚರ್ಚೆ ಕಾರಣವಾಯ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್ ರಾಜೀನಾಮೆ
- ಜಮೀರ್ ರಾಜೀನಾಮೆಗೆ ಶರವಣ ಆಗ್ರಹ